ಮೈಸೂರು, ಜು.27- ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರು ಮೈಸೂರಿನ ಲ್ಲಿಂದು ಜನರನ್ನು ಭೇಟಿಮಾಡಿ ಸಮಸ್ಯೆಗಳನ್ನು ಆಲಿಸಿದರು. ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಲು ಮನೆಯ ಬಳಿ ನೂರಾರು ಜನರು ಜಮಾಯಿಸಿದರು.
ಎಲ್ಲರನ್ನೂ ಭೇಟಿಮಾಡಿದ ಸಿದ್ದರಾಮಯ್ಯ ಲಿಖಿತ ಮನವಿಗಳನ್ನು ಖುದ್ದು ಸ್ವೀಕರಿಸಿದರು.ಬಹುತೇಕ ಜನರನ್ನು ಗುರುತಿಸಿ ಹೆಸರು ಹಿಡಿದು ಮಾತನಾಡಿಸಿದ ಸಿದ್ದರಾಮಯ್ಯ, ಭಾನುವಾರವಾದರೂ ಏನ್ರಪ್ಪ ನೀವು ಎಂದು ಗೊಣಗುತ್ತಲೇ ಅಹವಾಲುಗಳನ್ನು ಆಲಿಸಿದರು.ಕೆಲವರ ಜೊತೆ ನೀನ್ಯಾಕಯ್ಯ ಬಂದಿದ್ದೀಯ ಎಂದು ಆತೀಯವಾಗಿ ಗದರಿದರು. ಅರ್ಜಿ ನೀಡಿದ ಕೆಲವರು ಹಲವು ಬಾರಿ ಮನವಿ ನೀಡಿದ ಹೊರತಾಗಿಯೂ ತಮ ಕೆಲಸಗಳಾಗಿಲ್ಲ ಎಂದು ಹೇಳಿಕೊಂಡರು.
ಈವರೆಗೂ ಏಕೆ ಕೆಲಸ ಮಾಡಿಕೊಟ್ಟಿಲ್ಲ ಎಂಬ ಅರ್ಥದಲ್ಲಿ ಮುಖ್ಯಮಂತ್ರಿ ಅಧಿಕಾರಿಗಳತ್ತ ಕೆಂಗಣ್ಣು ಬೀರಿದ್ದು ಕಂಡು ಬಂತು. ಮೈಸೂರು ಜಿಲ್ಲೆಯ ಪ್ರವಾಸದಲ್ಲಿರುವ ಸಿದ್ದರಾಮಯ್ಯ ಅಲ್ಲಿಂದ ಮಂಡ್ಯದಲ್ಲಿ ನಡೆಯುವ ಸಾಧನಾ ಸಮಾವೇಶದಲ್ಲಿ ಪಾಲ್ಗೊಂಡರು.
ಸಿದ್ದರಾಮಯ್ಯ ಯಾವಾಗ ಮೈಸೂರಿಗೆ ಬಂದರೂ ಅವರನ್ನು ಭೇಟಿ ಮಾಡಲು ಜನ ಕಿಕ್ಕಿರಿದು ಸೇರುವುದು ಸಾಮಾನ್ಯವಾಗಿದೆ. ಅವರಲ್ಲಿ ಕೆಲವರು ದೂರು ಅರ್ಜಿಗಳನ್ನು ನೀಡಿದರೆ, ಇನ್ನೂ ಕೆಲವರು ಸಿದ್ದರಾಮಯ್ಯ ಅವರನ್ನು ನೋಡಿ ಕಣ್ಣುತುಂಬಿಕೊಳ್ಳಲು ಆಗಮಿಸುವುದು ಸಾಮಾನ್ಯವಾಗಿರುತ್ತದೆ.
- ಪೊಲೀಸರ ವೈಫಲ್ಯವೇ ದುರಂತಕ್ಕೆ ಕಾರಣ : ರೇವಣ್ಣ ಆಕ್ರೋಶ
- ಮೊಸಳೆಹೊಸಹಳ್ಳಿ ದುರಂತ : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೂ ಪರಿಹಾರ ನೀಡಬೇಕು
- ಪ್ರಚೋದನಾಕಾರಿ ಭಾಷಣ ಮಾಡುವವರ ವಿರುದ್ಧ ಎಫ್ಐಆರ್ ಅನಿವಾರ್ಯ : ಸಿಎಂ
- ಗಣೇಶೋತ್ಸವ ದುರಂತ : 9 ಜನರನ್ನು ಬಲಿಪಡೆದ ಟ್ರಕ್ ಚಾಲಕನ ವಿಚಾರಣೆ
- ಹಾಸನ ಗಣೇಶೋತ್ಸವ ದುರಂತ : 10 ಲಕ್ಷ ಪರಿಹಾರಕ್ಕೆ ಅಶೋಕ್ ಆಗ್ರಹ