ಬೆಂಗಳೂರು, ಮೇ 29- ಹೊರ ರಾಜ್ಯದಿಂದ ನಾಡ ಬಂದೂಕು, ಪಿಸ್ತೂಲು ಮತ್ತು ಮದ್ದು ಗುಂಡುಗಳನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ನಗರದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದ ರೌಡಿ ಹಾಗೂ ಶಸಾಸಗಳನ್ನು ಪೂರೈಸುತ್ತಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಜಿಹಳ್ಳಿ ಪೊಲೀಸ್ ಠಾಣೆಯ ರೌಡಿ ಹಾಗೂ ಶಸಾಸಗಳನ್ನು ಪೂರೈಸುತ್ತಿದ್ದ ಪಂಜಾಬ್ನ ತೇಜ್ ಬಹದ್ದೂರ್ನಗರದ ನಿವಾಸಿಯನ್ನು ಬಂಧಿಸಿ, ನಾಡ ಬಂದೂಕು, ಪಿಸ್ತೂಲು ಹಾಗೂ ಎರಡು ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.
ಕೆಜಿಹಳ್ಳಿ ರೌಡಿಯೊಬ್ಬ ಬಂದೂಕು, ಪಿಸ್ತೂಲು ಹಾಗೂ ಮದ್ದು ಗುಂಡುಗಳನ್ನು ಅಕ್ರಮವಾಗಿ ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾನೆಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ಲಭಿಸಿದೆ.
ಈ ಮಾಹಿತಿ ಆಧಾರದ ಮೇಲೆ ಆರ್ಮ್ಸೌ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ಸಿಸಿಬಿ ಸಂಘಟಿತ ಅಪರಾಧ ದಳದ ಅ ಕಾರಿ ಹಾಗೂ ಸಿಬ್ಬಂದಿ ಡಿಜೆಹಳ್ಳಿಯ ಸ್ವತಂತ್ರನಗರದ ಮುಖ್ಯ ರಸ್ತೆಗೆ ಧಾವಿಸಿ ರೌಡಿಯನ್ನು ಬ್ಯಾಗ್ ಸಮೇತ ವಶಕ್ಕೆ ಪಡೆದಿದ್ದಾರೆ.
ನಂತರ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದಾಗ ಆತ ಕೆಜಿಹಳ್ಳಿ ಪೊಲೀಸ್ ಠಾಣೆಯ ರೌಡಿಯೆಂಬುವುದು ಗೊತ್ತಾಗಿದೆ. ಆತನ ಬಳಿ ಇದ್ದ ಬ್ಯಾಗ್ ಪರಿಶೀಲಿಸಿದಾಗ ಒಂದು ನಾಡ ಬಂದೂಕು, ಪಿಸ್ತೂಲು ಹಾಗೂ ಎರಡು ಜೀವಂತ ಗುಂಡುಗಳು ಇರುವುದು ಕಂಡು ಬಂದಿದ್ದು ಅವುಗಳನ್ನು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಶಸಾಸಗಳನ್ನು ಪೂರೈಸುತ್ತಿದ್ದ ವ್ಯಕ್ತಿಯ ಬಗ್ಗೆ ಮಾಹಿತಿ ನೀಡಿದ್ದು , ಈ ಮಾಹಿತಿ ಅನ್ವಯ ಪಂಜಾಬ್ನ ತೇಜ್ ಬಹದ್ದೂರ್ನಗರದ ನಿವಾಸಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಶಸಾಸಗಳನ್ನು ಪೂರೈಸುತ್ತಿದ್ದುದಾಗಿ ಹೇಳಿದ್ದಾನೆ.