Friday, June 13, 2025
Homeರಾಷ್ಟ್ರೀಯ | Nationalಬಾಬಾ ಸಿದ್ದಿಕ್‌ ಹಂತಕ ಅಖ್ತರ್‌ ಕೆನಡಾದಲ್ಲಿ ಬಂಧನ

ಬಾಬಾ ಸಿದ್ದಿಕ್‌ ಹಂತಕ ಅಖ್ತರ್‌ ಕೆನಡಾದಲ್ಲಿ ಬಂಧನ

ಮುಂಬೈ, ಜೂ.12- ಎನ್‌ಸಿಪಿ ನಾಯಕ ಬಾಬಾ ಸಿದ್ದಿಕ್‌ ಹತ್ಯೆಯ ಪ್ರಮುಖ ಸಂಚುಕೋರ ಎಂದು ಹೇಳಲಾಗುವ ಜೀಶನ್‌ ಅಖ್ತರ್‌ ಅವರನ್ನು ಕೆನಡಾದಲ್ಲಿ ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹ ಖಾತೆ ರಾಜ್ಯ ಸಚಿವ ಯೋಗೇಶ್‌ ಕದಮ್‌ ತಿಳಿಸಿದ್ದಾರೆ. ಮೂಲಗಳ ಪ್ರಕಾರ, ಅಖ್ತರ್‌ (22) ಅವರನ್ನು ನಕಲಿ ಪಾಸ್‌‍ಪೋರ್ಟ್‌ ಪ್ರಕರಣದಲ್ಲಿ ಬಂಧಿಸಲಾಗಿದೆ.

ಬಾಬಾ ಸಿದ್ದಿಕ್‌ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ ಜೀಶನ್‌ ಅವರನ್ನು ಕೆನಡಾದಲ್ಲಿ ಬಂಧಿಸಲಾಗಿದೆ. ಅವರನ್ನು ಭಾರತಕ್ಕೆ ಮರಳಿ ಕರೆತರುವ ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಅವರನ್ನು ವಾಪಸ್‌‍ ಕರೆತಂದ ನಂತರ ನಾವು ಅವರನ್ನು ಮತ್ತಷ್ಟು ವಿಚಾರಣೆ ಮಾಡುತ್ತೇವೆ ಎಂದು ಕದಮ್‌ ಪಿಟಿಐ ವೀಡಿಯೊಗಳಿಗೆ ತಿಳಿಸಿದ್ದಾರೆ.

ಮುಂಬೈ ಪೊಲೀಸರ ಪ್ರಕಾರ, ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಲಾರೆನ್‌್ಸ ಬಿಷ್ಣೋಯ್‌ ಅವರ ಸಹೋದರ ಅನ್ಮೋಲ್‌ ಬಿಷ್ಣೋಯ್‌‍, ಜೀಶನ್‌ ಅಖ್ತರ್‌ ಮತ್ತು ಶುಭಂ ಲೋಂಕರ್‌ ಅವರಿಗೆ ಎನ್‌ಸಿಪಿ ನಾಯಕನ ಹತ್ಯೆಯನ್ನು ನಡೆಸಲು ಒಪ್ಪಂದ ಮಾಡಿಕೊಂಡಿದ್ದರು. ಮಹಾರಾಷ್ಟ್ರದ ಮಾಜಿ ಸಚಿವ ಸಿದ್ದಿಕ್‌ ಅವರನ್ನು ಅಕ್ಟೋಬರ್‌ 12, 2024 ರಂದು ಬಾಂದ್ರಾ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು ಇಲ್ಲಿಯವರೆಗೆ ಕನಿಷ್ಠ 25 ಜನರನ್ನು ಬಂಧಿಸಿದ್ದಾರೆ.

RELATED ARTICLES

Latest News