ಹರ್ದೋಯ್, ಸೆ.1- ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯ ಶಹಾಬಾದ್ ಪೊಲೀಸ್ ಠಾಣೆಯ ಶೌಚಾಲಯದಲ್ಲಿ ಬಾಲಕಿ ಅಪಹರಣದ ಆರೋಪಿ ನೇಣಿಗೆ ಶರಣಾಗಿದ್ದಾನೆ .ಇತ್ತೀಚೆಗೆ 16 ವರ್ಷದ ಬಾಲಕಿಯೊಂದಿಗೆ ಪಾರಿಯಾಗಿದ್ದ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದ್ದ ರವಿ ರಜಪೂತ್(20)ಮೃತ ಯುವಕ.
ಸಾವಿನ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಎಸ್ಪಿ ನೀರಜ್ ಜದೌನ್ ಹೇಳಿದ್ದಾರೆ.ಪೊಲೀಸ್ ಠಾಣೆಯೊಳಗಿನ ಶೌಚಾಲಯದಲ್ಲಿ ರಜಪೂತ್ ನೇಣು ಬಿಗಿದುಕೊಂಡಿದ್ದು , ತಕ್ಷಣ ಆತನನ್ನು ಹಾಬಾದ್ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅತ ಮೃತಪಟ್ಟಿದ್ದಾನೆ ಎಂದು ಘೋಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ರಜಪೂತ್ನ ಕುಟುಂಬ ಮತ್ತು ಸಂಬಂಧಿಕರು ಪೊಲೀಸ್ ಠಾಣೆಗೆ ಧಾವಿಸಿ ಲಾಕಪ್ ಡೆತ್ ಎಂದು ಆರೋಪಿಸಿದ್ದಾರೆ.ಘಟನೆಯ ಕುರಿತ್ತುತನಿಖೆ ಮಾಡಲಾಗುತ್ತಿದೆ, ಮತ್ತು ತನಿಖೆಯ ನಂತರ ನಿಖರವಾದ ಸಂದರ್ಭಗಳು ಸ್ಪಷ್ಟವಾಗುತ್ತವೆ ಎಂದು ಜದೌನ್ ಹೇಳಿದರು.
- ರಷ್ಯಾ ತೈಲ ಖರೀದಿಸಿ ಬ್ರಾಹಣರು ಲಾಭ ಮಾಡಿಕೊಳ್ಳುತ್ತಿದ್ದಾರೆ : ಅರ್ಥವಿಲ್ಲದ ಆರೋಪ ಮಾಡಿದ ಅಮೆರಿಕ
- ಡ್ರ್ಯಾಗನ್ ಎದುರು ಶರಣಾದ ಮೋದಿ : ಚೀನಾ ಓಲೈಕೆಯನ್ನು ಖಂಡಿಸಿದ ಕಾಂಗ್ರೆಸ್
- ಬೆಂಗಳೂರು : ಗಂಡನ ಕಿರುಕುಳದಿಂದ ನೊಂದು ಗೃಹಿಣಿ ಆತ್ಮಹತ್ಯೆ
- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ವಾರಾಂತ್ಯದವರೆಗೆ ಮಳೆ ಮುಂದುವರಿಕೆ
- ಫೇಸ್ಬುಕ್ ಗೆಳೆಯನ ಕಿರುಕುಳಕ್ಕೆ ನೊಂದು ಯುವತಿ ಆತ್ಮಹತ್ಯೆ