Wednesday, June 11, 2025
Homeರಾಜ್ಯಕಾಂಗ್ರೆಸ್‌‍ ಹೈಕಮಾಂಡ್‌ ಅಲ್ಲ ಖಾಲಿ ಕಮಾಂಡ್‌ : ಅಶೋಕ್‌ ವ್ಯಂಗ್ಯ

ಕಾಂಗ್ರೆಸ್‌‍ ಹೈಕಮಾಂಡ್‌ ಅಲ್ಲ ಖಾಲಿ ಕಮಾಂಡ್‌ : ಅಶೋಕ್‌ ವ್ಯಂಗ್ಯ

Congress high command is not Become empty command: Ashok

ಬೆಂಗಳೂರು,ಜೂ.10- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಕಾಲ್ತುಳಿತ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ರಾಜೀನಾಮೆ ಪಡೆಯದಿದ್ದರೆ ಕಾಂಗ್ರೆಸ್‌‍ ಹೈಕಮಾಂಡ್‌ ಖಾಲಿ ಕಮಾಂಡ್‌ ಆಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

ಇತ್ತೀಚೆಗೆ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ದಾಸರಹಳ್ಳಿಯಲ್ಲಿರುವ ಎಂ.ಎಸ್‌‍.ರಾಮಯ್ಯ ಲೇಔಟ್‌ ನಿವಾಸಿ ಭೂಮಿಕ್‌ ಅವರ ನಿವಾಸಕ್ಕೆ ತೆರಳಿ ಪೋಷಕರಿಗೆ ಸ್ವಾಂತನ ಹೇಳಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳೇ ನೇರ ಕಾರಣ. ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬದಲು ಎಐಸಿಸಿ ನಾಯಕರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್‌ ವಿರುದ್ಧ ಕ್ರಮ ಜರುಗಿಸಲಿ.ಇಲ್ಲದಿದ್ದರೆ ಹೈಕಮಾಂಡ್‌ ಖಾಲಿ ಕಮಾಂಡ್‌ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ವ್ಯಂಗ್ಯವಾಡಿದರು.

ಸಿಎಂ ಪದೇ ಪದೇ ಸುಳ್ಳು ಹೇಳುತ್ತಿದ್ದಾರೆ. ಯಾರೋ ಕರೆದರೂ ನಾನು ಹೋಗಿದ್ದೇನೆ ಎನ್ನುತ್ತಾರೆ. ಡಿಸಿಪಿಯವರು ಕಾರ್ಯಕ್ರಮ ನಡೆಸುವುದಕ್ಕೆ ಸಿಬ್ಬಂದಿ ಕೊರತೆ ಇದೆ ಎಂದು ವರದಿ ಕೊಟ್ಟಿದ್ದಾರೆ. ಪಿಡಬ್ಲೂಡಿ ಅವರು 25 ಜನ ಇರಬೇಕೆಂದು ಆದೇಶ ಕೊಟ್ಟಿದ್ದಾರೆ. ಡಿಪಿಆರ್‌ ನೋಟ್‌ ಆದಮೇಲೆ ಸಿಎಸ್‌‍ಗೆ ಹೋಗುತ್ತದೆ. ಅವರು ಪತ್ರ ಬರೆದು ಸಿಎಂ ಕಳುಹಿಸುತ್ತಾರೆ. ಅದಕ್ಕೆ ಸಿಎಂಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡುತ್ತಾರೆ.

ನೀವು ಅನುಮತಿ ನೀಡಿಲ್ಲ ಅಂದರೆ ಆ ಫೈಲ್‌ನ್ನು ನೀವು ಬಿಡುಗಡೆ ಮಾಡಿ. ಅನುಮತಿ ಕೊಟ್ಟಿಲ್ಲ ಅಂದ್ರೆ ಡಿಪಿಆರ್‌ ಸೆಕ್ರೆಟರಿ ನಾ ಅಮಾನತು ಮಾಡಿ ಇಲ್ಲದಿದ್ದರೆ ಸಿಎಸ್‌‍ನ ಸಸ್ಪೆಂಡ್‌ ಮಾಡಿ ಎಂದು ಸವಾಲು ಹಾಕಿದರು.

ಸಿಎಂ ಬೇಜವಾಬ್ದಾರಿಯುವಾಗಿ ಗೊತ್ತೇ ಇಲ್ಲ ಎಂದು ಹೇಳುತ್ತಿದ್ದಾರೆ. ಸಿಎಂ ಸಹಿ ಹಾಕಿದ ಫೈಲ್‌ ಹೊರಗೆ ಬಂದರೆ ಸರ್ಕಾರ ಬಂಡವಾಳ ಹೊರಗೆ ಬರುತ್ತದೆ? ನೀವು ಸಹಿ ಮಾಡಿದ ಫೈಲ್‌ ಸಾರ್ವಜನಿಕಗೊಳಿಸಿ ಇಲ್ಲದಿದ್ದರೆ ಅನುಮತಿ ಇಲ್ಲದೇ ಕಾರ್ಯಕ್ರಮ ಮಾಡಿದ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ ಎಂದು ಒತ್ತಾಯಿಸಿದರು.

ಮಧ್ಯಾಹ್ನ 3.15 ಕ್ಕೆ ಸಾವಿನ ಸುದ್ದಿ ಬಂದಿದೆ. ನಿಮ ಮಾಧ್ಯಮ ಸಲಹೆಗಾರು, ನಿಮ ಸಿಬ್ಬಂದಿಗಳ ವೈಫಲ್ಯ ಎದ್ದು ಕಾಣುತ್ತಿದೆ. ವಿಷಯ ಗೊತ್ತಾದರೂ ಕಾರ್ಯಕ್ರಮ ಮಾಡಿದ್ದಾರೆ ಎಂದು ಆರೋಪಿಸಿದರು.

ಈ ವಿಚಾರ ಮರೆಮಾಚಲು ಸಚಿವ ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾಪಿಸಿದ್ದಾರೆ. ಕಾಂಗ್ರೆಸ್‌‍ ಕುತಂತ್ರಕ್ಕೆ ಬಲಿಯಾಗಬಾರದು ಸಿಎಂ ಅವರ ಮೇಲೆ ಕ್ರಮವಾಗಬೇಕು, ಸಿಎಂ ಮತ್ತು ಡಿಸಿಎಂ ಅವರನ್ನು ಬದಲಿಸಬೇಕು. ಬದಲಿಸದಿದ್ದರೇ ಜನತೆ ಕಾಂಗ್ರೆಸ್‌‍ ಸರ್ಕಾರವನ್ನು ಬದಲಿಸುತ್ತಾರೆ ಎಂದು ಎಚ್ಚರಿಕೆ ಕೊಟ್ಟರು.

ಮುಖ್ಯಮಂತ್ರಿ ದೆಹಲಿಗೆ ಹೋಗಿದ್ದಾರೆ. ದೆಹಲಿಯವರಿಗೂ ಗೊಂದಲವಾಗಿದೆ. ಕ್ರಿಕೆಟ್‌ ಸ್ಟೇಡಿಯಂ ನಂದು, ವಿಧಾನಸೌಧ ನಂದು ಎನ್ನುತ್ತಿದ್ದಾರೆ. ಅದಕ್ಕೆ ಹೈಕಮಾಂಡ್‌ ಕೂಡ ಗೊಂದಲಕ್ಕೀಡಾಗಿದೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಸರ್ಕಾರದ ವಿರುದ್ದ ಸುಮೋಟೊ ತೆಗಕೊಂಡಿದೆ ಅಂದರೆ ಅದು ಸರ್ಕಾರಕ್ಕೆ ಅವಮಾನ. ಸರ್ಕಾರದ ತಪ್ಪು ಎಂದು ದುರಂತದಲ್ಲಿ ಮೃತಪಟ್ಟವರ ಕುಟುಂಬಸ್ಥರು ಹೇಳುತ್ತಿದ್ದಾರೆ ಎಂದು ಅಶೋಕ್‌ ಸರ್ಕಾರದ ವಿರುದ್ಧ ಕಿಡಿಕಾರಿದರು.

ಈ ವೇಳೆ ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣಸ್ವಾಮಿ, ಶಾಸಕ ಮುನಿರಾಜು, ದಾಸರಹಳ್ಳಿ ಬಿಜೆಪಿ ಮಂಡಲ ಅಧ್ಯಕ್ಷ ಸೋಮಶೇಖರ್‌ ಬಿ., ಕೃಷ್ಣಮೂರ್ತಿ.ಬಿ, ಎಂ.ನಾರಾಯಣ್‌, ಬಿ.ಎಂ.ಕೃಷ್ಣ , ಭರತ್‌ ಸೌಂದರ್ಯ, ಹಾವನೂರು ಬಡಾವಣೆ ಹನುಮಂತರಾಯಪ್ಪ ಮತ್ತಿತರರು ಇದ್ದರು.

RELATED ARTICLES

Latest News