Friday, August 1, 2025
Homeರಾಜ್ಯವಿಧಾನಸಭೆ ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಲು 6 ಹಿರಿಯ ಶಾಸಕರ ನಾಮ ನಿರ್ದೇಶನ

ವಿಧಾನಸಭೆ ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಲು 6 ಹಿರಿಯ ಶಾಸಕರ ನಾಮ ನಿರ್ದೇಶನ

Assembly Speaker Nominates 6 Senior MLAs to Preside in Absence of Speaker

ಬೆಂಗಳೂರು, ಜು.31-ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ವಿಧಾನಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಳ್ಳಲು ಆರು ಮಂದಿ ಹಿರಿಯ ಶಾಸಕರನ್ನು ನಾಮ ನಿರ್ದೇಶನ ಮಾಡಲಾಗಿದೆ.ಅಪ್ಪಾಜಿ ನಾಡಗೌಡ, ತನ್ನೀರ್‌ ಸೇಠ್‌, ಬಿ. ಆರ್‌. ಪಾಟೀಲ್‌, ಅಬ್ಬಯ್ಯ ಪ್ರಸಾದ್‌, ಆರಗ ಜ್ಞಾನೇಂದ್ರ, ಎಂ. ಟಿ. ಕೃಷ್ಣಪ್ಪ ಅವರು ಸಭಾಧ್ಯಕ್ಷರ ಅನುಪಸ್ಥಿತಿಯಲ್ಲಿ ವಿಧಾನಸಭೆಯ ಅಧ್ಯಕ್ಷತೆ ವಹಿಸಲಿರುವ ಸದಸ್ಯರೆಂದು ಸಭಾಧ್ಯಕ್ಷ ಯು.ಟಿ.ಖಾದರ್‌ ನಾಮ ನಿರ್ದೇಶನ ಮಾಡಿದ್ದಾರೆ.

ಕರ್ನಾಟಕ ವಿಧಾನಸಭೆಯ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಾವಳಿಗಳ ನಿಯಮ 9ರ ಮೇರೆಗೆ ಸಭಾಧ್ಯಕ್ಷರು 6 ಮಂದಿ ವಿಧಾನಸಭಾ ಸದಸ್ಯರನ್ನು ಮುಂದಿನ ಆದೇಶದವರೆಗೆ ನಾಮನಿರ್ದೇಶನ ಮಾಡಿದ್ದಾರೆ ಎಂದು ವಿಧಾನಸಭೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Latest News