Wednesday, November 19, 2025
Homeಬೆಂಗಳೂರುಕುಡಿಯಲು ಹಣ ಕೊಡದ ಮಹಿಳೆಗೆ ಇರಿದಿದ್ದ ಆರೋಪಿ ಸೆರೆ

ಕುಡಿಯಲು ಹಣ ಕೊಡದ ಮಹಿಳೆಗೆ ಇರಿದಿದ್ದ ಆರೋಪಿ ಸೆರೆ

Accused who stabbed woman was arrested

ಬೆಂಗಳೂರು,ಫೆ.26– ಕುಡಿಯಲು ಹಣ ಕೊಡಲಿಲ್ಲವೆಂದು ಬಸ್ ನಿಲ್ದಾಣದಲ್ಲಿ ಮಹಿಳೆಗೆ ಚಾಕುವಿನಿಂದ ಇರಿದಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಾಕು ಇರಿತದಿಂದ ನಾಗಲಕ್ಷ್ಮಿ ಎಂಬುವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.

ಮೊನ್ನೆ ಸಂಜೆ 4 ಗಂಟೆ ಸುಮಾರಿನಲ್ಲಿ ಬಿಳಿಶಿವಾಲೆಯ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಾಗಲಕ್ಷ್ಮಿ ಅವರು ಹಣ ಎಣಿಸುತ್ತಿದ್ದರು. ಆ ಸಂದರ್ಭದಲ್ಲಿ ಆನಂದ್ ಎಂಬ ವ್ಯಕ್ತಿ ಅವರ ಬಳಿ ಹೋಗಿ ಕುಡಿಯಲು ಹಣ ಕೇಳಿದ್ದಾನೆ.

ನಾಗಲಕ್ಷ್ಮಿ ಅವರು ಹಣ ಕೊಡಲು ನಿರಾಕರಿಸಿದಾಗ ಆನಂದ್ ಚಾಕು ತೆಗೆದುಕೊಂಡು ಬಂದು ಕಿವಿ ಹಾಗೂ ಗಲ್ಲಕ್ಕೆ ಇರಿದು ಪರಾರಿಯಾಗಿದ್ದನು. ಈ ಬಗ್ಗೆ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಂಡ ಪೊಲೀಸರು ಆರೋಪಿ ಆನಂದ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -

Latest News