Tuesday, October 21, 2025
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruತೆಂಗಿನಕಾಯಿ ವ್ಯಾಪಾರಿಗೆ 49.47 ಲಕ್ಷ ರೂ. ವಂಚನೆ

ತೆಂಗಿನಕಾಯಿ ವ್ಯಾಪಾರಿಗೆ 49.47 ಲಕ್ಷ ರೂ. ವಂಚನೆ

Coconut trader cheated of Rs 49.47 lakh

ಮೈಸೂರು,ಅ.21-ಉದ್ಯಮಿಯೊಬ್ಬರು ತೆಂಗಿನಕಾಯಿ ವ್ಯಾಪಾರಿಯೊಬ್ಬರಿಗೆ 49,47,401ರೂ ವಂಚಿಸಿರುವ ಘಟನೆ ಮಂಡಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚೆನ್ನೈನ ಇಂಪೋರ್ಟ್‌ ಅಂಡ್‌ ಎಕ್ಸ್ಪೋರ್ಟ್‌ ಉದ್ಯಮಿ ಶ್ರೀವತ್ಸ ನ್‌ ಮೈಸೂರಿನ ತೆಂಗಿನಕಾಯಿ ವ್ಯಾಪಾರಿ ಸುಬೇದ್‌ ಅಗರವಾಲ್‌ ಎಂಬುವವರಿಗೆ ವಂಚಿಸಿದ ಉದ್ಯಮಿ. ಸುಬೇದ್‌ ಅಗರವಾಲ್‌ ಅವರು ಮೈಸೂರಿನ ಮಂಡಿ ಮೊಹಲ್ಲಾದ ಅಕ್ಬರ್‌ ರಸ್ತೆಯಲ್ಲಿ ಸುನಿಲ್‌ ಕುಮಾರ್‌ ಅಗರವಾಲ್‌ ಹೆಸರಲ್ಲಿ 15 ವರ್ಷಗಳಿಂದ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಿದ್ದಾರೆ.

ಮಾರ್ಚ್‌ ತಿಂಗಳಲ್ಲಿ ಸುಬೇದ್‌ ಅಗರವಾಲ್‌ ರನ್ನ ಶ್ರೀವತ್ಸನ್‌ ರವರನ್ನು ಸಂಪರ್ಕಿಸಿ ವ್ಯಾಪಾರ ಕುದುರಿಸಿ ಸುಮಾರು 15 ಲಕ್ಷ ಮೌಲ್ಯದ ತೆಂಗಿನಕಾಯಿ ಖರೀದಿಸಿ 10 ಲಕ್ಷ ನೀಡಿದ್ದಾರೆ.
ನಂತರ ಶ್ರೀವತ್ಸನ್‌ ಸೂಚನೆಯಂತೆ ವಿವಿದೆಡೆಗೆ ತೆಂಗಿನಕಾಯಿ ಲೋಡ್‌ ಕಳಿಸಿದ್ದಾರೆ. ಕೆಲವು ತಿಂಗಳುಗಳು ಕಳೆದರೂ ತೆಂಗಿನಕಾಯಿ ಹಣ ಬಂದಿಲ್ಲ. ಶ್ರೀವತ್ಸನ್‌ ಅವರಿಗೆ ಸೇರಿದ ನಾಲ್ಕು ಮೊಬೈಲ್‌ ಗಳು ಸ್ವಿಚ್‌ ಆ್‌‍ ಆಗಿದೆ. ಶ್ರೀವತ್ಸನ್‌ ರಿಂದ ಒಟ್ಟು 49,47,401ರೂ ಬಾಕಿ ಬರಬೇಕಿದೆ ಎಂದು ಸುಬೇದ್‌ ಅಗರವಾಲ್‌ ಮಂಡಿ ಪೊಲೀಸ್‌‍ ಠಾಣೆಯಲ್ಲಿ ದೂರು ನೀಡಿದ್ದಾರೆ.

RELATED ARTICLES

Latest News