ಮೈಸೂರು, ಜೂ.23- ಆಷಾಡ ಶುಕ್ರವಾರ ಹಿನ್ನೆಲೆಯಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿ ದೇವಾಲಯದಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ.ಚಾಮುಂಡೇಶ್ವರಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಎಲ್ಲಾ ಸಿದ್ದತೆಗಳನ್ನೂ ಮಾಡಿಕೊಳ್ಳುತ್ತಿದ್ದು, ಚಾಮುಂಡೇಶ್ವರಿ ದೇವಾಲಯ, ನಗರ ಬಸ್ ನಿಲ್ದಾಣದಿಂದ ಎರಡು ಬಸ್ ಬೇಗಳನ್ನು ನಿರ್ಮಾಣ ಮಾಡಿ ಎರಡು ಕೌಂಟರ್ಗಳಲ್ಲಿ 300 ರೂ. ಟಿಕೆಟ್ ಕೊಡಲು ವ್ಯವಸ್ಥೆ ಮಾಡಲಾಗಿದೆ.
300 ರೂ. ಟಿಕೆಟ್ ಪಡೆಯುವವರು ನಗರ ಬಸ್ ನಿಲ್ದಾಣದಲ್ಲಿ ಪಡೆಯಬೇಕು. ಯಾವುದೇ ಕಾರಣಕ್ಕೂ ಚಾಮುಂಡಿ ಬೆಟ್ಟದಲ್ಲಿ ಕೊಡಲಾಗುವುದಿಲ್ಲ.ಬಸ್ ನಿಲ್ದಾಣದ ಕೌಂಟರ್ಗಳಲ್ಲಿ ಟಿಕೆಟ್ಗಳನ್ನು ತೆಗೆದುಕೊಳ್ಳಬೇಕು. ಹಾಗೂ ಲಲಿತ ಮಹಲ್ ಪಾರ್ಕಿಂಗ್ ಲಾಟ್ನಲ್ಲಿ ಮೂರು ಕೌಂಟರ್ ಬಸ್ ಬೇ ಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ಜನರಲ್ ಹಾಗೂ 300 ರೂ. ಹಾಗೂ 2000 ರೂ. ಕೌಂಟರ್ಗಳನ್ನು ತೆರೆಯಲಾಗುತ್ತಿದೆ. ಲಲಿತ ಮಹಲ್ ಹೆಲಿಪಾಡ್ ನಲ್ಲಿ ಹತ್ತರಿಂದ ಹದಿನೈದು ಟಿಕೆಟ್ ಕೌಂಟರ್ಗಳನ್ನು ತೆರೆಯಲಾಗುತ್ತಿದೆ. ಯುಪಿಐ, ಫೋನ್ ಪೇ, ಗೂಗಲ್ ಪೇ. ಗಳಿಗಾಗಿ ಪ್ರತ್ಯೇಕ ಕ್ಯೂ ಮಾಡಲಾಗಿದೆ.ಎಐ ಕ್ಯಾಮೆರಾಗಳು ಲೈಟ್, ಪಾರ್ಕಿಂಗ್ ವ್ಯವಸ್ಥೆಯಲ್ಲಿ ಇರುತ್ತದೆ ಜನರಲ್ ಬಸ್ ಕ್ಯೂ ಬೇರೆ ಇರುತ್ತದೆ ಹಾಗೂ 2,000 ರೂ. ವೋಲ್ಲೋ ಬಸ್ ಕ್ಯೂ, ಬೇರೆ ಇರುತ್ತದೆ.
ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ಶೌಚಾಲಯ ದೀಪದ ವ್ಯವಸ್ಥೆ ಮಾಡಲಾತ್ತಿದೆ. ಭಕ್ತಾದಿಗಳು ತಂದ ಪ್ರಸಾದಗಳನ್ನು ಹಂಚಲು ಲಲಿತ ಮಹಲ್ ಹೆಲಿಪ್ಯಾಡ್ನಲ್ಲಿ ವ್ಯವಸ್ಥೆ ಮಾಡಲಾಗಿದೆ.
ಖಾಸಗಿ ವಾಹನಗಳು ಕಾರು, ಬಸ್, ದ್ವಿಚಕ್ರ ವಾಹನಗಳನ್ನು ಬೆಟ್ಟದ ಮೇಲೆ ನಿರ್ಬಂಧಿಸಲಾಗಿದೆ. 300 ರೂ. ಕೊಟ್ಟು ಟಿಕೆಟ್ ತೆಗೆದುಕೊಂಡವರಿಗೆ ಸರದಿ ಸಾಲಿನಲ್ಲಿ ನಿಂತವರಿಗೆ ಡ್ರೈ ಫೂಟ್ ಪಾಕೆಟ್ ಗಳನ್ನು ಹಂಚಲಾಗುತ್ತದೆ.
ವಿಶೇಷ ಚೇತನರಿಗೆ ವೀಲ್ ಚೇರ್, ಮೆಡಿಕಲ್ ವ್ಯವಸ್ಥೆ ಕೂಡಾ ಇರುತ್ತದೆ ಹಾಗೂ ಸದಾ ಚಾಮುಂಡಿ ಬೆಟ್ಟದ ದೇವಸ್ಥಾನದ ಬಳಿ ಅಂಬುಲೆನ್ಸ್ ವ್ಯವಸ್ಥೆ ಇರುತ್ತದೆ.300 ರೂ. ಕೊಟ್ಟು ಬಂದ ಭಕ್ತಾದಿಗಳಿಗೆ 30 ರೂ. ಟಿಕೆಟ್ ಕೌಂಟರ್ ಬಳಿ ಸೇರಿಸಲಾಗುತ್ತದೆ. ಅಲ್ಲಿ ಬ್ಯಾರಿಕೆಡ್ ವ್ಯವಸ್ಥೆ ಮಾಡಿರುತ್ತದೆ.
ಧರ್ಮದರ್ಶನದ ಕ್ಯೂ ಬೇರೆ ಇರುತ್ತದೆ. ಸರದಿ ಸಾಲಿನಲ್ಲಿ ಬರುವ ಭಕ್ತಾದಿಗಳಿಗಾಗಿ ವಾಟರ್ ಬಾಟಲ್, ಶೌಚಾಲಯದ ವ್ಯವಸ್ಥೆಯನ್ನು ಚಾಮುಂಡಿ ಬೆಟ್ಟದಲ್ಲಿ ಮಾಡಲಾಗಿದೆ.
300 ರೂ. ಟಿಕೆಟ್ ಕೊಟ್ಟು ಬಂದವರಿಗಾಗಿ ಬಾದಾಮಿ ಹಾಲು ವಿತರಿಸಲಾಗುತ್ತದೆ. 3 ವಲಯಗಳನ್ನಾಗಿ ಮಾಡಲಾಗಿರುತ್ತದೆ. ಎಲ್ಲಾ ವಲಯಗಳಲ್ಲೂ ಬಾದಾಮಿ ಹಾಲು ವಿತರಣೆ ಮಾಡಲಾಗುತ್ತದೆ.
ಚಾಮುಂಡಿ ಬೆಟ್ಟದಲ್ಲಿ ಸರದಿ ನಿಂತವರಿಗೆ ಐದು ಕಡೆಗಳಲ್ಲಿ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ. ದರ್ಶನ ಪಡೆದು ಹೊರಬರುವವರಿಗೆ ಒಂದೇ ಗೇಟ್ ನಲ್ಲಿ ಬರಬೇಕು, 2000 ಹಾಗೂ ವಿವಿಐಪಿ ಸಾಲಲ್ಲಿ ಬಂದವರು ಮಹಿಷಾಸುರ ಪ್ರತಿಮೆ ಬಳಿ ಇಳಿದುಕೊಂಡು ಬರಬೇಕು.
ಅಲ್ಲಿಂದ ರೆವಿನ್ಯು ಡಿಪಾರ್ಟ್ ಮೆಂಟ್ ಹಾಗೂ ಪ್ರತಿ ಪಾಯಿಂಟ್ ನಲ್ಲೂ ಇನ್ಸ್ಪೆಕ್ಟರ್ಗಳು, ಅಧಿಕಾರಿಗಳು ಇರುತ್ತಾರೆ. ಅವರು ನೇರ ದರ್ಶನಕ್ಕೆ ಅವಕಾಶ ಮಾಡಿಕೊಡುತ್ತಾರೆ.
2000 ರೂ. ಟಿಕೆಟ್ ತೆಗೆದುಕೊಂಡವರಿಗೆ ಬೇರೆಯದೇ ಸರದಿ ಸಾಲುಗಳು ಇರುತ್ತವೆ. ಚಾಮುಂಡೇಶ್ವರಿ ಅಮ್ಮನವರ ದರ್ಶನಕ್ಕೆ ಯಾವುದೇ ರೀತಿಯ ಗರ್ಭಗುಡಿ ಗೇಟ್ ತೆಗೆದು ಪ್ರವೇಶ ಇರುವುದಿಲ್ಲ.ಚಾಮುಂಡಿ ಬೆಟ್ಟ ಹತ್ತುವವರಿಗೆ ನಮ್ಮ ಮೈಸೂರು ಫೌಂಡೇಶನ್ ವತಿಯಿಂದ ಸಹಾಯವಾಣಿ ಇರುತ್ತದೆ.
ನಮ್ಮ ಮೈಸೂರು ಫೌಂಡೇಶನ್ ಹಾಗೂ ಸಾಲಿಡ್ ವೇಸ್ಟ್ ಮ್ಯಾನೇಜೆಂಟ್ ನವರು ಚಾಮುಂಡಿ ಬೆಟ್ಟದಲ್ಲಿ ಬರುವ ವೆಸ್ಟೇಜ್ ಗಳನ್ನು ಶುಚಿ ಮಾಡುವ ಹೊಣೆ ಹೊತ್ತಿದ್ದಾರೆ.ಚಾಮುಂಡಿ ಬೆಟ್ಟ ಮೆಟ್ಟಿಲು ಹತ್ತಿ ಬರುವ ಭಕ್ತರನ್ನು 30 ರೂಪಾಯಿ ಟಿಕೆಟ್ ಕೌಂರ್ಟ ಬಳಿ ಸೇರಿಸಲಾಗುತ್ತದೆ ಅವರನ್ನು ಜನರಲ್ ಕ್ಯೂ ಮುಂದೆ ಬಂದು ಕನೆಕ್ಟ್ ಆದಾಗ ಅಲ್ಲಿಂದ ಅವರು ದರ್ಶನ ಪಡೆಯಬಹುದು.
ಭಕ್ತಾದಿಗಳು ದರ್ಶನ ಮಾಡಿಕೊಂಡು ವಾಪಸ್ ಬಸ್ ಹತ್ತುವಾಗ ಎರಡು ಕಡೆ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ. ಬಸ್ ಸ್ಟ್ಯಾಂಡ್ ಒಳಗಡೆ ಊಟದ ವ್ಯವಸ್ಥೆ ಇರುತ್ತದೆ ಹಾಗೂ ದಾಸೋಹ ಭವನದಲ್ಲೂ ಊಟದ ವ್ಯವಸ್ಥೆ ಇರುತ್ತದೆ. ಎಲ್ಲಾ ಕಡೆ ನೀರು ಕರೆಂಟು ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ.
ಆಷಾಢ ಶುಕ್ರವಾರಗಳಿಗಾಗಿಯೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ಪೊಲೀಸ್ ಆಯುಕ್ತರಾದ ಸೀಮ್ ಲಾಟ್ಕರ್, ಡಿಸಿಪಿಗಳಾದ ಮುತ್ತುರಾಜ್ ಹಾಗು ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಐದು ಬಾರಿ ಚಾಮುಂಡಿ ಬೆಟ್ಟದಲ್ಲಿ ಸಭೆಗಳನ್ನು ಮಾಡಿ ಅವರ ಮಾರ್ಗದರ್ಶನದಲ್ಲಿ ಎಲ್ಲಾ ಸಜ್ಜಾಗಿದೆ ಎಂದು ಚಾಮುಂಡೇಶ್ವರಿ ಬೆಟ್ಟದ ಕಾರ್ಯದರ್ಶಿಗಳಾದ ಜೆ.ಎ.ರೂಪಾ ತಿಳಿಸಿದರು.
- ಇರಾನ್-ಇಸ್ರೇಲ್ ಯುದ್ಧಕ್ಕೆ ಅಮೆರಿಕ ರಂಗಪ್ರವೇಶ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ತಲ್ಲಣ
- ಶಾಸಕರ ಅಸಮಾಧಾನ ಬಗೆಹರಿಸುವೆ:ಸಿಎಂ
- ಗುಜರಾತ್ ವಿಧಾನಸಭೆಉಪಚುನಾವಣೆ ಫಲಿತಾಂಶ : ಬಿಜೆಪಿ,ಎಎಪಿ ಸಮಬಲ
- ಸಚಿವ ಜಮೀರ್ ವಿರುದ್ಧ ತನಿಖೆಗೆ ರಾಜ್ಯಪಾಲರಿಗೆ ದೂರು
- ಇ.ಡಿ. ವಿಚಾರಣೆಗೆ ಹಾಜರಾದ ಡಿ.ಕೆ.ಸುರೇಶ್