Friday, June 6, 2025
Homeರಾಷ್ಟ್ರೀಯ | Nationalಬೆಂಗಳೂರು ಕಾಲ್ತುಳಿತಕ್ಕೆ ಬಿಸಿಸಿಐ ಹೊಣೆ ಅಲ್ಲ ; ಅರುಣ್ ಧುಮಾಲ್

ಬೆಂಗಳೂರು ಕಾಲ್ತುಳಿತಕ್ಕೆ ಬಿಸಿಸಿಐ ಹೊಣೆ ಅಲ್ಲ ; ಅರುಣ್ ಧುಮಾಲ್

'BCCI had no knowledge': IPL Chairman Arun Dhumal

ನವದೆಹಲಿ,ಜೂ.5- ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ನಡೆದಿರುವ ಕಾಲ್ತುಳಿತ ನಿಜಕ್ಕೂ ಘೋರ ದುರಂತರ ವಾಗಿದ್ದು, ಈ ಪ್ರಕರಣಕ್ಕೆ ಬಿಸಿಸಿಐ ಹೊಣೆ ಅಲ್ಲ ಎಂದು ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಿನ್ನೆ ನಡೆದ ಐಪಿಎಲ್ ವಿಜಯೋತ್ಸವದ ಕುರಿತು ಬಿಸಿಸಿಐಗೆ ಯಾವುದೇ ಮಾಹಿತಿ ಇರಲಿಲ್ಲ, ಪಂಜಾಬ್ ಕಿಂಗ್ಸ್ ವಿರುದ್ಧ ಆರ್ ಸಿಬಿ ಗೆಲುವು ಸಾಧಿಸಿ ಮೊಟ್ಟ ಮೊದಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿದ ನಂತರ, ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ವಿಜಯೋತ್ಸವದ ವಿಷಯ ಕುರಿತು ಬಿಸಿಸಿಐ ಜೊತೆಗೆ ಕರ್ನಾಟಕ ಕ್ರಿಕೆಟ್ ಆಸೋಸಿಯೇಷನ್ ಕಡೆಯಿಂದ ಯಾವುದೇ ಮಾಹಿತಿ ನೀಡಿರಲಿಲ್ಲ ಆದ್ದರಿಂದ ಈ ದುರಂತದ ಹೊಣೆಯನ್ನು ಬಿಸಿಸಿಐ ವಹಿಸಲು ಸಾಧ್ಯವಿಲ್ಲ ಎಂದು ಧುಮಾಲ್ ತಿಳಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ವಿಶ್ವದೆಲ್ಲೆಡೆ ಫ್ಯಾನ್ಸ್ ಕ್ರೇಜ್ ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಟ್ರೋಫಿ ಗೆದ್ದಿದ್ದು, ಈ ಸಂಭ್ರಮವನ್ನು ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದ ಮರುದಿನವೇ ವಿಜಯೋತ್ಸವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಪರಿಣಾಮ ತಮ್ಮ ಮೆಚ್ಚಿನ ತಂಡದ ಆಟಗಾರರನ್ನು ಕಣ್ಣುಂಬಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಆಗಮಿಸಿದ್ದರಿಂದ ಈ ದುರಂತ ಸಂಭವಿಸಿದ್ದು, 11 ಮಂದಿ ಸಾವನ್ನಪ್ಪಿ, 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಇದು ನಿಜಕ್ಕೂ ಘೋರ ದುರಂತ:
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್, ದುರಂತದಲ್ಲಿ ಸಾವನ್ನಪ್ಪಿದವರಿಗೆ ಕಂಬನಿ ಮಿಡಿದಿದ್ದಾರೆ.

ಇದು ನಿಜಕ್ಕೂ ಘೋರ ದುರಂತ, ಸಂಭ್ರಮಾಚರಣೆಯು ಶೋಕಚರಣೆಯಾಗಿ ಪರಿಣಮಿಸಿದೆ. ದುರಂತದಲ್ಲಿ ಸಾವನ್ನಪ್ಪಿದ ಕುಟುಂಬದವರು ಹಾಗೂ ಹಿತೈಷಿಗಳಿಗೆ ಈ ದುರಂತದ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಹಾರೈಸುತ್ತೇನೆ. ಕಳೆದ ರಾತ್ರಿ ಬಿಸಿಸಿಐ ಹಾಗೂ ಐಪಿಎಲ್ ಕಮಿಟಿಗೆ ಈ ದುರಂತದ ಬಗ್ಗೆ ಮಾಹಿತಿ ದೊರೆತಿದ್ದು, ವಿಜಯೋತ್ಸವದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲದ ಕಾರಣ, ಹೊಣೆ ಹೊರಲು ನಾವು ಸಾಧ್ಯವಿಲ್ಲು ಎಂದು ಧುಮಾಲ್ ಹೇಳಿದ್ದಾರೆ.

ಆಕಸ್ಮಿಕ ಘಟನೆ:
ಚಿಈ ದುರಂತ ಆಕಸ್ಥಿಸವಾಗಿ ನಡೆದಿದೆ. ಈ ಘಟನೆಯಿಂದ ಅನೇಕ ಅನಾಹುತ ಹಾಗೂ ನಷ್ಟ ಸಂಭವಿಸಿದೆ. ಆದರೆ ಇದರಲ್ಲಿ ಬಿಸಿಸಿಐನ ಯಾವುದೇ ಪಾತ್ರವಿಲ್ಲ. ಆದರೆ ಈ ದುರಂತ ನಮಗೊಂದು ಪಾಠವಾಗಿದೆ. ಮುಂದಿನ ದಿನಗಳಲ್ಲಿ ಸಂಭ್ರಮಾಚರಣೆಯ ವೇಳೆ ಕಠಿಣ ನಿಯಮಗಳನ್ನು ತೆಗೆದುಕೊಳ್ಳುತ್ತೇವೆಟಿ ಎಂದು ಬಿಸಿಸಿಐ ನಿರ್ದೇಶಕ ದೇವಜಿತ್ ಸೈಕಿಯಾ ತಿಳಿಸಿದ್ದಾರೆ.

RELATED ARTICLES

Latest News