Friday, October 31, 2025
HomeUncategorizedBREKING : ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಇಲ್ಲಿದೆ ಪುರಸ್ಕೃತರ ಪಟ್ಟಿ

BREKING : ರಾಜ್ಯೋತ್ಸವ ಪ್ರಶಸ್ತಿ ಪ್ರಕಟ, ಇಲ್ಲಿದೆ ಪುರಸ್ಕೃತರ ಪಟ್ಟಿ

ಬೆಂಗಳೂರು- ಹಿರಿಯ ಸ್ವತಂತ್ರ ಹೋರಾಟಗಾರ ಕೋಣಂದೂರು ಲಿಂಗಪ್ಪ, ಚಿತ್ರನಟ ,ಪ್ರಕಾಶ್ ರಾಜ್,ಹಿರಿಯ ಪತ್ರಕರ್ತ ಮೈಸೂರಿನ ಅಂಶಿ ಪ್ರಸನ್ನ ಕುಮಾರ್ , ಸಾಹಿತಿಗಳಾದ ರಾಜೇಂದ್ರ ಚಿನ್ನಿ, ರಹಮತ ತರೀಕೆರೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ
ಸಾಧಕರಿಗೆ ಪ್ರಸಕ್ತ 2025 ನೇ ಸಾಲಿನ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರದ 70 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.ಪ್ರಶಸ್ತಿಯು ಐದು ಲಕ್ಷ ನಗದು ಬಹುಮಾನ ಹಾಗೂ 25 ಗ್ರಾಂ ಚಿನ್ನದ ಪದಕವನ್ನು ಒಳಗೊಂಡಿರುತ್ತದೆ.ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ 50 ಸದಸ್ಯರಿರುವ ಆಯ್ಕೆ ಸಲಹಾ ಸಮಿತಿಯನ್ನು ರಾಜ್ಯ ಸರ್ಕಾರ ರಚನೆ ಮಾಡಿತ್ತು.

- Advertisement -

ಇವುಗಳನ್ನೆಲ್ಲಾ ಕೂಲಂಕುಷವಾಗಿ ಪರಿಶೀಲನೆ ಮಾಡಿ ಅರ್ಹರ ಆಯ್ಕೆ ಮಾಡಲಾಗಿದೆ ಎಂದು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪ್ರಶಸ್ತಿಯಲ್ಲಿ ಪ್ರತಿಯೊಂದು ಜಿಲ್ಲೆಗೂ ಪ್ರಾತಿನಿದ್ಯ ನೀಡಲಾಗಿದೆ ಹಾಗೂ ಸಾಮಾಜಿಕ ನ್ಯಾಯವನ್ನು ಕಾಪಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮೊದಲ‌ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಕರೆಯದೆ ಒಟ್ಟು 70 ಮಂದಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಈ ಪೈಕಿ‌ ಕೆಲವರು ಸ್ವಯಂ ಮನವಿ ನೀಡಿದ್ದರು. ಅಂತಹವರು ಪ್ರಶಸ್ತಿಗೆ ಅರ್ಹರಿದ್ದ ಕಾರಣ‌‌ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿ ನೀಡಿಕೆಯಲ್ಲಿ ಜಿಲ್ಲಾವಾರು, ಸಾಮಾಜಿಕ ಪರಿಪಾಲನೆಯಡಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.‌ ಆಯ್ಕೆ ಸಲಹಾ ಸಮಿತಿ ಸದಸ್ಯರು ಶಿಫಾರಸ್ಸು ಮಾಡಿದ್ದವರನ್ನು ಬಹುತೇಕ‌‌ ಆಯ್ಕೆ ಮಾಡಲಾಗಿದ್ದು,‌ ನಾಲ್ಕೈದು‌ ಬಾರಿ‌ ಸಭೆ ನಡೆಸಿದ ಸದಸ್ಯರು ಅರ್ಹರನ್ನು ‌ಆಯ್ಕೆ ಮಾಡಲು ಸಹಕರಿಸಿದ್ದಕ್ಕೆ‌ ಧನ್ಯವಾದಗಳನ್ನು ಈ‌ ಮೂಲಕ‌ ತಿಳಿಸುತ್ತೇನೆ ಎಂದರು.

ಪ್ರಶಸ್ತಿ ನೀಡಿಕೆ‌ ಇತಿಹಾಸದಲ್ಲೇ ಮೊದಲ ಬಾರಿಗೆ ಸಮಗಾರ ಹರಳಯ್ಯ ಸಮುದಾಯಕ್ಕೆ ಸೇರಿದ ಇಬ್ಬರು ಪ್ರತಿಭೆಗಳನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಮೊದಲೇ ನಿರ್ಧರಿಸಿದಂತೆ‌ ಈ ಬಾರಿ‌ ಯಾವುದೇ ಸಂಘ-ಸಂಸ್ಥೆಗಳಿಗೆ ಪ್ರಶಸ್ತಿ ನೀಡಿಲ್ಲ. 13 ಮಂದಿ‌ ಮಹಿಳೆಯರಿಗೆ ಈ ಬಾರಿ ಪ್ರಶಸ್ತಿ ಆಯ್ಕೆ‌‌ ಮಾಡಲಾಗಿದೆ.ನ.1ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು
ಹೇಳಿದರು

ಪ್ರಶಸ್ತಿ ವಿಜೇತರ ಪಟ್ಟಿ

ಸಾಹಿತ್ಯ
ಪ್ರೊ. ರಾಜೇಂದ್ರ ಚೆನ್ನಿ ಶಿವಮೊಗ್ಗ
ಶ್ರೀ ತುಂಬಾಡಿ ರಾಮಯ್ಯ ತುಮಕೂರು
ಪ್ರೊ ಅರ್ ಸುನಂದಮ್ಮ ಚಿಕ್ಕಬಳ್ಳಾಪುರ
ಡಾ.ಎಚ್.ಎಲ್ ಪುಷ್ಪ ತುಮಕೂರು
ಶ್ರೀ ರಹಮತ್ ತರೀಕೆರೆ ಚಿಕ್ಕಮಗಳೂರು
ಶ್ರೀ ಹ.ಮ. ಪೂಜಾರ ವಿಜಯಪುರ

ಜಾನಪದ
ಶ್ರೀ ಬಸಪ್ಪ ಭರಮಪ್ಪ ಚೌಡ್ಕಿ
ಕೊಪ್ಪಳ
ಶ್ರೀ ಬಿ. ಟಾಕಪ್ಪ ಕಣ್ಣೂರು
ಶಿವಮೊಗ್ಗ
ಶ್ರೀ ಸನ್ನಿಂಗಪ್ಪ ಸತ್ತೆಪ್ಪ ಮುಶೆನ್ನಗೋಳ
ಬೆಳಗಾವಿ
ಶ್ರೀ ಹನುಮಂತಪ್ಪ, ಮಾರಪ್ಪ, ಚೀಳಂಗಿ
ಚಿತ್ರದುರ್ಗ
ಶ್ರೀ ಎಂ. ತೋಪಣ್ಣ
ಕೋಲಾರ
ಶ್ರೀ ಸೋಮಣ್ಣ ದುಂಡಪ್ಪ ಧನಗೊಂಡ
ವಿಜಯಪುರ
ಶ್ರೀಮತಿ ಸಿಂಧು ಗುಜರನ್
ದಕ್ಷಿಣ ಕನ್ನಡ
ಶ್ರೀ ಎಲ್. ಮಹದೇವಪ್ಪ ಉಡಿಗಾಲ
ಮೈಸೂರು

ಸಂಗೀತ
ಶ್ರೀ ದೇವೆಂದ್ರಕುಮಾರ ಪತ್ತಾರ್
ಕೊಪ್ಪಳ
ಶ್ರೀ ಮಡಿವಾಳಯ್ಯ ಸಾಲಿ
ಬೀದರ್
ನೃತ್ಯ
ಪ್ರೊ. ಕೆ. ರಾಮಮೂರ್ತಿ ರಾವ್
ಮೈಸೂರು

ಚಲನಚಿತ್ರ /ಕಿರುತೆರೆ
ಶ್ರೀ ಪ್ರಕಾಶ್ ರಾಜ್
ದಕ್ಷಿಣ ಕನ್ನಡ
ಶ್ರೀಮತಿ ವಿಜಯಲಕ್ಷ್ಮೀ ಸಿಂಗ್
ಕೊಡಗು

ಆಡಳಿತ
ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ)
ಬೆಂಗಳೂರು ದಕ್ಷಿಣ (ರಾಮನಗರ)

ಆಡಳಿತ
ಶ್ರೀ ಹೆಚ್. ಸಿದ್ದಯ್ಯ ಭಾ.ಆ.ಸೇ(ನಿ)
ಬೆಂಗಳೂರು ದಕ್ಷಿಣ (ರಾಮನಗರ)
ವೈದ್ಯಕೀಯ
ಡಾ. ಆಲಮ್ಮ ಮಾರಣ್ಣ
ತುಮಕೂರು
ಡಾ. ಜಯರಂಗನಾಥ್
ಬೆಂಗಳೂರು ಗ್ರಾಮಾಂತರ

ಸಮಾಜ ಸೇವೆ
ಶ್ರೀಮತಿ ಸೂಲಗಿತ್ತಿ ಈರಮ್ಮ
ವಿಜಯನಗರ
ಶ್ರೀಮತಿ ಫಕ್ಕೀರಿ
ಬೆಂಗಳೂರು ಗ್ರಾಮಾಂತರ
ಶ್ರೀಮತಿ ಕೋರಿನ್ ಆಂಟೊನಿಯಟ್ ರಸ್ಕೀನಾ
ದಕ್ಷಿಣ ಕನ್ನಡ
ಡಾ. ಎನ್. ಸೀತಾರಾಮ ಶೆಟ್ಟಿ
ಉಡುಪಿ
ಶ್ರೀ ಕೋಣಂದೂರು ಲಿಂಗಪ್ಪ
ಶಿವಮೊಗ್ಗ

ಶ್ರೀ ಉಮೇಶ ಪಂಬದ ದಕ್ಷಿಣ ಕನ್ನಡ
ಡಾ. ರವೀಂದ್ರ ಕೋರಿಶೆಟ್ಟಿರ್ ಧಾರವಾಡ
ಶ್ರೀ ಕೆ.ದಿನೇಶ್ ಬೆಂಗಳೂರು
ಶ್ರೀ ಶಾಂತರಾಜು ತುಮಕೂರು
ಶ್ರೀ ಜಾಫರ್ ಮೊಹಿಯುದ್ದೀನ್ ರಾಯಚೂರು
ಶ್ರೀ ಪೆನ್ನ ಓಬಳಯ್ಯ ಬೆಂಗಳೂರು ಗ್ರಾಮಾಂತರ
ಶ್ರೀ ಶಾಂತಿ ಬಾಯಿ ಬಳ್ಳಾರಿ
ಶ್ರೀ ಪುಂಡಲೀಕ ಶಾಸ್ತ್ರೀ(ಬುಡಬುಡಕೆ) ಬೆಳಗಾವಿ

ಹೊರನಾಡು/ ಹೊರದೇಶ
ಶ್ರೀ ಜಕರಿಯ ಬಜಪೆ (ಸೌದಿ)
ಹೊರನಾಡು/ ಹೊರದೇಶ
ಶ್ರೀ ಪಿ ವಿ ಶೆಟ್ಟಿ (ಮುಂಬೈ)
ಹೊರನಾಡು/ ಹೊರದೇಶ

ಪರಿಸರ
ಶ್ರೀ ರಾಮೇಗೌಡ
ಚಾಮರಾಜನಗರ
ಶ್ರೀ ಮಲ್ಲಿಕಾರ್ಜುನ ನಿಂಗಪ್ಪ
ಯಾದಗಿರಿ

ಕೃಷಿ
ಡಾ.ಎಸ್.ವಿ.ಹಿತ್ತಲಮನಿ
ಹಾವೇರಿ
ಶ್ರೀ ಎಂ ಸಿ ರಂಗಸ್ವಾಮಿ
ಹಾಸನ

ಮಾಧ್ಯಮ
ಶ್ರೀ ಕೆ.ಸುಬ್ರಮಣ್ಯ
ಬೆಂಗಳೂರು
ಶ್ರೀ ಅಂಶಿ ಪ್ರಸನ್ನಕುಮಾರ್
ಮೈಸೂರು
ಶ್ರೀ ಬಿ.ಎಂ ಹನೀಫ್
ದಕ್ಷಿಣ ಕನ್ನಡ
ಶ್ರೀ ಎಂ ಸಿದ್ಧರಾಜು
ಮಂಡ್ಯ

ವಿಜ್ಞಾನ ಮತ್ತು ತಂತ್ರಜ್ಞಾನ
ಶ್ರೀ ರಾಮಯ್ಯ ಚಿಕ್ಕಬಳ್ಳಾಪುರ
ಶ್ರೀ ಏರ್ ಮಾರ್ಷಲ್ ಫೀಲೀಫ್ ರಾಜಕುಮಾರ್ ದಾವಣಗೆರೆ
ಡಾ. ಆರ್. ವಿ ನಾಡಗೌಡ ಗದಗ

ಸಹಕಾರ
ಶ್ರೀ ಶೇಖರಗೌಡ ವಿ ಮಾಲಿಪಾಟೀಲ್
ಕೊಪ್ಪಳ

ಯಕ್ಷಗಾನ
ಶ್ರೀ ಕೋಟ ಸುರೇಶ ಬಂಗೇರ
ಉಡುಪಿ
ಶ್ರೀ ಐರಬೈಲ್‌ಆನಂದ ಶೆಟ್ಟಿ
ಉಡುಪಿ
ಶ್ರೀ ಕೃಷ್ಣ ಪರಮೇಶ್ವರ ಹೆಗಡೆ (ಕೆ.ಪಿ ಹೆಗಡೆ)
ಉತ್ತರ ಕನ್ನಡ

ಬಯಲಾಟ
ಶ್ರೀ ಗುಂಡೂರಾಜ್
ಹಾಸನ

ರಂಗಭೂಮಿ
ಶ್ರೀ ಹೆಚ್.ಎಂ. ಪರಮಶಿವಯ್ಯ
ಬೆಂಗಳೂರು ದಕ್ಷಿಣ (ರಾಮನಗರ)
ಶ್ರೀ ಎಲ್.ಬಿ.ಶೇಖ್ (ಮಾಸ್ತರ್)
ವಿಜಯಪುರ
ಶ್ರೀ ಬಂಗಾರಪ್ಪ ಖುದಾನ್‌ಪುರ
ಬೆಂಗಳೂರು
ಶ್ರೀ ಮೈಮ್ ರಮೇಶ್
ದಕ್ಷಿಣ ಕನ್ನಡ
ಶ್ರೀಮತಿ ಡಿ.ರತ್ನಮ್ಮ ದೇಸಾಯಿ
ರಾಯಚೂರು

ಶಿಕ್ಷಣ
ಡಾ. ಎಂ.ಆರ್. ಜಯರಾಮ್
ಬೆಂಗಳೂರು
ಡಾ. ಎನ್ ಎಸ್ ರಾಮೇಗೌಡ
ಮೈಸೂರು
ಶ್ರೀ. ಎಸ್. ಬಿ. ಹೊಸಮನಿ
ಕಲಬುರಗಿ
ಶ್ರೀಮತಿ ರಾಜ್ ಶ್ರೀ ನಾಗರಾಜು
ಬೆಳಗಾವಿ

ಕ್ರೀಡೆ
ಶ್ರೀ ಆಶೀಶ್ ಕುಮಾರ್ ಬಲ್ಲಾಳ್
ಬೆಂಗಳೂರು
ಶ್ರೀ ಎಂ ಯೋಗೇಂದ್ರ
ಮೈಸೂರು
ಡಾ. ಬಬಿನಾ ಎನ್.ಎಂ (ಯೋಗ)
ಕೊಡಗು

ನ್ಯಾಯಾಂಗ
ನ್ಯಾ. ಶ್ರೀ ಪಿ.ಬಿ. ಭಜಂತ್ರಿ (ಪವನ್ಕುಮಾರ್ ಭಜಂತ್ರಿ )
ಬಾಗಲಕೋಟೆ

ಶಿಲ್ಪಕಲೆ
ಶ್ರೀ ಬಸಣ್ಣ ಮೋನಪ್ಪ ಬಡಿಗೇರ
ಯಾದಗಿರಿ
ಶ್ರೀ ನಾಗಲಿಂಗಪ್ಪ ಜಿ ಗಂಗೂರ
ಬಾಗಲಕೋಟೆ

ಚಿತ್ರಕಲೆ
ಶ್ರೀ ಬಿ. ಮಾರುತಿ
ವಿಜಯನಗರ

ಕರಕುಶಲ
ಶ್ರೀಮತಿ ಎಲ್. ಹೇಮಾಶೇಖರ್
ಮೈಸೂರು

- Advertisement -
RELATED ARTICLES

Latest News