ಬೆಂಗಳೂರು,ಜು.16– ಮೋಡ ಕವಿದ ವಾತಾವರಣ, ಬಿಸಿಲಿಲ್ಲ, ಆಗಾಗ್ಗೆ ಮಳೆ ಬರುತ್ತಿದೆಯಾದರೂ ಸಹ ಎಳನೀರು ಬೆಲೆ ಮಾತ್ರ 100 ರೂ.ಗಳ ಸನಿಹಕ್ಕೆ ಹೋಗಿದೆ. ಮಳೆಗಾಲದಲ್ಲಿ ಎಳನೀರು ಬೆಲೆ 70 ರೂ. ತಲುಪಿದ್ದು, ಗ್ರಾಹಕರಲ್ಲಿ ಅಚ್ಚರಿ ಮೂಡಿಸಿದೆ. ಇದೇ ಮೊದಲ ಬಾರಿಗೆ ಎಳನೀರು ಬೆಲೆ ಇಷ್ಟೊಂದು ಏರಿಕೆಯಾಗಿರುವುದು.
ಕಳೆದ ಎರಡು ವರ್ಷಗಳಿಂದ ಇಳುವರಿ ಕುಂಠಿತವಾಗಿದ್ದು, ಎಳನೀರು, ತೆಂಗಿನಕಾಯಿ, ಕೊಬ್ಬರಿ ದರ ಏರಿಕೆಯಾಗಿದೆ. ತೆಂಗು ಇಳುವರಿಯಲ್ಲಿ ಮೂರನೇ ಸ್ಥಾನ ಪಡೆದಿರುವ ಕರ್ನಾಟಕದಲ್ಲಿ ಈ ಬಾರಿ ಇಳುವರಿ ಭಾರೀ ಕುಂಠಿತಗೊಂಡಿದೆ. ಹೀಗಾಗಿ ದರ ಗಗನಕ್ಕೇರಿದೆ.
ಬೆಲೆ ಏರಿಕೆಗೆ ಕಾರಣ :
ನುಸಿಪೀಡೆ, ಕಾಂಡ ಕೊರೆತ, ಕಪ್ಪು ತಲೆ ಹುಳು ಬಾಧೆ ಸೇರಿದಮತೆ ಇತರೆ ರೋಗಗಳಿಂದ ರೈತರು ತೆಂಗು ಬೆಳೆಯಿಂದ ದೂರ ಸರಿದು ಅಡಿಕೆ ಬೆಳೆಯುವಲ್ಲಿ ಒಲವು ತೋರಿದ್ದಾರೆ. ಇದರಿಂದ ಇಳುವರಿ ಕುಂಠಿತವಾಗಿದೆ.
ತೆಂಗಿನ ತೋಟದ ಜೊತೆ ಅಡಿಕೆ ಸಸಿಗಳನ್ನು ನೆಡುತ್ತಿದ್ದು, ಇದೂ ಕೂಡ ಇಳುವರಿಗೆ ಹೊಡೆತ ಬಿದ್ದಿದೆ. ಎಳನೀರಿಗಷ್ಟೇ ಅಲ್ಲದೆ ತೆಂಗಿನಕಾಯಿ, ಕೊಬ್ಬರಿ, ಚಿಪ್ಪಿನ ಬೆಲೆಯೂ ಸಹ ಏರಿಕೆಯಾಗಿದ್ದು, ಗ್ರಾಹಕರು ಕಂಗಾಲಾಗಿದ್ದಾರೆ.
ಶ್ರಾವಣಕ್ಕೆ ಮತ್ತಷ್ಟು ಏರಿಕೆ ಸಾಧ್ಯತೆ :
ಆಷಾಢ ಮುಗಿದು ಶ್ರಾವಣ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸಾಲು ಸಾಲು ಹಬ್ಬ ಹರಿದಿನಗಳು, ಮದುವೆ, ಶುಭ ಕಾರ್ಯಗಳು ಹೆಚ್ಚಾಗಿ ನಡೆಯುತ್ತವೆ. ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು, ಬೆಲೆಯೂ ಸಹ ಏರಿಕೆಯಾಗಲಿದೆ ಎಂದು ವ್ಯಾಪಾರಿ ಬೊಮಲಿಂಗಯ್ಯ ಎಂಬುವರು ತಿಳಿಸಿದ್ದಾರೆ.
- ಬಿಎಂಟಿಸಿ ಬಸ್ ಚಾಲಕನೊಂದಿಗೆ ಕಾನ್ಸ್ಟೆಬಲ್ ಕಿರಿಕ್
- ಕೆ.ಆರ್.ಮಾರ್ಕೆಟ್ನಲ್ಲಿ ಹೈಟೆಕ್ ಪಾರ್ಕಿಂಗ್ ಲಾಟ್
- ಕಾರು ನಿಲ್ಲಿಸಿ ಮನವಿ ಸ್ವೀಕರಿಸಿದ ಸಿಎಂ
- ಕಾವೇರಿ ನದಿಯಲ್ಲಿ ಈಜಲು ಹೋದ ಇಬ್ಬರು ಬಿಬಿಎಂ ವಿದ್ಯಾರ್ಥಿಗಳು ನೀರುಪಾಲು
- ಹೃದಯಾಘಾತದಿಂದ ರೌಡಿ ಸಾವು