Tuesday, September 2, 2025
Homeರಾಜ್ಯಸಾವಿನಲ್ಲೂ ಒಂದಾದ ಅಣ್ಣ-ತಮ್ಮ : ಅಣ್ಣನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ತಮ್ಮ

ಸಾವಿನಲ್ಲೂ ಒಂದಾದ ಅಣ್ಣ-ತಮ್ಮ : ಅಣ್ಣನ ಸಾವಿನ ಸುದ್ದಿ ಕೇಳಿ ಪ್ರಾಣಬಿಟ್ಟ ತಮ್ಮ

Brother dies of heart attack after hearing news of brother's death

ಯಾದಗಿರಿ,ಸೆ.2-ಅಣ್ಣ ಹೃದಯಾಘಾತದಿಂದ ಸಾವನ್ನಪ್ಪಿರುವ ಸುದ್ದಿ ತಿಳಿದ ತಮನಿಗೂ ಹೃದಯಾಘಾತವಾಗಿ ಮೃತಪಟ್ಟಿದ್ದು ಸಾವಿನಲ್ಲೂ ಅಣ್ತಮ್ಮ ಒಂದಾಗಿರುವ ಮನಕಲಕುವ ಘಟನೆ ನಡೆದಿದೆ.

ಸುರಪುರ ತಾಲ್ಲೂಕಿನ ಕೆಂಬಾವಿ ಗ್ರಾಮದ ನಿವಾಸಿಗಳಾದ ಅಣ್ಣ ಶಂಶುದ್ದೀನ್‌ (50) ಮತ್ತು ತಮ ಇರ್ಫಾನ್‌ (45) ಮೃತಪಟ್ಟವರು.ನಿನ್ನೆ ಸಂಜೆ ಶಂಶುದ್ದೀನ್‌ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಅಣ್ಣನ ಸಾವಿನ ಸುದ್ದಿ ತಿಳಿದ ತಮ ಇರ್ಫಾನ್‌ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಒಂದೇ ದಿನ ಇಬ್ಬರು ಮಕ್ಕಳ ಸಾವಿನಿಂದ ಕುಟುಂಬವೇ ಶೋಕ ಸಾಗರದಲ್ಲಿ ಮುಳುಗಿದೆ. ಕೆಂಬಾವಿ ಗ್ರಾಮದಲ್ಲಿ ಸಹೋದರರ ಸಾವಿನಿಂದ ನೀರವ ಮೌನ ಆವರಿಸಿದೆ.

ಇತ್ತೀಚಿನ ದಿನಗಳಲ್ಲಿ ಹಣ-ಆಸ್ತಿಗಾಗಿ ಅಣ್ಣ ತಮಂದಿರು ಹೊಡೆದಾಡಿಕೊಳ್ಳುವ ಘಟನೆಗಳು ನೋಡುತ್ತಿರುತ್ತೇವೆ. ಆದರೆ ಅಣ್ಣನ ಸಾವಿನ ಸುದ್ದಿ ಕೇಳಿದ ತಮನೂ ಸಹ ಹಠಾತ್‌ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವುದು ವಿಷಾದಕರ.ಕೆಂಬಾವಿ ಪೊಲೀಸ್‌‍ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

RELATED ARTICLES

Latest News