ಬೆಂಗಳೂರು,ನ.1- ಆಹಾರ ನಿಗಮದಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಶೀಘ್ರದಲ್ಲೇ ಆಹಾರ ನಿಗಮದ 386 ನೂತನ ಸಿಬ್ಬಂದಿಯ ನೇಮಕಾತಿ ಪತ್ರ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ವಸಂತನಗರದ ಅಬ್ದುಲ್ಕಲಾಂ ಭವನದಲ್ಲಿ ನಡೆದ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ನಿಯಮಿತದ 52ನೇ ವರ್ಷದ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಮೊದಲು ನಿಮಗದಲ್ಲಿ 1500 ಸಾವಿರ ಸಿಬ್ಬಂದಿ ಇದ್ದರು. 200ರಿಂದ 250ಕ್ಕೆ ಇಳಿದಿದೆ. ನೇಮಕಾತಿ ಪ್ರಕ್ರಿಯೆ ನಡೆದಿದೆ. ಮುಖ್ಯಮಂತ್ರಿಗಳು ಈ ನೇಮಕಾತಿ ಆದೇಶಕ್ಕೆ ಅನುಮತಿ ನೀಡಿದ್ದು ಕೆಲವೇ ದಿನಗಳಲ್ಲಿ ಸಿಬ್ಬಂದಿಗೆ ನೇಮಕಾತಿಪತ್ರ ನೀಡಲಾಗುವುದು ಎಂದರು.
ಆಹಾರ ನಿಗಮ ಕಳೆದ ವರ್ಷಕ್ಕಿಂತ ಈ ವರ್ಷ ಎಂ ಎಸ್ ಪಿ ಯೋಜನೆಯಡಿ ಆಹಾರ ದಾನ್ಯಗಳ ಖರೀದಿ ಹೆಚ್ಚಾಗಿದೆ. ಮನುಷ್ಯನಿಗೆ ಆರೋಗ್ಯಕರವಾದ ರಾಗಿ ಮತ್ತು ಜೋಳ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ಜನರಿಗೆ ವಿತರಣೆಗೆ ಸಹಕಾರಿಯಾಗಿದೆ ಹಾಗೇಯೇ ಅದರಿಂದ ಬರುವ ಕಮೀಷನ್ ನಿಂದ ನಿಗಮದ ನಿರ್ವಹಣೆಗೂ ಸಹಕಾರಿಯಾಗಿದೆ ಎಂದರು.
ನಿಗಮದ ಅಧ್ಯಕ್ಷ ಬಿ.ಜಿ ಗೋವಿಂದಪ್ಪ ಮಾತನಾಡಿ, ದೇವರಾಜ ಅರಸು ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಈ ನಿಗಮದ ಸ್ಥಾಪನೆಗೆ ಸಹಕಾರಿಯಾದರು. ಇಂದಿಗೆ ನಿಗಮ 52 ವಸಂತಗಳು ಪೂರೈಸಿದೆ.
ಈ ನಿಗಮದಿಂದ ರಾಗಿ ಭತ್ತ ಜೋಳವನ್ನು ಖರೀದಿಸಿ ಅವನ್ನು ರಾಜ್ಯದ ಜನರಿಗೆ ನೀಡಲು ಸಹಕಾರಿಯಾಗಿದೆ ಆಹಾರ ಧನ್ಯವಾದಗಳ ಖರೀದಿಗೆ ರಾಜ್ಯದಾದ್ಯಂತ ಖರೀದಿ ಕೇಂದ್ರ ಗಳನ್ನು ಸ್ಥಾಪಿಸಿ ಅದರಿಂದ ರೈತರಿಗೆ ಬಲ ನೀಡಿದರು ಈ ನಿಗಮಕ್ಕ 386 ನೂತನ ಸಿಬ್ಬಂದಿ ವರ್ಗದವರನ್ನು ನೇಮಕಾತಿ ಮಾಡಲು ಸಹಕಾರಿಯಾಗಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿಗಮದ ಅಧ್ಯಕ್ಷರಾದ ಬಿ.ಜಿ.ಗೋವಿಂದಪ್ಪ, ಮಾಜಿ ಸಂಸದರಾದ ಚಂದ್ರಪ್ಪ, ಆಯುಕತ್ತರಾದ ವಿ.ವಿ.ಜೋತ್ಸನಾ, ನಿಗಮದ ನಿರ್ದೇಶಕರಾದ ಕೆ.ಜಗದೀಶ್, ಸಚಿವರ ಆಪ್ತ ಕಾರ್ಯದರ್ಶಿ ಡಾ.ಹೆಚ್.ನಟರಾಜ್, ವ್ಯವಸ್ಥಾಪಕರಾದ ಮಂಜುನಾಥ್,ರಾಘವೇಂದ್ರ, ವೈದ್ಯರಾದ ಆಂಜನಪ್ಪ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
