Monday, October 6, 2025
Homeರಾಜ್ಯರಾಜ್ಯದಲ್ಲಿ ಅಪಾಯಕಾರಿ ಕಫ್‌ ಸಿರಪ್‌ ಜಪ್ತಿ ಮಾಡಲು ಕ್ರಮ

ರಾಜ್ಯದಲ್ಲಿ ಅಪಾಯಕಾರಿ ಕಫ್‌ ಸಿರಪ್‌ ಜಪ್ತಿ ಮಾಡಲು ಕ್ರಮ

Action taken to seize dangerous cough syrup in the state

ಬೆಂಗಳೂರು, ಅ.6- ಅಪಾಯಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ ಅಂಶದ ಕಲಬೆರೆಕೆ ಇರುವ ಕಾಫ್‌ ಸಿರಪ್‌ಗಳನ್ನು ತಪಾಸಣೆಗೊಳಪಡಿಸಿ ಜಪ್ತಿ ಮಾಡಲು ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧಿ ಸಚಿವಾಲಯ ಕ್ರಮ ಕೈಗೊಂಡಿದೆ.

ತಮಿಳುನಾಡು, ಪುದುಚೇರಿ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೆಮಿನ ಔಷಧಿ ಪಡೆದ ಮಕ್ಕಳ ಸಾವಿನ ಬಳಿಕ ದೇಶಾದ್ಯಂತ ಜಾಗೃತಿ ಹೆಚ್ಚಾಗಿದೆ. ಮಕ್ಕಳ ಕೆಮಿನ ಔಷಧಿಯ ಕಲಬೆರೆಕೆ ಪತ್ತೆಗೆ ಕಾರ್ಯಾಚರಣೆಗಳು ನಡೆಯುತ್ತಿವೆ.

ತಮಿಳುನಾಡಿನ ಕಾಂಚಿಪುರಂ ಮೂಲದ ಸ್ರೆಸನ್‌ ಫಾರ್ಮಾಸ್ಯುಟಿಕಲ್‌ ಸಂಸ್ಥೆ ತಯಾರಿಸಿದ ಬ್ಯಾಚ್‌ ನಂಬರ್‌ ಎಸ್‌‍ಆರ್‌ 13ರ ಕಾಫ್‌ ಸಿರಪ್‌ನಲ್ಲಿ ಪ್ಯಾರಾಸಿಟಮಾಲ್‌, ಫಿನೈಲ್ಟ್ರಿನ್‌ ಹೈಡ್ರೋಕ್ಲೋರೈಡ್‌, ಕ್ಲೋರ್‌ ಫೆನಿರಮೈನ್‌ ಮಲೇಟ್‌ ಅಂಶಗಳ ಜೊತೆಗೆ ವಿಷಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ನ ಅಂಶಗಳು ಶೇ. 46.28ರಷ್ಟು ಪ್ರಮಾಣದಲ್ಲಿ ಸೇರ್ಪಡೆಯಾಗಿದ್ದು, ಔಷಧಿ ವಿಷಕಾರಿಯಾಗಿ ಪರಿವರ್ತನೆಯಾಗಿದೆ.

ಈ ಕಾರಣಕ್ಕೆ ಸ್ರೆಸನ್‌ಫಾರ್ಮ ಮತ್ತು ಜೈಪುರದ ಕೈಸನ್‌್ಸಫಾರ್ಮ ತಯಾರಿಸಿದ ಔಷಧಿಗಳು ಕಳಪೆಯಾಗಿದ್ದು, ಬಳಕೆ ಯೋಗ್ಯವಲ್ಲ ಎಂದು ಕೇಂದ್ರ ಸರ್ಕಾರ ಜಂಟಿ ಅಧ್ಯಯನದ ಬಳಿಕ ಪತ್ತೆ ಹಚ್ಚಿದೆ.

ಈ ಔಷಧಿಗಳನ್ನು ದಾಸ್ತಾನು, ಮಾರಾಟ ಮಾಡುವುದು, ಬಳಕೆ ಅಥವಾ ಶಿಫಾರಸು ಮಾಡದಂತೆ ಈಗಾಗಲೇ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಸುತ್ತೋಲೆ ರವಾನಿಸಿದೆ. ಡೈಥಿಲೀನ್‌ ಗ್ಲೈಕೋಲ್‌ನ ಅಂಶಗಳನ್ನು ಬಳಕೆ ಮಾಡಿ ಇತರ ಕಂಪನಿಗಳು ತಯಾರಿಸಿರುವ ಔಷಧಿಗಳ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಬೇಕು. ವರದಿಯ ಬಳಿಕ ಔಷಧಿಯ ಗುಣಮಟ್ಟ ಆಧರಿಸಿ ಮುಂದಿನ ಕ್ರಮಕೈಗೊಳ್ಳಬೇಕೆಂದು ಸೂಚನೆ ನೀಡಲಾಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ಗುಂಡೂರಾವ್‌, ಈ ಎರಡು ಕಂಪನಿಗಳ ಔಷಧಿಗಳು ನಮ ರಾಜ್ಯದಲ್ಲಿ ಸರಬರಾಜಾಗಿಲ್ಲ. ಆದರೆ ಮಧ್ಯಪ್ರದೇಶ, ತಮಿಳುನಾಡು, ಪುದುಚೇರಿಯಲ್ಲಿ ಮಕ್ಕಳ ಸಾವಿಗೆ ಕಾರಣವಾಗಿವೆ. ಈ ಔಷಧಿಗಳು ನಮಲ್ಲಿ ಬರದಂತೆ ಎಚ್ಚರಿಕೆ ವಹಿಸಲಾಗುವುದು.

ಜೊತೆಗೆ ಅಪಾಯಕಾರಿಯಾದ ಡೈಥಿಲೀನ್‌ ಗ್ಲೈಕೋಲ್‌ನ ಮಿಶ್ರಿತ ಔಷಧಿಗಳನ್ನು ಬೇರೆ ಯಾವುದೇ ಕಂಪನಿಗಳು ತಯಾರಿಸಿದ್ದರೂ ಮಾದರಿ ಸಂಗ್ರಹಿಸಿ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.

ಕರ್ನಾಟಕ ದೇಶದಲ್ಲೇ ಆಹಾರ ಮತ್ತು ಔಷಧಿ ಸುರಕ್ಷತೆಗೆ ಅತಿ ಹೆಚ್ಚು ಕಾಳಜಿ ವಹಿಸಿದ ರಾಜ್ಯವಾಗಿದೆ. ಬೇರೆಲ್ಲಾ ರಾಜ್ಯಗಳಿಗಿಂತಲೂ ನಮಲ್ಲಿ ಹೆಚ್ಚು ತಪಾಸಣೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಸೂಚನೆ ಪ್ರಕಾರ 5 ವರ್ಷದ ಮಕ್ಕಳಿಗೆ ಕೆಮಿನ ಔಷಧಿಗಳನ್ನು ಶಿಫಾರಸು ಮಾಡುವಂತಿಲ್ಲ. ಅದರಲ್ಲೂ ಅಪಾಯಕಾರಿ ಕಲಬೆರೆಕೆಯಾಗಿರುವ ಔಷಧಿಗಳನ್ನು ಬಳಸುವಂತೆಯೇ ಇಲ್ಲ ಎಂದು ಅವರು ಸಲಹೆ ನೀಡಿದರು.

RELATED ARTICLES

Latest News