Monday, October 20, 2025
Homeರಾಷ್ಟ್ರೀಯ | Nationalಕೇರಳ : ಎಸ್‌‍ಡಿಪಿಐ-ಸಿಪಿಐ ನಡುವೆ ಘರ್ಷಣೆ, ಆ್ಯಂಬುಲೆನ್ಸ್‌ಗೆ ಬೆಂಕಿ

ಕೇರಳ : ಎಸ್‌‍ಡಿಪಿಐ-ಸಿಪಿಐ ನಡುವೆ ಘರ್ಷಣೆ, ಆ್ಯಂಬುಲೆನ್ಸ್‌ಗೆ ಬೆಂಕಿ

Ambulance set on fire amid SDPI-CPI(M) clash in Thiruvananthapuram

ತಿರುವನಂತಪುರಂ, ಅ. 20 (ಪಿಟಿಐ)– ಕೇರಳದ ನೆಡುಮಂಗಾಡ್‌ನಲ್ಲಿ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ (ಎಸ್‌‍ಡಿಪಿಐ) ಮತ್ತು ಸಿಪಿಐ(ಎಂ) ಕಾರ್ಯಕರ್ತರ ನಡುವಿನ ಘರ್ಷಣೆ ನಡೆದು ಆ್ಯಂಬ್ಯು ಲೆನ್‌್ಸಗೆ ಬೆಂಕಿ ಹಚ್ಚಲಾಗಿದೆ.

ನೆಡುಮಂಗಾಡ್‌ ಪೊಲೀಸರ ಪ್ರಕಾರ, ಸ್ಥಳೀಯ ಸಿಪಿಐ(ಎಂ) ನಾಯಕನ ಮೇಲೆ ನಿನ್ನೆ ಸಂಜೆ ಎಸ್‌‍ಡಿಪಿಐ ಕಾರ್ಯಕರ್ತರು ದಾಳಿ ನಡೆಸಿದ್ದರು. ಹೀಗಾಗಿ ಅಪರಿಚಿತ ವ್ಯಕ್ತಿಗಳು ಎಸ್‌‍ಡಿಪಿಐ ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಮುಖವಾಡ ಧರಿಸಿದ ವ್ಯಕ್ತಿಗಳು ತಡರಾತ್ರಿ ಆಂಬ್ಯುಲೆನ್ಸ್ ಮತ್ತು ಎಸ್‌‍ಡಿಪಿಐ ಕಾರ್ಯಕರ್ತನ ಒಡೆತನದ ಕಾರಿಗೆ ಹಾನಿ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂದೇಹವಾದ ಪ್ರತೀಕಾರದ ಕ್ರಮದಲ್ಲಿ, ಸರ್ಕಾರಿ ಆಸ್ಪತ್ರೆಯ ಬಳಿ ನಿಲ್ಲಿಸಲಾಗಿದ್ದ ಸಿಪಿಐ(ಎಂ) ಯುವ ಘಟಕವಾದ ಡೆಮಾಕ್ರಟಿಕ್‌ ಯೂತ್‌ ಫೆಡರೇಶನ್‌ ಆಫ್‌ ಇಂಡಿಯಾ (ಡಿವೈಎಫ್‌ಐ) ನಡೆಸುತ್ತಿದ್ದ ಆಂಬ್ಯುಲೆನ್ಸ್ಗೆ ಇಂದು ಮುಂಜಾನೆ ಬೆಂಕಿ ಹಚ್ಚಲಾಗಿದೆ.

ಈ ದಾಳಿಗಳು ಹಿಂದಿನ ಘರ್ಷಣೆಯ ಪರಿಣಾಮವೇ ಎಂದು ಖಚಿತಪಡಿಸಿಕೊಳ್ಳಲು ಮತ್ತು ಭಾಗಿಯಾಗಿರುವವರನ್ನು ಗುರುತಿಸಲು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೆ, ಪ್ರದೇಶದಲ್ಲಿ ಯಾವುದೇ ಹೆಚ್ಚಿನ ಘರ್ಷಣೆಗಳನ್ನು ತಡೆಗಟ್ಟಲು ಗಸ್ತು ತಿರುಗುವ ಚಟುವಟಿಕೆಗಳನ್ನು ಬಲಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News