ನವದೆಹಲಿ,ಫೆ.26- ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ತಾನೂ ಸೋಲುವುದರ ಜೊತೆಗೆ ಪಕ್ಷವನ್ನು ಮಕಾಡೆ ಮಲಗಿಸಿದ ಎಎಪಿ ರಾಷ್ಟ್ರೀಯ ಸಂಚಾಲಕ ಹಾಗೂ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ರಾಜ್ಯಸಭೆ ಮೇಲೆ ಕಣ್ಣಿಟ್ಟಿದ್ದಾರೆ.
ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಸಂಜಯ್ ಅರೋರಾ ಅವರು ಪಂಜಾಬ್ನ ಲೂಧಿಯಾನ ವಿಧಾನಸಭಾ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ಎಎಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸಭಾ ಸ್ಥಾನಕ್ಕೆ ಅವರು ರಾಜೀನಾಮೆ ನೀಡಲಿದ್ದಾರೆ.
ತೆರವಾಗಿರುವ ಈ ಸ್ಥಾನಕ್ಕೆ ಎಎಪಿಯು ಕ್ರೇಜಿವಾಲ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ. ಆದರೆ ಪಕ್ಷದ ಪ್ರಮುಖರು ಈ ಬೆಳವಣಿಗೆಗಳ ಬಗ್ಗೆ ನಿರಾಕರಿಸಿದ್ದು, ಕೇಜಿವಾಲ್ ಅವರು ರಾಜ್ಯ ಸಭೆಗೆ ಹೋಗಲಿದ್ದಾರೆ ಎಂಬುದು ಕೇವಲ ವದಂತಿ. ಅವರು ಪಕ್ಷವನ್ನು ಬೇರುಮಟ್ಟದಿಂದ ಸಂಘಟಿಸಲಿದ್ದಾರೆ ಎಂದು ಹೇಳಿದ್ದಾರೆ.
ಅರೋರಾ ಅವರ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ದಿನಾಂಕವನ್ನು ನಿಗದಿಪಡಿಸಿಲ್ಲ.
ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಈಗಾಗಲೇ ಸಂಜೀವ್ ಅರೋರಾ ಬದಲಿಗೆ ಅರವಿಂದ್ ಕೇಜಿವಾಲ್ ರಾಜ್ಯಸಭೆಗೆ ಹೋಗುತ್ತಾರೆ ಮತ್ತು ಲುಧಿಯಾನ ಪಶ್ಚಿಮ ಸ್ಥಾನದಿಂದ ಉಪಚುನಾವಣೆಗೆ ಸಂಜೀವ್ ಅರೋರಾ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗುವುದು ಎಂದು ಹೇಳಿದ್ದರು.
ಪ್ರತಾಪ್ ಸಿಂಗ್ ಬಾಜ್ವಾ ಅವರ ಹೇಳಿಕೆಯನ್ನು ಆಮ್ ಆದ್ಮ ಪಕ್ಷ ನಿರಾಕರಿಸಿದ್ದು, ಎಎಪಿ ತನ್ನ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರನ್ನು ಲುಧಿಯಾನ ಪಶ್ಚಿಮ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಾಮನಿರ್ದೇಶನ ಮಾಡಿದೆ. ಅರೋರಾ 2022ರಲ್ಲಿ ಪಂಜಾಬ್ನಿಂದ ರಾಜ್ಯ ಸಭೆಗೆ ಆಯ್ಕೆಯಾದರು. ಅಧಿಕಾರಾವಧಿ 2028ರಲ್ಲಿ ಕೊನೆಗೊಳ್ಳುತ್ತದೆ. ಅಂದರೆ ಆರು ವರ್ಷಗಳ ಅವಧಿ ಮುಗಿಯಬೇಕು.
ಅಲ್ಲದೆ ರಾಜ್ಯಸಭೆಯಿಂದ ಚುನಾವಣೆಗೆ ಸ್ಪರ್ಧಿಸಲು ಅವರು ರಾಜೀನಾಮೆ ನೀಡಬೇಕಾಗುತ್ತದೆ. ರಾಜೀನಾಮೆ ನೀಡಿದರೆ, ಆ ಸ್ಥಾನವನ್ನು ಕೇಜಿವಾಲ್ ಅವರಿಗೆ ನೀಡಬಹುದು ಎಂದು ಹೇಳಲಾಗಿತ್ತು. ಕೇಜ್ರವಾಲ್ ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಬಿಜೆಪಿ ಸಂಸದರಾಗಿದ್ದ ಪರ್ವೇಶ್ ವರ್ಮಾ ವಿರುದ್ಧ ಸುಮಾರು 1,200 ಮತಗಳ ಅಂತರದಿಂದ ಸೋತರು. ಕಾಂಗ್ರೆಸ್ ಅಭ್ಯರ್ಥಿ ಸಂದೀಪ್ ದೀಕ್ಷಿತ್ ಮೂರನೇ ಸ್ಥಾನ ಪಡೆದರು. ಕೇಜಿವಾಲ್ 2013 ರಿಂದ ನವದೆಹಲಿ ಸ್ಥಾನವನ್ನು ಹೊಂದಿದ್ದಾರೆ. ಈಗ ಈ ಆಸನ ಅವರ ಕೈ ತಪ್ಪಿ ಹೋಗಿದೆ. ಇದು ಎಎಪಿಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗುತ್ತಿದೆ.
ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ಸಿಂಗ್ ಬಾಜ್ವಾ ನಿನ್ನೆ ಕೇಜಿವಾಲ್ ಪಂಜಾಬ್ ಮೂಲಕ ರಾಜ್ಯ ಸಭೆಗೆ ಪ್ರವೇಶಿಸಲು ಬಯಸುತ್ತಾರೆ ಎಂದಿದ್ದರು. ಕೇಜ್ರವಾಲ್ ಪಂಜಾಬ್ ಮೂಲಕ ಅಧಿಕಾರಕ್ಕೆ ಬರಲು ಬಯಸುತ್ತಾರೆ ಮತ್ತು ಕೆಲವು ರಾಜ್ಯಸಭಾ ಸದಸ್ಯರು ಅವರಿಗಾಗಿ ತಮ್ಮನ್ನು ತಾವು ತ್ಯಾಗ ಮಾಡಬೇಕಾಗುತ್ತದೆ ಎಂದು ಹೇಳಿದ್ದರು.
ದೆಹಲಿಯ ಸೋಲಿನ ನಂತರ, ಎಎಪಿಯಲ್ಲಿ ಒಡಕು ಉಂಟಾಗಿದೆ ಎಂದು ಅವರು ಹೇಳಿದರು. ಅನೇಕ ಪ್ರಮುಖ ನಾಯಕರು ತಮ್ಮ ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ಪಕ್ಷ ಬದಲಾಯಿಸುವ ಬಗ್ಗೆ ಯೋಚಿಸುತ್ತಿರುವ ಹಲವಾರು ಎಎಪಿ ಶಾಸಕರೊಂದಿಗೆ ತಾನು ಸಂಪರ್ಕದಲ್ಲಿದ್ದೇನೆ ಎಂದು ಬಾಜ್ಞಾ ಹೇಳಿಕೊಂಡಿದ್ದಾರೆ.
‘ಆಮ್ ಆದ್ದಿ ಪಕ್ಷದ ರಾಜ್ಯಸಭಾ ಸಂಸದ ಸಂಜೀವ್ ಅರೋರಾ ಅವರ ಬದಲಿಗೆ ಕೇಜಿವಾಲ್ ರಾಜ್ಯ ಸಭೆಗೆ ಹೋಗಬಹುದು ಎಂದು ಕಾಂಗ್ರೆಸ್ ಶಾಸಕರು ಹೇಳಿದ್ದಾರೆ. ಲೂಧಿಯಾನ ಪಶ್ಚಿಮ ವಿಧಾನಸಭಾ ಕ್ಷೇತ್ರದ ಶಾಸಕ ಗುರುಪ್ರೀತ್ ಗೋಗಿ ಅವರ ನಿಧನದಿಂದಾಗಿ ಇಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಸಂಜೀವ್ ಅರೋರಾ ಅವರನ್ನು ಕಣಕ್ಕಿಳಿಸಬಹುದು ಎಂದು ಪ್ರತಾಪ್ ಸಿಂಗ್ ಬಜ್ಜಾ ಈಗಾಗಲೇ ಹೇಳಿದ್ದರು. ಈಗ ಇದು ನಿಜವೆಂದು ಸಾಬೀತಾಗಿದೆ.
ಆದಾಗ್ಯೂ ಅಂತಹ ವರದಿಗಳನ್ನು ಪಂಜಾಬ್ ಆಮ್ ಆದಿ ಪಕ್ಷದ ವಕ್ತಾರರು ಮತ್ತು ಸಚಿವರು ತಿರಸ್ಕರಿಸಿದ್ದಾರೆ. ಆಮ್ ಆದಿ ಪಕ್ಷದಲ್ಲಿ ಇದರ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ವಿರೋಧ ಪಕ್ಷದ ನಾಯಕರು ವಿಧಾನಸಭೆಯಲ್ಲಿ ಸಾರ್ವಜನಿಕ ಸಮಸ್ಯೆಗಳನ್ನು ಪ್ರಸ್ತಾಪಿಸಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವರು ಇಂತಹ ವದಂತಿಗಳನ್ನು ಹರಡುತ್ತಿದ್ದಾರೆ.
ಈ ಹಿಂದೆ ಅರವಿಂದ್ ಕೇಜ್ರವಾಲ್ ಅವರು ಗುರುಪ್ರೀತ್ ಗೋಗಿ ಅವರ ಸ್ಥಾನದಿಂದ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು ಎಂದು ಹೇಳಿದ್ದರು. ದೆಹಲಿ ವ್ಯಕ್ತಿ ಲೂಧಿಯಾನ ಪಶ್ಚಿಮದಲ್ಲಿ ಗೆಲ್ಲುವುದಿಲ್ಲ ಎಂಬ ಪ್ರತಿಕ್ರಿಯೆ ಪಂಜಾಬ್ನಿಂದ ಬಂದಿತ್ತು. ಈ ಕ್ಷೇತ್ರದಲ್ಲಿ ಸ್ಥಳೀಯ ನಾಯಕ ಮಾತ್ರ ಗೆಲ್ಲಲು ಸಾಧ್ಯ. ಅದೇ ಸಮಯದಲ್ಲಿ, ಅರವಿಂದ್ ಕೇಜ್ರವಾಲ್ ಅವರಿಗೆ ದೆಹಲಿಯಿಂದ ಪಕ್ಷವನ್ನು ನಿರ್ವಹಿಸುವುದು ಕಷ್ಟಕರವಾಗುತ್ತದೆ ಎಂದು ಹೇಳಲಾಗಿತ್ತು .
ಅರವಿಂದ್ ಕೇಜಿವಾಲ್ ರಾಜ್ಯಸಭೆಯ ಮೂಲಕ ಸಂಸತ್ತನ್ನು ಪ್ರವೇಶಿಸುವುದರ ಹಿಂದೆ ಹಲವು ಕಾರ್ಯತಂತ್ರ ಮತ್ತು ರಾಜಕೀಯ ಕಾರಣಗಳಿವೆ. ಅರವಿಂದ್ ಕೇಜಿವಾಲ್ ರಾಜ್ಯ ಸಭಾ ಸಂಸದರಾದರೆ, ಅವರು ರಾಜಕೀಯದಲ್ಲಿ ಮತ್ತೆ ಸಕ್ರಿಯರಾಗುತ್ತಾರೆ. ಅವರು ದೆಹಲಿಯಿಂದಲೇ ಪಕ್ಷದ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸಬಲ್ಲರು. ಅವರ ಗಮನ ರಾಷ್ಟ್ರ ರಾಜಕೀಯದ ಮೇಲೆ ಇಡಬಹುದು.
ಈ ಮೊದಲು ಕೇಜ್ರವಾಲ್ ಪಂಜಾಬ್ ಮುಖ್ಯಮಂತ್ರಿಯಾಗಬಹುದು ಎಂದು ಹೇಳಲಾಗಿತ್ತು ಆಗಲೂ ಅವರು ಏನೂ ಮಾತನಾಡಲಿಲ್ಲ, ಅವರ ಬದಲು ಭಗವಂತ್ ಮಾನ್ ಮಾತನಾಡಿದ್ದರು. ಈಗ ರಾಜ್ಯ ಸಭೆಗೆ ಹೋಗುವ ಬಗ್ಗೆಯೂ ಮಾತನಾಡಿಲ್ಲ, ಇಷ್ಟೆಲ್ಲಾ ಚರ್ಚೆಗಳು ನಡೆಯುತ್ತಿದ್ದರೂ ಅವರು ಮಾತ್ರ ಮೌನ ಕಾಯ್ದುಕೊಂಡಿದ್ದಾರೆ. ಕೇಜ್ರವಾಲ್ ತಮ್ಮದೇ ಪಕ್ಷದೊಳಗೆ ಆಂತರಿಕ ವಿರೋಧವನ್ನು ಎದುರಿಸುತ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ.