Monday, May 20, 2024
Homeರಾಜ್ಯರಾಹುಲ್ 'ಮಾರ್ಗದರ್ಶಕ' ಸ್ಯಾಮ್‌ ಪಿತೋಡಾ ಮೇಲೆ ಯಲಹಂಕದ ಬಳಿ ಭೂಮಿ ಕಬಳಿಕೆ ಆರೋಪ

ರಾಹುಲ್ ‘ಮಾರ್ಗದರ್ಶಕ’ ಸ್ಯಾಮ್‌ ಪಿತೋಡಾ ಮೇಲೆ ಯಲಹಂಕದ ಬಳಿ ಭೂಮಿ ಕಬಳಿಕೆ ಆರೋಪ

ಬೆಂಗಳೂರು, ಮೇ 10- ಸದಾ ಒಂದಲ್ಲೊಂದು ವಿವಾದಗಳನ್ನು ಸೃಷ್ಟಿಸಿ ಪಕ್ಷಕ್ಕೆ ಮುಜುಗರ ಉಂಟುಮಾಡಿ ಮೂರು ದಿನಗಳ ಹಿಂದೆಯಷ್ಟೇ ಇಂಡಿಯನ್‌ ಓವರ್‌ಸೀಸ್‌ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಸ್ಯಾಮ್‌ ಪಿತೋಡಾ ಅವರ ಮೇಲೆ ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ.

ಯಲಹಂಕದ ಜರಕಬಂಡೆ ಕಾವಲ್‌ನಲ್ಲಿರುವ ಸ್ಥಳೀಯ ಆರೋಗ್ಯ ಸಂಪ್ರದಾಯಗಳ ಪುನರುಜ್ಜೀವನದ ಫೌಂಡೇಷನ್‌ ಅಧ್ಯಕ್ಷರಾಗಿದ್ದ ವೇಳೆ ಅಕ್ರಮವಾಗಿ ಅರಣ್ಯ ಭೂಮಿಯನ್ನು ಕಬಳಿಕೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸ್ಥಳೀಯ ಆರೋಗ್ಯ ಸಂಪ್ರದಾಯಗಳ ಪುನರುಜ್ಜೀವನದ ಫೌಂಡೇಷನ್‌ ಅಧ್ಯಕ್ಷರಾಗಿದ್ದ ಈ ಸಂಸ್ಥೆಯೂ 1991ರಲ್ಲಿ ಮುಂಬೈನ ರಿಜಿಸ್ಟ್ರಾರ್‌ ಆಫ್‌ ಸೊಸೈಟೀಸ್‌ನಲ್ಲಿ ನೊಂದಾಯಿಸಲ್ಪಟ್ಟಿದೆ. (Reg No.644/1991/GBBSD dt 23.10.91).

ಕರ್ನಾಟಕ ಅರಣ್ಯ ಇಲಾಖೆಯು ಬೆಂಗಳೂರು ನಗರ ವಿಭಾಗದ ಜರಕಬಂಡೆ ಕಾವಲ್‌ ಬಿ ಬ್ಲಾಕ್‌ನಲ್ಲಿರುವ 5.0 ಹೆಕ್ಟೇರ್‌ ಮೀಸಲು ಅರಣ್ಯ ಭೂಮಿಯನ್ನು 1996 ರಲ್ಲಿ ಎಫ್‌ಆರ್‌ಎಲ್‌‍ಎಚ್‌ಟಿಗೆ 15 ವರ್ಷಗಳ ಅವಧಿ ಗೆ ಗುತ್ತಿಗೆ ನೀಡಿತ್ತು.

ಎಫ್‌ಆರ್‌ಎಲ್‌‍ಎಚ್‌ಟಿಯನ್ನು 2010 ರಲ್ಲಿ ಸಕ್ಷಮ ಪ್ರಾಧಿ ಕಾರದಿಂದ ವಿಸರ್ಜಿಸಲಾಗಿತ್ತು. ಕರ್ನಾಟಕ ಅರಣ್ಯ ಇಲಾಖೆ ಮತ್ತು ಎಫ್‌ಆರ್‌ಎಲ್‌‍ಎಚ್‌ಟಿ ನಡುವಿನ ಗುತ್ತಿಗೆ ಒಪ್ಪಂದವು ಎಫ್‌ಐಆರ್‌ಎಲ್‌‍ಎಚ್‌ಟಿಯ ವಿಸರ್ಜನೆಯೊಂದಿಗೆ ಸಹ-ಟರ್ಮಿನಸ್‌ ಆಗಿದೆ. ಅರಣ್ಯ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಎಫ್‌ಆರ್‌ಎಲ್‌‍ಎಚ್‌ಟಿ ನೀಡಿದ ಅನುಮೋದನೆಗಳನ್ನು ಸಹ ರದ್ದುಗೊಳಿಸಲಾಗಿತ್ತು.

ಎಫ್‌ಆರ್‌ಎಲ್‌‍ಎಚ್‌ಟಿಯ ವಿಸರ್ಜನೆಯ ಪರಿಣಾಮವಾಗಿ ಗುತ್ತಿಗೆ ಒಪ್ಪಂದದ ಮುಕ್ತಾಯದ ಮೇಲೆ ಎಫ್‌ಆರ್‌ಎಲ್‌‍ಎಚ್‌ಟಿಗಳಿಗೆ ಗುತ್ತಿಗೆ ನೀಡಲಾದ ಅರಣ್ಯ ಭೂಮಿಯನ್ನು ಕರ್ನಾಟಕ ಅರಣ್ಯ ಇಲಾಖೆಗೆ ಮರುಸ್ಥಾಪಿಸಲಾಗಿದೆ. ಕರ್ನಾಟಕ ಅರಣ್ಯ ಇಲಾಖೆಯು ಈ ಅರಣ್ಯ ಭೂಮಿಯನ್ನು 2010ರಲ್ಲಿಯೇ ಸ್ವಾಧೀನಪಡಿಸಿಕೊಳ್ಳಬೇಕು. ಆದಾಗ್ಯೂ, ಸ್ಯಾಮ್‌ ಪಿತೋಡಾ ಅರಣ್ಯ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ರಾಜ್ಯ ಸರ್ಕಾರ ಈ ಪ್ರಕಣವನ್ನು ಗಂಭೀರವಾಗಿ ಪರಿಗಣಿಸದೆ, ನಿರ್ಲಕ್ಷ ಮಾಡಿದೆ ಎಂಬ ಆರೋಪವೂ ಇದೆ.

ಸ್ಯಾಮ್‌ ಪಿತೋಡಾ ಮತ್ತು ಅವರ ಬೆಂಬಲಿಗರು ಮತ್ತೊಂದು ಟ್ರ್ಟ್‌‍ಅನ್ನು ನೋಂದಾಯಿಸಿರುವುದು ಬೆಳಕಿಗೆ ಬಂದಿದೆ. ಎಫ್‌ಆರ್‌ಎಲ್‌‍ಎಚ್‌ಟಿ- ಮುಂಬೈನಲ್ಲಿ ನೋಂದಾಯಿಸಿಕೊಂಡಿದೆ. ಇತ್ತ ಬೆಂಗಳೂರಿನಲ್ಲಿ ನೋಂದಾಯಿಸಲ್ಪಟ್ಟಿರುವುದು ಒಂದೇ ಮತ್ತು ಎರಡನೇ ಘಟಕವನ್ನು ಹೊಂದಿದೆ. ವಾಸ್ತವವೆಂದರೆ ಎರಡೂ ಘಟಕಗಳು ಒಂದೇಯಾಗಿವೆ. ಇದನ್ನು ಪಿತೋಡ ಮರೆಮಾಚಿದ್ದಾರೆ.

ಗುತ್ತಿಗೆ ಪಡೆದ ಅರಣ್ಯ ಭೂಮಿಯ ಮೇಲಿನ ಹಕ್ಕಿನ ನಿಯಮದ ಪ್ರಕಾರ, ಪ್ರತ್ಯೇಕ ಸಂಸ್ಥೆಗಳು ಮತ್ತು ಕಾನೂನಿನ ಪ್ರಕಾರ ಯಾವುದೇ ಎರಡು ಸಂಸ್ಥೆಗಳು ಪಡೆಯುವುದು ನಿಯಮಕ್ಕೆ ವಿರುದ್ಧವಾದುದು. ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಕರ್ನಾಟಕ ಅರಣ್ಯ ಇಲಾಖೆ ಹಾಗೂ ಅರಣ್ಯ, ಪರಿಸರ ಮತ್ತು ಪರಿಸರ ಇಲಾಖೆ ಅಧಿ ಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅರಣ್ಯ ಭೂಮಿಯನ್ನು ವಶಪಡಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಪ್ರಕರಣದ ಬಗ್ಗೆ ಕಾಲಮಿತಿಯೊಳಗೆ ಸ್ವತಂತ್ರ ತನಿಖೆ ಸಂಸ್ಥೆಯಿಂದ ತನಿಖೆ ನಡೆಸಿ ತಪ್ಪಿತಸ್ಥರು ಯಾರೇ ಇದ್ದರೂ ಕಾನೂನಿನ ಪ್ರಕಾರವೇ ನಿರ್ದಾಕ್ಷಿಣ್ಯವಾಗಿ ಶಿಕ್ಷೆಯಾಗಬೇಕು ಹಾಗೂ ಗುತ್ತಿಗೆ ಪಡೆದ ಅರಣ್ಯ ಭೂಮಿಯನ್ನು ಮರುಪಡೆಯಲು ಸೂಕ್ತ ನಿರ್ದೇಶನಗಳನ್ನು ನೀಡಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

RELATED ARTICLES

Latest News