Tuesday, October 14, 2025
Homeಬೆಂಗಳೂರುಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು, ತುಂಬಿತುಳುಕುವ ಕಸ : ವಿವಾದಕ್ಕೆ ಕಾರಣವಾಯ್ತು ಕಿರಣ್ ಮಜುಂದಾರ್‌ ಶಾ ಪೋಸ್ಟ್

ಬೆಂಗಳೂರಲ್ಲಿ ಹದಗೆಟ್ಟ ರಸ್ತೆಗಳು, ತುಂಬಿತುಳುಕುವ ಕಸ : ವಿವಾದಕ್ಕೆ ಕಾರಣವಾಯ್ತು ಕಿರಣ್ ಮಜುಂದಾರ್‌ ಶಾ ಪೋಸ್ಟ್

Bengaluru Roads: Kiran Mazumdar-Shaw Criticizes Infrastructure

ಬೆಂಗಳೂರು,ಅ.14- ರಾಜಧಾನಿ ಬೆಂಗಳೂರಿನಲ್ಲಿ ಹಾಳಾಗಿರುವ ರಸ್ತೆಗುಂಡಿಗಳು ಮತ್ತು ಕಸದ ಸಮಸ್ಯೆ ಕುರಿತು ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಆರೋಪ ಭಾರೀ ವಿವಾದಕ್ಕೆ ಕಾರಣವಾಗಿದೆ.

ವಿದೇಶಿ ಅತಿಥಿಯೊಬ್ಬರು ಕೇಳಿದ ಪ್ರಶ್ನೆಯ ಬಗ್ಗೆ ತಮ ಅಧಿಕೃತ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹಂಚಿಕೊಂಡಿರುವ ಅವರು, ನಗರದಲ್ಲಿ ರಸ್ತೆಗಳ ಗುಂಡಿಗಳ ಸಮಸ್ಯೆ ಮತ್ತೆ ಬೆಳಕಿಗೆ ಬಂದಿದೆ. ಅದನ್ನು ಯಾವುದೇ ಭಾರತೀಯರು ಕೇಳಲು ಬಯಸುವುದಿಲ್ಲ. ಬೆಂಗಳೂರಿನ ರಸ್ತೆಗಳು ಮಾತ್ರವಲ್ಲ, ಇಲ್ಲಿ ವಿಲೇವಾರಿ ಮಾಡದ ಕಸದ ಬಗ್ಗೆಯೂ ಸರ್ಕಾರದ ಗಮನಸೆಳೆದಿದ್ದಾರೆ.

ಬಯೋಕಾನ್‌ ಪಾರ್ಕ್‌ಗೆ ಭೇಟಿ ನೀಡಿದ ವಿದೇಶಿ ಉದ್ಯಮಿಯೊಬ್ಬರು ರಸ್ತೆಗಳು ಏಕೆ ಕೆಟ್ಟದಾಗಿವೆ? ಸುತ್ತಲೂ ಇಷ್ಟೊಂದು ಕಸ ಏಕೆ ಇದೆ? ಸರ್ಕಾರ ಹೂಡಿಕೆಯನ್ನು ಬೆಂಬಲಿಸಲು ಬಯಸುವುದಿಲ್ಲವೇ? ನಾನು ಚೀನಾದಿಂದ ಬಂದಿದ್ದೇನೆ. ಇಲ್ಲಿನ ವಾತಾವರಣ ಅನುಕೂಲಕರವಾಗಿರುವಾಗ ಭಾರತವು ರಸ್ತೆಗಳ ಸುಧಾರಣೆಗೆ ಏಕೆ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಳಿದರು. ಸಂಚಾರದ ಜೊತೆಗೆ, ಮುಂಬೈನ ರಸ್ತೆಗಳಂತೆಯೇ ಬೆಂಗಳೂರಿನ ರಸ್ತೆಗಳು ಸಹ ಅವುಗಳ ಗುಂಡಿಗಳಿಗೆ ಕುಖ್ಯಾತವಾಗಿವೆ ಎಂಬುದನ್ನು ಪ್ರಸ್ತಾಪಿಸಿದ್ದಾರೆ.

ರಸ್ತೆಗಳನ್ನು ಸರಿಪಡಿಸುವ ಸರ್ಕಾರದ ಇಚ್ಛಾಶಕ್ತಿಯನ್ನು ಕಿರಣ್‌ ಮಜುಂದಾರ್‌ ಶಾ ಪ್ರಶ್ನಿಸಿದ್ದು, ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸಲು ರಾಜಕೀಯ ಇಚ್ಛಾಶಕ್ತಿ ಇದೆಯೇ? ನಮ ನಗರವನ್ನು ಸರಿಪಡಿಸಲು ಮತ್ತು ಅದನ್ನು ವಿಶ್ವ ದರ್ಜೆಯನ್ನಾಗಿ ಮಾಡಲು ರಾಜಕೀಯ ನಾಯಕತ್ವವು ರಾಜಕೀಯ ತುರ್ತುಸ್ಥಿತಿಯನ್ನು ಏಕೆ ತೋರಿಸುತ್ತಿಲ್ಲ ಎಂಬುದರ ಬಗ್ಗೆ ಗೊಂದಲವಿದೆ. ಬಜೆಟ್‌ ಹಂಚಿಕೆ ಮತ್ತು ಕಾರ್ಯಗತಗೊಳಿಸುವಿಕೆಯ ವಿಷಯದಲ್ಲಿ ಗಮನಹರಿಸುವುದಕ್ಕಿಂತ ಹೆಚ್ಚಿನದನ್ನು ಇದು ತೆಗೆದುಕೊಳ್ಳುವುದಿಲ್ಲ. ಇದನ್ನು ಮಾಡಲು ಒಂದು ಶತಕೋಟಿ ಡಾಲರ್‌ ಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನ ಗುಂಡಿಗಳಿಂದ ಕೂಡಿದ ರಸ್ತೆಗಳು ಮತ್ತು ಟ್ರಾಫಿಕ್‌ಜಾಮ್‌ನಲ್ಲಿ ಸಿಲುಕಿರುವ ಸರ್ಪಗಾವಲು ವಾಹನಗಳು ಭಾರತದಾದ್ಯಂತ ಕುಖ್ಯಾತವಾಗಿವೆ. ಐಟಿ ಕೇಂದ್ರದ ನಿವಾಸಿಗಳು ರಸ್ತೆಗಳಲ್ಲಿ ತುಂಬಿರುವ ವಾಹನಗಳ ಜನಸಂಖ್ಯೆಯ ಹೊರೆಯನ್ನು ನಿರಂತರವಾಗಿ ಹೊರುತ್ತಿದ್ದಾರೆ.

ಕಿರಣ್‌ ಮಜುಂದರ್‌ ಶಾ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ರಿಲಯನ್‌್ಸ ಇಂಡಸ್ಟ್ರೀಸ್‌‍ನ ಹಿರಿಯ ಉಪಾಧ್ಯಕ್ಷ ವೈಭವ್‌ ಗೋಯೆಲ್‌, ನಿಯಮಿತವಾಗಿ ಮತದಾನ ಮಾಡುವುದರಿಂದ ಉತ್ತಮ ರೂಪದ ಹೊಣೆಗಾರಿಕೆಗೆ ಕಾರಣವಾಗುತ್ತದೆ ಎಂಬ ಪ್ರಜಾಪ್ರಭುತ್ವದ ಮೂಲ ಪ್ರಮೇಯವು ಒಂದು ಪುರಾಣ ಎಂದು ಸಾಬೀತಾಗಿದೆ. ಸಮಾಜದಲ್ಲಿ ಸಾಮೂಹಿಕ ಜವಾಬ್ದಾರಿಗಿಂತ ವೈಯಕ್ತಿಕ ದುರಾಸೆ ಹೆಚ್ಚು ಶಕ್ತಿಶಾಲಿಯಾಗಿದೆ. ಚುನಾವಣಾ ವ್ಯವಸ್ಥೆಯು ಇನ್ನಷ್ಟು ಹದಗೆಡಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಭಾರತವನ್ನು ಚೀನಾಕ್ಕೆ ಎಂದಿಗೂ ಹೋಲಿಸಬಾರದು, ಅವರು ದಶಕಗಳಷ್ಟು ಮುಂದಿದ್ದಾರೆ. ನಾಗರಿಕ ಪ್ರಜ್ಞೆಯ ವಿಷಯಕ್ಕೆ ಬಂದರೆ, ಶ್ರೀಲಂಕಾ, ಭೂತಾನ್‌, ನೇಪಾಳಗಳು ಸಹ ಬಹಳ ಮುಂದಿವೆ. ದುಃಖಕರವೆಂದರೆ ಭಾರತದ ಪ್ರತಿಯೊಂದು ನಗರದ ಪರಿಸ್ಥಿತಿ ಹೀಗಿದೆ. ಕಳಪೆ ಮೂಲಸೌಕರ್ಯ, ನಾಗರಿಕ ಪ್ರಜ್ಞೆ. ಬೃಹತ್‌ ಶಿಕ್ಷಣ, ಉಪಕರಣಗಳು ಮತ್ತು ಜಾರಿ ಅಭಿಯಾನದ ಅಗತ್ಯವಿದೆ. ಚೆನ್ನೈನಲ್ಲಿ ನಾನು ನೋಡುತ್ತೇನೆ , ಟನ್‌ಗಟ್ಟಲೆ ಕಸದ ಬುಟ್ಟಿಗಳಿವೆ, ಆದರೆ ಜನರು ಇನ್ನೂ ಬೀಚ್‌ನಾದ್ಯಂತ ಕಸ ಹಾಕುತ್ತಿದ್ದಾರೆ. ಅದು ಸಂಪನೂಲಗಳ ಕೊರತೆಯಲ್ಲ, ಅವರಿಗೆ ದಂಡ ಮತ್ತು ಚಾಟಿಯೇಟು ಹಾಕಬೇಕು ಎಂದು ಕಿಡಿಕಾರಿದ್ದಾರೆ.

ಪಿಎಸ್‌‍ಆರ್‌ಐ ಆಸ್ಪತ್ರೆಯ ನಿರ್ದೇಶಕ ಡಾ.ಸುಮೀತ್‌ ಶಾ ಕೂಡ ಟ್ವೀಟ್‌ ಮಾಡಿ, ಕಳಪೆ ಮೂಲಸೌಕರ್ಯವು ಭಾರತದ ಪ್ರಗತಿಗೆ ಅಡ್ಡಿಯಾಗುತ್ತಿದೆ. ಹಾನಿಗೊಳಗಾದ ರಸ್ತೆಗಳು, ಬೀದಿಗಳಲ್ಲಿ ಕಳಪೆ ಬೆಳಕು, ಕಸದ ರಾಶಿಗಳು, ನೀರು ನಿಲ್ಲುವುದು, ಬೀದಿ ಪ್ರಾಣಿಗಳು, ಪಾದಚಾರಿ ಮಾರ್ಗಗಳು ಇಲ್ಲದಿರುವುದು ಮತ್ತು ಇನ್ನೂ ಹೆಚ್ಚಿನವುಗಳು ಇದ್ದಾಗ ಜಿಡಿಪಿಯ ಎಲ್ಲಾ ಮಾತುಗಳು ಶೂನ್ಯವಾಗುತ್ತವೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಜುಲೈನಲ್ಲಿ ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಅವರೊಂದಿಗಿನ ಸಭೆಯ ಬಗ್ಗೆ ಉಲ್ಲೇಖಿಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್‌್ಸನಲ್ಲಿ ಪೋಸ್ಟ್‌ ಮಾಡಿದ್ದರು.

ದಶಕಗಳಲ್ಲಿ ಬೆಂಗಳೂರು ಬೆಳೆಯುತ್ತಿರುವುದನ್ನು ಕಂಡವನಾಗಿ, ನಮ ಜನರು ಎದುರಿಸುತ್ತಿರುವ ದೈನಂದಿನ ಸವಾಲುಗಳನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ – ಸಂಚಾರ ದಟ್ಟಣೆ, ದೀರ್ಘ ಪ್ರಯಾಣ ಮತ್ತು ಉತ್ತಮ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಸಾರ್ವಜನಿಕ ಬೇಡಿಕೆ. ಪ್ರಮುಖ ಯೋಜನೆಗಳನ್ನು ಸಕ್ರಿಯಗೊಳಿಸಲು ಪ್ರಮುಖ ರಕ್ಷಣಾ ಭೂ ವರ್ಗಾವಣೆಗೆ ಸಮಯೋಚಿತ ಅನುಮೋದನೆ ಕೋರಿದ್ದೇನೆ ಎಂದು ಹೇಳಿದ್ದರು.
ಗೋರಗುಂಟೆಪಾಳ್ಯದಲ್ಲಿ ಮೆಟ್ರೋ ಹಂತ -3 ಡಬಲ್‌ ಡೆಕ್ಕರ್‌ ಫ್ಲೈಓವರ್‌, ಹೆಬ್ಬಾಳ-ಸಿಲ್ಕ್ ಬೋರ್ಡ್‌ ಅವಳಿ ಸುರಂಗ ಮತ್ತು ಹೆಬ್ಬಾಳ ಬಳಿಯ ಪ್ರಮುಖ ಸಂಪರ್ಕ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಬೆಂಗಳೂರಿನ ಪ್ರಮುಖ ರಸ್ತೆಗಳನ್ನು ನಿರ್ವಹಿಸುವಲ್ಲಿ ವಿಫಲತೆ ಮತ್ತು ಹೆಚ್ಚುತ್ತಿರುವ ಗುಂಡಿಗಳ ಸಂಖ್ಯೆಗಾಗಿ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

RELATED ARTICLES

Latest News