Tuesday, June 3, 2025
Homeಜಿಲ್ಲಾ ಸುದ್ದಿಗಳು | District Newsಬೆಳಗಾವಿ | Belagaviಹೆದ್ದಾರಿ ಕಾಮಗಾರಿ ವೇಳೆ ಅಪಘಾತ, ಮೂವರು ಕಾರ್ಮಿಕರ ಸಾವು

ಹೆದ್ದಾರಿ ಕಾಮಗಾರಿ ವೇಳೆ ಅಪಘಾತ, ಮೂವರು ಕಾರ್ಮಿಕರ ಸಾವು

Accident during highway construction, three workers die

ಬೆಳಗಾವಿ, ಜೂ.1– ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ಯಾಂಕರ್‌ ಟಿಪ್ಪರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇಂದು ಮಧ್ಯಾಹ್ನ ಸಂಭವಿಸಿದೆ. ರಾಮಚಂದ್ರ, ಮಹೇಶ, ರಾಮಣ್ಣ ಮೃತರು ಎಂದು ಗುರುತಿಸಲಾಗಿದೆ.

ಹೆದ್ದಾರಿ ರಸ್ತೆಯ ಇಟಗಿ ಕ್ರಾಸ್‌‍ ಬಳಿ ಟ್ಯಾಂಕರ್‌ ಮತ್ತು ಟಿಪ್ಪರ್‌ ನಡುವೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ. ಭೀಮಾಬಾಯಿ, ಲಕ್ಷ್ಮೀಬಾಯಿ ಅನುಶ್ರೀ ಎಂಬುವವರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದ ಕಿತ್ತೂರು ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಅಪಘಾತದ ವೇಳೆ ಹೆದ್ದಾರಿಯಿಂದ ವಾಹನ ಸರ್ವೀಸ್‌‍ ರಸ್ತೆಗೆ ಉರುಳಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಹ ಇಲ್ಲಿನ ಆಸ್ಪತ್ರೆಗೆ ಚಿಕಿತ್ಸೆಗಾಗಿ ಸೇರಿಸಲಾಗಿದೆ. ಮೃತರು ಹಾಗೂ ಗಾಯಗೊಂಡಿರುವವರೆಲ್ಲರೂ ಕಲಬುರಗಿ ಜಿಲ್ಲೆಯವರು ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News