ಪುಣೆ, ಫೆ.10 (ಪಿಟಿಐ)- ಛತ್ರಪತಿ ಶಿವಾಜಿ ಮಹಾರಾಜರ ಕುರಿತಾದ ಹೇಳಿಕೆಗಳು ಪ್ರತಿಭಟನೆಗೆ ಕಾರಣವಾದ ಕೆಲವು ದಿನಗಳ ನಂತರ ನಟ ರಾಹುಲ್ ಸೋಲಾಪುರ್ಕರ್ ಅವರು ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಜ್ಞಾನದ ವೈದಿಕ ಸಂದರ್ಭದಲ್ಲಿ ಬ್ರಾಹಣ ಎಂದು ಬಣ್ಣಿಸುವ ಮೂಲಕ ಹೊಸ ಗದ್ದಲವನ್ನು ಹುಟ್ಟುಹಾಕಿದ್ದಾರೆ.
ತಮ ತಪು ಅರಿವಾಗುತ್ತಿದ್ದಂತೆ ಸೋಲಾಪುರ್ಕರ್ ಕ್ಷಮೆಯಾಚಿಸಿದರು, ಸಮಾಜ ಸುಧಾರಕ ಮತ್ತು ಭಾರತದ ಸಂವಿಧಾನದ ಮುಖ್ಯ ವಾಸ್ತುಶಿಲ್ಪಿ ಅಂಬೇಡ್ಕರ್ ಅವರ ಬಗ್ಗೆ ತಮ ಪದಗಳ ಆಯ್ಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ವೀಡಿಯೊದಲ್ಲಿ, ಅಂಬೇಡ್ಕರ್ ಅವರು ಬಹುಜನ ಕುಟುಂಬದಲ್ಲಿ ರಾಮ್ಜಿ ಸಕ್ಪಾಲ್ಗೆ ಜನಿಸಿದರು ಮತ್ತು ನಂತರ ಅವರ ಉಪನಾಮವನ್ನು ನೀಡಿದ ಅವರ ಶಿಕ್ಷಕರು ದತ್ತು ಪಡೆದರು ಎಂದು ಹೇಳಿದ್ದಾರೆ.
ವೇದಗಳಲ್ಲಿ, ಜ್ಞಾನವನ್ನು ಗಳಿಸುವವನು ಬ್ರಾಹಣನಾಗುತ್ತಾನೆ ಎಂದು ಹೇಳಲಾಗುತ್ತದೆ. ಆ ಅರ್ಥದಲ್ಲಿ, ಅಂಬೇಡ್ಕರ್ ಅವರು ಜ್ಞಾನವನ್ನು ಗಳಿಸಿದ್ದರಿಂದ ಬ್ರಾಹಣರಾಗಿದ್ದರು ಎಂದು ಹಲವಾರು ಮರಾಠಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ಹೇಳಿದರು.ಎನ್ಸಿಪಿ (ಎಸ್ಪಿ) ಶಾಸಕ ಜಿತೇಂದ್ರ ಅವ್ಹಾದ್ ಸೋಲಾಪುರ್ಕರ್ ಅವರ ಹೇಳಿಕೆಗಳ ಬಗ್ಗೆ ವಾಗ್ದಾಳಿ ನಡೆಸಿದರು.
ಎಕ್್ಸನಲ್ಲಿ ವೀಡಿಯೊವನ್ನು ಹಂಚಿಕೊಂಡ ಅವ್ಹಾದ್ ಅವರು, ರಾಹುಲ್ ಸೋಲಾಪುರ್ಕರ್ ಈಗ ಎಲ್ಲಾ ಮಿತಿಗಳನ್ನು ದಾಟಿದ್ದಾರೆ. ಎಲ್ಲಿ ನೋಡಿದರೂ ಬೂಟಿನಿಂದ ಹೊಡೆಯಬೇಕು. ಅವರಂತಹವರು ಜಾತಿವಾದಿ ಸಿದ್ಧಾಂತಗಳಿಂದ ನಡೆಸಿಕೊಂಡು ಮಹಾರಾಷ್ಟ್ರ ಮತ್ತು ದೇಶವನ್ನು ಹಾಳು ಮಾಡಿದ್ದಾರೆ ಎಂದು ಹರಿಹಾಯ್ದಿದ್ದರು. ಟೀಕೆಗಳನ್ನು ಎದುರಿಸುತ್ತಿರುವ ಸೋಲಾಪುರಕರ್ ಅವರು ಅಂಬೇಡ್ಕರ್ ಅವರ ಹೇಳಿಕೆಗೆ ಕ್ಷಮೆಯಾಚಿಸಿದರು.
ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರ ಕುರಿತು ನಾನು ಅನೇಕ ಉಪನ್ಯಾಸಗಳನ್ನು ನೀಡಿದ್ದೇನೆ. ಇಂತಹ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಏಕೆ ಹರಿಬಿಡಲಾಗುತ್ತಿದೆ ಎಂಬುದು ನನಗೆ ಸಂಪೂರ್ಣವಾಗಿ ತಿಳಿದಿಲ್ಲ. ಮತ್ತೊಮೆ, ನಾನು ಮಾಡಿದ ಟೀಕೆಗಳಿಗಾಗಿ ನಾನು ಎಲ್ಲರ ಬಳಿ ಕ್ಷಮೆಯಾಚಿಸುತ್ತೇನೆ. ಭವಿಷ್ಯದಲ್ಲಿ, ನಾನು ರಾಷ್ಟ್ರೀಯ ಐಕಾನ್ಗಳ ಬಗ್ಗೆ ಯಾವುದೇ ತಪ್ಪು ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಅವರು ಕ್ಷಮೆಯಾಚಿಸಿದ್ದಾರೆ.