Tuesday, September 17, 2024
Homeಬೆಂಗಳೂರುಬೆಂಗಳೂರು : ಕೆರೆಗೆ ಹಾರಿ ಪ್ರೇಮಿಗಳ ಆತಹತ್ಯೆ

ಬೆಂಗಳೂರು : ಕೆರೆಗೆ ಹಾರಿ ಪ್ರೇಮಿಗಳ ಆತಹತ್ಯೆ

ಬೆಂಗಳೂರು,ಜು.3- ಪ್ರೇಮಿಗಳಿಬ್ಬರು ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಘಟನೆ ತಲಘಟ್ಟಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಣನಕುಂಟೆಯ ಶ್ರೀಕಾಂತ್‌(25) ಮತ್ತು ಅಂಜನಾಪುರದ ಅಂಜನಾ (20) ಆತಹತ್ಯೆಗೆ ಶರಣಾದ ಪ್ರೇಮಿಗಳು.

ಕೋಣನಕುಂಟೆಯ ಸಿಲಿಕಾನ್‌ ಸಿಟಿ ಕಾಲೇಜಿನಲ್ಲಿ ಶ್ರೀಕಾಂತ್‌ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದರೆ, ಇದೇ ಕಾಲೇಜಿನಲ್ಲಿ ಅಂಜನಾ ಬಿಬಿಎ ವ್ಯಾಸಂಗ ಮಾಡುತ್ತಿದ್ದರು.ಇವರಿಬ್ಬರೂ ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಪೋಷಕರಿಗೆ ತಿಳಿದು ವಿರೋಧ ವ್ಯಕ್ತಪಡಿಸಿದ್ದರು.

ಮುಂದೇನು ಮಾಡಬೇಕೆಂದು ತೋಚದೆ ನಮಿಬ್ಬರನ್ನು ದೂರ ಮಾಡುತ್ತಾರೆಂದು ಅರಿತು ಇವರಿಬ್ಬರೂ ಮನೆಬಿಟ್ಟು ಹೋಗಲು ತೀರ್ಮಾನಿಸಿದ್ದಾರೆ.ಅದರಂತೆ ಮನೆಯಲ್ಲಿ ನನ್ನ ಸಾವಿಗೆ ನಾನೇ ಕಾರಣ ಎಂದು ಡೆತ್‌ನೋಟ್‌ ಬರೆದಿಟ್ಟು ಜೂನ್‌ 1 ರಂದು ರಾತ್ರಿ ಅಂಜನಾ ಮನೆಬಿಟ್ಟು ಹೋಗಿದ್ದಳು. ಅದೇ ದಿನ ರಾತ್ರಿ ಶ್ರೀಕಾಂತ್‌ ಸಹ ನನ್ನ ಸಾವಿಗೆ ನಾನೇ ಕಾರಣವೆಂದು ವಿಡಿಯೋ ಮಾಡಿ ಮನೆಯಿಂದ ಹೊರಬಂದಿದ್ದಾನೆ.

ತಲಘಟ್ಟಪುರದ ತುಳಸಿಕೆರೆ ಬಳಿ ಬಂದ ಇವರಿಬ್ಬರೂ ಕೈಗಳಿಗೆ ಒಟ್ಟಿಗೇ ದಾರ ಕಟ್ಟಿಕೊಂಡು ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ.ಇತ್ತ ಶ್ರೀಕಾಂತ್‌ ನಾಪತ್ತೆಯಾದ ಬಗ್ಗೆ ಕೋಣನಕುಂಟೆ ಪೊಲೀಸ್‌‍ ಠಾಣೆಯಲ್ಲಿ ಆತನ ಪೋಷಕರು ದೂರು ನೀಡಿದ್ದರು. ಅತ್ತ ಅಂಜನಾ ಕಾಣೆಯಾದ ಬಗ್ಗೆ ತಲಘಟ್ಟಪುರ ಪೊಲೀಸ್‌‍ ಠಾಣೆಗೆ ಆಕೆಯ ಪೋಷಕರು ದೂರು ನೀಡಿದ್ದಾರೆ.

ಎರಡೂ ಠಾಣೆಗಳ ಪೊಲೀಸರು ಇವರಿಬ್ಬರ ಹುಡುಕಾಟದಲ್ಲಿ ತೊಡಗಿದ್ದಾಗ ನಿನ್ನೆ ಮಧ್ಯಾಹ್ನ ತಲಘಟ್ಟಪುರ ಪೊಲೀಸ್‌‍ ಠಾಣಾ ವ್ಯಾಪ್ತಿಯ ನೈಸ್‌‍ ರಸ್ತೆ ಸಮೀಪವಿರುವ ತುಳಸಿಪುರ ಕೆರೆಯಲ್ಲಿ ಇವರಿಬ್ಬರ ಮೃತದೇಹಗಳುಪತ್ತೆಯಾಗಿವೆ.

ಸುದ್ದಿ ತಿಳಿದು ತಲಘಟ್ಟಪುರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತದೇಹಗಳನ್ನು ಹೊರತೆಗೆದು ಪರಿಶೀಲನೆ ನಡೆಸಿ ಕೆಂಪೇಗೌಡ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ತಲಘಟ್ಟಪುರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News