Monday, April 20, 2026
Homeರಾಜ್ಯನಾಳೆಯಿಂದ ಗುತ್ತಿಗೆದಾರರ ಪ್ರತಿಭಟನೆ, ಎಲ್ಲ ಕಾಮಗಾರಿಗಳು ಬಂದ್‌

ನಾಳೆಯಿಂದ ಗುತ್ತಿಗೆದಾರರ ಪ್ರತಿಭಟನೆ, ಎಲ್ಲ ಕಾಮಗಾರಿಗಳು ಬಂದ್‌

Contractors' protest from tomorrow,

ಬೆಂಗಳೂರು, ಮಾ.5- ಕರ್ನಾಟಕ ರಾಜ್ಯ ಗುತ್ತಿಗೆದಾರರು ಕರೆದಿರುವ ಪ್ರತಿಭಟನೆಗೆ ಜಿಬಿಎ ನಗರ ಪಾಲಿಕೆಗಳ ಕಾರ್ಯನಿರತ ಗುತ್ತಿಗೆದಾರರ ಸಂಘ ಬೆಂಬಲ ವ್ಯಕ್ತಪಡಿಸಿರುವುದರಿಂದ ನಾಳಿನ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಬಾಕಿ ಬಿಲ್‌ ಪಾವತಿಗಾಗಿ ಮತ್ತು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸಂಘದವರು ಕರೆದಿರುವ ಪ್ರತಿಭಟನೆ ಗೆ ಜಿಬಿಎ ನಗರ ಪಾಲಿಕೆಗಳ ಕಾರ್ಯನಿರತ ಗುತ್ತಿಗೆದಾರರ ಸಂಘದ ವತಿಯಿಂದ ಸಂಪೂರ್ಣ ಬೆಂಬಲ ನೀಡಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್‌ ತಿಳಿಸಿದ್ದಾರೆ.

ರಾಜ್ಯದ ಇತರ ಗುತ್ತಿಗೆದಾರರಂತೆ ಜಿಬಿಎ ಗುತ್ತಿಗೆದಾರರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ನಮ ಸಮಸ್ಯೆ ನಿವಾರಿಸುವಂತೆ ಸರ್ಕಾರದ ಗಮನ ಸೆಳೆದರೂ ಯಾವುದೆ ಪ್ರಯೋಜನವಾಗುತ್ತಿಲ್ಲ, ಮುಖ್ಯವಾಗಿ ಕಳೆದ ಐದು ವರ್ಷಗಳಿಂದ ತಡೆ ಹಿಡಿದಿರುವ ಗುತ್ತಿಗೆದಾರರ ಶೇ 10% ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು, ಕೆಆರ್‌ಐಡಿಲ್‌ ವತಿಯಿಂದ ನಿರ್ವಹಿಸಿರುವ ಕಾಮಗಾರಿಗಳ ಶೇ 25% ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು ಎನ್ನುವುದು ನಮ ಪ್ರಮುಖ ಬೇಡಿಕೆಯಾಗಿದೆ ಎಂದಿದ್ದಾರೆ.

ಪ್ಯಾಕೇಜ್‌ ಪದ್ಧತಿ ಟೆಂಡರ್‌ ನಿಂದ ಸಣ್ಣ ಸಣ್ಣ ಗುತ್ತಿಗೆದಾರರಿಗೆ ಕೆಲಸವೇ ಇಲ್ಲದಂತಾಗಿ ಅನೇಕರು ನಿರುದ್ಯೋಗಿಗಳಗಿದ್ದಾರೆ,. ಮತ್ತು ಇದರಿಂದ ಭ್ರಷ್ಟಾಚಾರ ಹೆಚ್ಚಾಗಿದೆ. ಹಾಗಾದರೆ ಗುತ್ತಿಗೆದಾರರ ಕ್ಲಾಸ್‌‍ 4, ಕ್ಲಾಸ್‌‍ 3, ಕ್ಲಾಸ್‌‍ 2. ಲೈಸನ್‌್ಸ ಕೊಡುವುದು ಯಾವ ಪುರುಷೋರ್ಥಕ್ಕಾಗಿ ಎಂಬದನ್ನು ಅಧಿಕಾರಿಗಳು ತಿಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ನಗರ ಪಾಲಿಕೆಗಳಲ್ಲಿ ಅಧಿಕಾರಿಗಳ ಕಿರುಕುಳ ಜಾಸ್ತಿ ಆಗಿದೆ. ವಿನಾ ಕಾರಣ ಟೇಬಲ್‌ ಗಳನ್ನು ಜಾಸ್ತಿ ಮಾಡಿ ಗುತ್ತಿಗೆದಾರರನ್ನು ಅಲೆದಾಡಿಸುತ್ತಿರುವುದುಕ್ಕೆ ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದರು.

ನಾಳೆ ನಡೆಯಲಿರುವ ಪ್ರತಿಭಟನೆಯಲ್ಲಿ ಜಿಬಿಎ ವ್ಯಾಪ್ತಿಯಲ್ಲಿರುವ ಎಲ್ಲಾ ಗುತ್ತಿಗೆದಾರರು ತಮ ಕಾಮಗಾರಿಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

RELATED ARTICLES

Latest News