Saturday, April 20, 2024
Homeರಾಜಕೀಯಮೋದಿಜಿಯವರೇ, ಕರ್ನಾಟಕ ಇರೋದು ರೋಡ್ ಶೋ ನಡೆಸಲು ಮಾತ್ರನಾ..?

ಮೋದಿಜಿಯವರೇ, ಕರ್ನಾಟಕ ಇರೋದು ರೋಡ್ ಶೋ ನಡೆಸಲು ಮಾತ್ರನಾ..?

ಬೆಂಗಳೂರು, ಸೆ.29- ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದ್ದರೂ, ಸಂಸದರು ಮೌನವಹಿಸಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರ್ನಾಟಕ ರೋಡ್ ಶೋ ನಡೆಸಲು ಮಾತ್ರ ಇದೆ ಎಂದು ಭಾವಿಸಿದ್ದಾರೆಯೇ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ಎಸಗಿದ ಅನ್ಯಾಯ ಒಂದೆರಡಲ್ಲ ಎಂದು ಎಂದಿರುವ ಕಾಂಗ್ರೆಸ್, ನೆರೆ ಪರಿಹಾರದಲ್ಲೂ ಅನ್ಯಾಯ, ಬರ ಪರಿಹಾರದಲ್ಲೂ ಅನ್ಯಾಯ, ಜಿಎಸ್‍ಟಿ ಹಂಚಿಕೆಯಲ್ಲೂ ಅನ್ಯಾಯ, ಕೇಂದ್ರದ ಯೋಜನೆಗಳ ಅನುದಾನದಲ್ಲೂ ಅನ್ಯಾಯ, ಈಗ ಕಾವೇರಿ ವಿಚಾರದಲ್ಲೂ ಅನ್ಯಾಯ ಮಾಡಿದೆ ಎಂದು ಆರೋಪಿಸಿದೆ.

ತಮಿಳುನಾಡಿಗೆ ಕದ್ದು ಮುಚ್ಚಿ ಕಾವೇರಿ ಹರಿಸುತ್ತಿರುವ ಸರ್ಕಾರದ ವಿರುಧ್ದ ವಾಟಾಳ್ ಕೆಂಡ

ಈ ಎಲ್ಲಾ ಅನ್ಯಾಯಕ್ಕೂ ಕರ್ನಾಟಕದ ಬಿಜೆಪಿಯ ಸಂಸದರದ್ದು ಮೌನ ಮಾತ್ರ. ಕರ್ನಾಟಕ ಇರುವುದು ಚುನಾವಣಾ ರೋಡ್ ಶೋ ಮಾಡಲು ಮಾತ್ರ ಎಂದು ನರೇಂದ್ರ ಮೋದಿ ತಿಳಿದಿದ್ದಾರಾ ಎಂದು ಪ್ರಶ್ನಿಸಲಾಗಿದೆ.

RELATED ARTICLES

Latest News