ಬೆಂಗಳೂರು, ಆ.4– ಶ್ರಾವಣ ಮಾಸ ಸಾಲುಸಾಲು ಹಬ್ಬಗಳನ್ನು ಹೊತ್ತು ತಂದಿದ್ದು, ವರಮಹಾಲಕ್ಷ್ಮಿ ಹಬ್ಬಕ್ಕೆ ಇನ್ನು ನಾಲ್ಕು ದಿನ ಬಾಕಿ ಇದ್ದು ಏಲಕ್ಕಿ ಬಾಳೆಹಣ್ಣಿನ ಬೆಲೆ ಗಗನಕ್ಕೆ ಏರುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದೆ.
ಶ್ರಾವಣದಲ್ಲಿ ಹಬ್ಬಗಳು, ಮದುವೆ, ನಾಮಕರಣ, ಗೃಹಪ್ರವೇಶ, ದೇವಾಲಯಗಳಲ್ಲಿ ಪೂಜೆ ಸೇರಿದಂತೆ ಶುಭಕಾರ್ಯಗಳು ಹೆಚ್ಚಾಗಿ ನಡೆಯಲಿದ್ದು, ಪೂಜೆಯಲ್ಲಿ ಪ್ರಮುಖ ಆಕರ್ಷಣೆ ಹಾಗೂ ಅಗ್ರಗಣ್ಯಸ್ಥಾನ ಪಡೆದಿರುವ ಬಾಳೆಹಣ್ಣಿನ ಬೆಲೆ ಏರಿಕೆಯಾಗಿದ್ದು, ಆಷಾಢಮಾಸದಲ್ಲಿ ಕೆಜಿಗೆ 60 ರೂ.ಗಳಿಂದ 70 ರೂ.ಗೆ ಮಾರಾಟವಾಗುತ್ತಿದ್ದ ಬಾಳೆಹಣ್ಣು ಪ್ರಸ್ತುತ 100 ರೂ. ತಲುಪಿದ್ದು, ಹಬ್ಬಕ್ಕೆ ಮತ್ತಷ್ಟು ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
ರಾಜ್ಯದಲ್ಲಿ ಹೆಚ್ಚಾಗಿ ಬಾಳೆ ಬೆಳೆಯುವ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಆಷಾಢದಲ್ಲಿ ಬೀಸಿದ ಭಾರೀ ಗಾಳಿಗೆ ಬಾಳೆಗಿಡಗಳು ಮುರಿದುಬಿದ್ದಿದ್ದು, ಇಳುವರಿ ಕುಂಠಿತವಾಗಿದೆ. ಜೊತೆಗೆ ರೋಗಬಾಧೆಯಿಂದಲೂ ಸಹ ಈ ಬಾರಿ ರೈತರಿಗೆ ಇಳುವರಿಯಲ್ಲಿ ಭಾರೀ ನಷ್ಟವಾಗಿದೆ. ಇರುವ ತೋಟಗಳಿಗೆ ಭಾರೀ ಬೇಡಿಕೆ ಬಂದಿದ್ದು, ಹಾಪ್ಕಾಮ್ಸೌನಲ್ಲಿ ಏಲಕ್ಕಿ ಬಾಳೆಗೆ 85 ರೂ.ಗಳಿಂದ 87 ರೂ. ಬೆಲೆ ನಿಗದಿ ಮಾಡಲಾಗಿದೆ. ಮಾರುಕಟ್ಟೆಯಲ್ಲಿ 120 ರೂ.ಗಳಿಗೆ ಮಾರಾಟವಾಗುತ್ತಿದೆ.
ಇದರಿಂದ ಬಾಳೆಕಾಯಿ ಮಂಡಿಯವರು ಹಾಗೂ ವರ್ತಕರು ರೈತರ ತೋಟಗಳಿಗೆ ಭೇಟಿ ನೀಡಿ ಖರೀದಿಗೆ ಮುಂದಾಗಿದ್ದಾರೆ. ಆದರೂ ಸಹ ಅಪರೂಪಕ್ಕೊಮೆ ಬೆಲೆ ಬಂದಿದೆ. ನಾವು ತೋಟ ಕೊಡುವುದಿಲ್ಲ. ನಾವೇ ಮಾರಾಟ ಮಾಡುತ್ತೇವೆ ಎಂದು ಕೆಲ ರೈತರು ಮಾರುಕಟ್ಟೆಗೆ ಬಾಳೆಕಾಯಿಯನ್ನು ತಂದು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ.
ಪಚ್ಬಾಳೆ ಬೆಲೆಯೂ ಏರಿಕೆ :
ಸಾಮಾನ್ಯವಾಗಿ ಪಚ್ಬಾಳೆ ಕೆಜಿಗೆ 30 ರೂ. ದಾಟಿದರೆ ಹೆಚ್ಚು. ಆದರೆ ಕೆಲವು ತಿಂಗಳುಗಳಿಂದ 45 ರೂ.ಗೆ ಮಾರಾಟವಾಗುತ್ತಿದ್ದು, ಪ್ರಸ್ತುತ ಈ ಹಣ್ಣು ಕೂಡ 50 ರೂ. ತಲುಪಿದೆ. ಬಡವರು ಹಬ್ಬ ಮಾಡುವುದೇ ದುಸ್ತರವಾಗಿದೆ. ಆದರೂ ಸಹ ಸಂಪ್ರದಾಯವನ್ನು ಬಿಡಬಾರದು ಎಂದು ದುಬಾರಿ ಬೆಲೆ ತೆತ್ತು ಹಬ್ಬಕ್ಕೆ ಅಗತ್ಯವಸ್ತುಗಳ ಖರೀದಿಯಲ್ಲಿ ಗ್ರಾಹಕರು ತೊಡಗಿದ್ದಾರೆ.
- ವೋಟ್ ಚೋರಿ ಆರೋಪ : ಸಹಿ ಸಮೇತ ಮಾಹಿತಿ ನೀಡುವಂತೆ ರಾಹುಲ್ ಗಾಂಧಿಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಸೂಚನೆ
- ಒಳಮೀಸಲಾತಿ ಕುರಿತು ಆ.16ರಂದು ವಿಶೇಷ ಸಚಿವ ಸಂಪುಟ ಸಭೆ
- ಟ್ರಂಪ್ನಿಂದ ಆರ್ಥಿಕ ಬ್ಲ್ಯಾಕ್ಮೇಲ್ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ
- ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಮನೆ ಮೇಲೆ ಇಡಿ ದಾಳಿ
- ಡಿಸಿಎಂ ಡಿಕೆಶಿ ಚಲಾಯಿಸಿದ್ದ ದ್ವಿಚಕ್ರ ವಾಹನದ ಮೇಲಿದ್ದ ದಂಡ ಪಾವತಿ