Sunday, June 8, 2025
Homeಬೆಂಗಳೂರುಬೆಂಗಳೂರು : ಟೆಕ್ಕಿಯಿಂದ ಆಟೋ ಚಾಲಕನಿಗೆ ಚಾಕು ಇರಿತ

ಬೆಂಗಳೂರು : ಟೆಕ್ಕಿಯಿಂದ ಆಟೋ ಚಾಲಕನಿಗೆ ಚಾಕು ಇರಿತ

Bengaluru: Techie stabs auto driver

ಬೆಂಗಳೂರು,ಜೂ.8- ಕುಡಿದು ಗಲಾಟೆ ಮಾಡುತ್ತಿದ್ದ ಸಾಫ್ಟ್ ವೇರ್‌ಇಂಜಿನಿಯರ್‌ ಒಬ್ಬರು ಆಟೋ ಚಾಲಕರೊಬ್ಬರಿಗೆ ಚಾಕುವಿನಿಂದ ಇರಿದಿರುವ ಘಟನೆ ಇಂದು ಮುಂಜಾನೆ ಗೋವಿಂದಪುರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಕಮನಹಳ್ಳಿಯ ನಿವಾಸಿ ಆಟೋ ಚಾಲಕ ರಾಮ್‌ಕುಮಾರ್‌ ಎಂಬುವರು ಇರಿತದಿಂದ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಫ್ಟ್ ವೇರ್‌ ಇಂಜಿನಿಯರ್‌ ವಿಷ್ಣು ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇಂದು ಮುಂಜಾನೆ ಸುಮಾರು ಒಂದು ಗಂಟೆ ಸಮಯದಲ್ಲಿ ವಿಷ್ಣು ಕುಡಿದು ಹೆಣ್ಣೂರು ಜಂಕ್ಷನ್‌ನಲ್ಲಿ ಗಲಾಟೆ ಮಾಡುತ್ತಿದ್ದ. ಆಗ ಅಲ್ಲಿಗೆ ಬಂದ ಹೊಯ್ಸಳ ಪೊಲೀಸರು ಆತನನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಈ ಸಂದರ್ಭದಲ್ಲಿ ರಾಮ್‌ಕುಮಾರ್‌ ಮುನ್ನುಗ್ಗಿ ಆತನನ್ನು ಹಿಡಿಯಲು ಯತ್ನಿಸಿದ.

ಆಗ ರಾಮ್‌ಕುಮಾರ್‌ ಹೊಟ್ಟೆಗೆ ವಿಷ್ಣು ಚಾಕುವಿನಿಂದ ಇರಿದು ಓಡುತ್ತಿದ್ದಾಗ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ. ಈ ಬಗ್ಗೆ ರಾಮ್‌ಕುಮಾರ್‌ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News