Thursday, July 4, 2024
Homeರಾಷ್ಟ್ರೀಯಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ

ಕಚೇರಿಗೆ ತಡವಾಗಿ ಬರುವ ಸರ್ಕಾರಿ ನೌಕರರ ಸಂಬಳಕ್ಕೆ ಕತ್ತರಿ

ನವದೆಹಲಿ,ಜೂ.22- ಇನ್ನು ಮುಂದೆ ಅಪ್ಪಿತಪ್ಪಿಯೂ ಅರ್ಧ ಗಂಟೆ ತಡವಾಗಿ ಕಚೇರಿಗೆ ಬಂದರೆ ಸಂಬಳಕ್ಕೆ ಕತ್ತರಿ ಬೀಳುವುದು ಗ್ಯಾರಂಟಿ. ಏಕೆಂದರೆ ಕೇಂದ್ರ ಸರ್ಕಾರ ಹೊರಡಿಸಿರುವ ನೂತನ ಅಧಿಸೂಚನೆ ಪ್ರಕಾರ ಕೇಂದ್ರ ನೌಕರರು ಹೆಚ್ಚೆಂದರೆ ಇಲಾಖೆಗೆ ಪ್ರತಿದಿನ 15 ನಿಮಿಷ ತಡವಾಗಿ ಬಂದರೆ ಮಾತ್ರ ವಿನಾಯ್ತಿ ನೀಡಲಾಗುತ್ತದೆ.

ಒಂದು ವೇಳೆ ಅರ್ಧ ಗಂಟೆ ತಡವಾದರೆ ದಿನದ ಅರ್ಧ ಸಂಬಳ ಕಡಿತಗೊಳಿ ಸುವಂತೆ ಕಟ್ಟುನಿಟ್ಟಿನ ಸೂಚನೆ ಯನ್ನು ನೀಡಲಾಗಿದೆ. ನೂತನ ಅಧಿಸೂಚನೆ ಪ್ರಕಾರ ಕೇಂದ್ರದ ಎಲ್ಲಾ ನೌಕರರು ಪ್ರತಿದಿನ ಕಡ್ಡಾಯವಾಗಿ ಬೆಳಗ್ಗೆ 9.15ರೊಳಗೆ ಕಚೇರಿಗೆ ಬರಬೇಕು. ಜೊತೆಗೆ ನಿಮ ಉಪಸ್ಥಿತಿ ನೋಂದಣಿ ಮತ್ತು ಭೌತಿಕ ಹಾಜರಾತಿಯನ್ನು ಕಡ್ಡಾಯಪಡಿಸಬೇಕು.

ಅಂದರೆ ಉದ್ಯೋಗಿಗಳು ಕಡ್ಡಾಯವಾಗಿ ಕಚೇರಿಗಳಲ್ಲಿ ಬಯೋಮೆಟ್ರಿಕ್‌ ಹಾಜರಾತಿ ವ್ಯವಸ್ಥೆಯಲ್ಲಿ ಪಂಚ್‌ ಮಾಡಲೇಬೇಕು. ಅರ್ಧಗಂಟೆ ತಡವಾಗಿ ಬಂದರೆ ಆಯಾ ಇಲಾಖೆಯ ಮುಖ್ಯಸ್ಥರು ಯಾವುದೇ ಮುಲಾಜಿಲ್ಲದೆ ದಿನದ ಅರ್ಧ ಸಂಬಳವನ್ನು ಕಡಿತ ಮಾಡಲೇಬೇಕೆಂದು ಸೂಚಿಸಲಾಗಿದೆ.

ಇತ್ತೀಚೆಗೆ ಕೇಂದ್ರ ನೌಕರರು ಕಚೇರಿಗಳಿಗೆ ತಡವಾಗಿ ಆಗಮಿಸುವುದು, ಬಯೋಮೆಟ್ರಿಕ್‌ ವ್ಯವಸ್ಥೆ ಮಾಡಿದ್ದರೂ ಉದಾಸೀನ ತೋರುವುದು, ಬೇಗ ಮನೆಗೆ ತೆರಳುವುದು ಇಂತಹ ದೂರುಗಳು ಸಾಕಷ್ಟು ಕೇಳಿಬಂದಿದ್ದವು. ಇದಕ್ಕೆ ಪೂರ್ಣ ವಿರಾಮ ಹಾಕಿರುವ ಕೇಂದ್ರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬಿಗಿಯಾದ ಕ್ರಮಗಳನ್ನು ತೆಗೆದುಕೊಂಡಿದೆ.ಹಿರಿಯರಾಗಲಿ, ಕಿರಿಯರಾಗಲಿ ಎಲ್ಲಾ ಉದ್ಯೋಗಿಗಳು ಬಯೋಮೆಟ್ರಿಕ್‌ ಹಾಜರಾತಿಯನ್ನು ಮಾಡುವುದು ಕಡ್ಡಾಯವಾಗಿರುತ್ತದೆ.

ಸಿಬ್ಬಂದಿ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ಬೆಳಗ್ಗೆ 9.15ರೊಳಗೆ ಸಿಬ್ಬಂದಿ ಕಚೇರಿಗೆ ಬರದಿದ್ದರೆ ಅರ್ಧ ದಿನ ನೀಡಲಾಗುವುದು ಎಂದು ಹೇಳಲಾಗಿದೆ. ಯಾವುದೇ ಕಾರಣಕ್ಕಾಗಿ ಉದ್ಯೋಗಿಗೆ ನಿರ್ದಿಷ್ಟ ದಿನದಂದು ಕಚೇರಿಗೆ ಬರಲು ಸಾಧ್ಯವಾಗದಿದ್ದರೆ, ಅದರ ಬಗ್ಗೆ ಮುಂಚಿತವಾಗಿ ಅವರಿಗೆ ತಿಳಿಸಬೇಕಾಗುತ್ತದೆ.

ತುರ್ತು ಸಂದರ್ಭದಲ್ಲಿ ರಜೆ ಬೇಕಿದ್ದರೆ ಅದಕ್ಕೂ ಅರ್ಜಿ ಸಲ್ಲಿಸಬೇಕಾಗುತ್ತದೆ. ಈಗ ಎಲ್ಲಾ ಇಲಾಖೆಗಳು ಕಚೇರಿಯಲ್ಲಿ ತಮ್ಮ ಉದ್ಯೋಗಿಗಳ ಉಪಸ್ಥಿತಿ ಮತ್ತು ಅವರ ಸಕಾಲಿಕ ಆಗಮನ ಮತ್ತು ನಿರ್ಗಮನವನ್ನು ಮೇಲ್ವಿಚಾರಣೆ ಮಾಡುತ್ತದೆ.

ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಬೆಳಿಗ್ಗೆ 9 ರಿಂದ ಸಂಜೆ 5.30 ರವರೆಗೆ ತೆರೆದಿರುತ್ತವೆ. ಆದರೆ ಕಿರಿಯ ನೌಕರರು ತಡವಾಗಿ ಬಂದು ಬೇಗ ಹೊರಡುವುದು ಸಾಮಾನ್ಯ. ಇದನ್ನು ಮಾಡುವವರಲ್ಲಿ ಸಾರ್ವಜನಿಕವಾಗಿ ಕೆಲಸ ಮಾಡುವ ಉದ್ಯೋಗಿಗಳೂ ಸೇರಿದ್ದಾರೆ. ಅವಡಿ ತಡವಾಗಿ ಬರುವುದು ಮತ್ತು ಬೇಗ ತೆರಳುವುದು ಜನರಿಗೆ ಬಹಳಷ್ಟು ಅನಾನುಕೂಲತೆಯನ್ನು ಉಂಟುಮಾಡುತ್ತದೆ.

ಜನರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರುತ್ತಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಆಧಾರ್‌ ಸಕ್ರಿಯಗೊಳಿಸಿದ ಬಯೋಮೆಟ್ರಿಕ್‌ ವ್‌ಯವಸ್ಥೆಯನ್ನು ಸಹ ಮೇಲ್ವಿಚಾರಣೆ ಮಾಡಲಾಯಿತು. ಆದರೆ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಈ ವ್‌ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದೆ. ಅಟೆಂಡರ್ಗಳನ್ನು ನೇಮಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಲ್ಲುವುದನ್ನು ತಪ್ಪಿಸಲು ಅನೇಕ ಹಿರಿಯ ಅಧಿಕಾರಿಗಳು ತಮ್ಮ ಟೇಬಲ್‌‍ಗಳಲ್ಲಿ ಬಯೋಮೆಟ್ರಿಕ್‌ ಸಾಧನಗಳನ್ನು ಅಳವಡಿಸಿದ್ದರು.

ಉದ್ಯೋಗಿಗಳಿಗೆ ಕಠಿಣ ನಿಯಮಗಳು :
ನೌಕರರು 9.15 ರೊಳಗೆ ಕಚೇರಿಗೆ ತಲುಪಬೇಕು. ವಿಳಂಬವಾದಲ್ಲಿ ಅರ್ಧ ದಿನ ರಜೆ ಎಂದು ಪರಿಗಣಿಸಲಾಗುತ್ತದೆ. ಆಧಾರ್‌ ಸಕ್ರಿಯಗೊಳಿಸಿದ ಬಯೋಮೆಟ್ರಿಕ್‌ ವ್‌ಯವಸ್ಥೆಯ ಮೂಲಕ ಉದ್ಯೋಗಿಗಳು ಹಾಜರಾತಿಯನ್ನು ಗುರುತಿಸಬೇಕಾಗುತ್ತದೆ.

ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಸ್ಥಗಿತಗೊಳಿಸಲಾಗಿತ್ತು.
ನೌಕರರು ಕಚೇರಿಗೆ ಬರಲು ಸಾಧ್ಯವಾಗದಿದ್ದರೆ, ಅವರು ಮುಂಚಿತವಾಗಿ ತಿಳಿಸಬೇಕು.ಎಲ್ಲ ಇಲಾಖೆಗಳ ಅಧಿಕಾರಿಗಳು ನೌಕರರ ಹಾಜರಾತಿ ಮತ್ತು ಸಮಯಪಾಲನೆ ಬಗ್ಗೆ ನಿಗಾ ವಹಿಸಬೇಕು.

RELATED ARTICLES

Latest News