Sunday, June 29, 2025
Homeರಾಜ್ಯಆರೋಪಿ ಕರೆತರುತ್ತಿದ್ದಾಗ ಅಪಘಾತ, ಸಬ್‌ಇನ್‌ಸ್ಪೆಕ್ಟರ್ ಸಾವು

ಆರೋಪಿ ಕರೆತರುತ್ತಿದ್ದಾಗ ಅಪಘಾತ, ಸಬ್‌ಇನ್‌ಸ್ಪೆಕ್ಟರ್ ಸಾವು

Accident while bringing accused, Sub-Inspector dies

ಬೆಂಗಳೂರು, ಜೂ.29- ಗಾಂಜಾ ಪ್ರಕರಣದಲ್ಲಿ ಆರೋಪಿಯನ್ನು ವಶಕ್ಕೆ ಪಡೆದು ಕರೆತರುವಾಗ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡಿದ್ದ ತಲ್ಲಘಟ್ಟಪುರ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಮೆಹಬೂಬ್ ಗುಡ್ಡಳ್ಳಿ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

ಗಾಂಜಾ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಅತ್ತಿಬೆಲೆಯಲ್ಲಿ ಬಂಧಿಸಿ ಕಾರಿನಲ್ಲಿ ಕರೆತರುವಾಗ ಸೂರ್ಯಸಿಟಿ ಬಳಿ ಕಾರು ಪಂಕ್ಚರ್ ಆಗಿದೆ. ನಂತರ ಚಾಲಕ ರಸ್ತೆಪಕ್ಕ ನಿಲ್ಲಿಸಿ ಚಕ್ರ ಬದಲಾಯಿಸುವ ವೇಳೆ ಎಸ್‌ಐ ಹೊರಗೆ ಇಳಿದು ಫೋನ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ ಹಿಂದಿನಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ.

ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಇಬ್ಬರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಮೆಹಬೂಬ್ ಗುಡ್ಡಳ್ಳಿ ಅವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ.

RELATED ARTICLES

Latest News