Sunday, September 8, 2024
Homeರಾಷ್ಟ್ರೀಯ | Nationalಜೈಲು, ಅರಣ್ಯ, ಪೊಲೀಸ್‌‍ ನೇಮಕಾತಿಯಲ್ಲಿ ಅಗ್ನಿವೀರರಿಗೆ ಮೀಸಲಾತಿ : ರಾಜಸ್ಥಾನ ಸರ್ಕಾರ

ಜೈಲು, ಅರಣ್ಯ, ಪೊಲೀಸ್‌‍ ನೇಮಕಾತಿಯಲ್ಲಿ ಅಗ್ನಿವೀರರಿಗೆ ಮೀಸಲಾತಿ : ರಾಜಸ್ಥಾನ ಸರ್ಕಾರ

ಜೈಪುರ, ಜು.27- ಜೈಲು ಮತ್ತು ಅರಣ್ಯ ಸಿಬ್ಬಂದಿ ಮತ್ತು ರಾಜ್ಯ ಪೊಲೀಸ್‌‍ ನೇಮಕಾತಿಯಲ್ಲಿ ರಾಜಸ್ಥಾನ ಸರ್ಕಾರ ಅಗ್ನಿವೀರರಿಗೆ ಮೀಸಲಾತಿ ನೀಡಲಿದೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಭಜನಲಾಲ್‌ ಶರ್ಮಾ ಹೇಳಿದ್ದಾರೆ.

ಸಿಎಂ ಕಚೇರಿ ಕಾರ್ಗಿಲ್ ವಿಜಯ್ ದಿವಸ್ ಸಂದರ್ಭದಲ್ಲಿ ರಾಜಸ್ಥಾನ ಸರ್ಕಾರವು ದೇಶದ ಗಡಿಯನ್ನು ಸಮರ್ಪಣಾ ಭಾವದಿಂದ ಮತ್ತು ದೇಶಭಕ್ತಿಯಿಂದ ರಕ್ಷಿಸುವ ಅಗ್ನಿವೀರರಿಗೆ ರಾಜ್ಯ ಪೊಲೀಸ್, ಜೈಲು ಸಿಬ್ಬಂದಿ ಮತ್ತು ಅರಣ್ಯ ಸಿಬ್ಬಂದಿ ನೇಮಕಾತಿಗಳಲ್ಲಿ ಮೀಸಲಾತಿಯನ್ನು ಒದಗಿಸಿದೆ. ಮುಖ್ಯಮಂತ್ರಿಗಳ ಕಚೇರಿ ಇಂದು ತಿಳಿಸಿದೆ.

ಪ್ರಧಾನಿ ನರೇಂದ್ರಮೋದಿಯವರ ಮಾರ್ಗದರ್ಶನದಲ್ಲಿ ರಾಜ್ಯ ಸರ್ಕಾರದ ಈ ನಿರ್ಧಾರದಿಂದ, ದೇಶ ಸೇವೆ ಮಾಡಿದ ನಂತರ ಅಗ್ನಿವೀರ್‌ಗಳಿಗೆ ರಾಜ್ಯದಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ ಎಂದು ಶರ್ಮಾ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಅಗ್ನಿವೀರ್‌ಗಳಿಗೆ ಈ ಸೇವೆಗಳಲ್ಲಿ ಶೇಕಡಾವಾರು ಮೀಸಲಾತಿಯನ್ನು ಬಹಿರಂಗಪಡಿಸಲಾಗಿಲ್ಲ.

RELATED ARTICLES

Latest News