Sunday, September 8, 2024
Homeಜಿಲ್ಲಾ ಸುದ್ದಿಗಳು | District Newsಪತ್ನಿಯನ್ನು ಇರಿದು ಕೊಂದ ಕಾನ್ಸ್‌ಟೇಬಲ್‌ ಮನೆಮುಂದೆ ಶವವಿಟ್ಟು ಪೋಷಕರ ಪ್ರತಿಭಟನೆ

ಪತ್ನಿಯನ್ನು ಇರಿದು ಕೊಂದ ಕಾನ್ಸ್‌ಟೇಬಲ್‌ ಮನೆಮುಂದೆ ಶವವಿಟ್ಟು ಪೋಷಕರ ಪ್ರತಿಭಟನೆ

ಹಾಸನ,ಜು.2- ಚಾಕುವಿನಿಂದ ಇರಿದು ಪತ್ನಿ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಆರೋಪಿ ಕಾನ್ಸ್‌ಟೇಬಲ್‌ ಲೋಕನಾಥ್‌ ನಿವಾಸದೆದುರು ಶವವಿಟ್ಟು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಮತಾ ಅವರು ನಿನ್ನೆ ಲೋಕನಾಥ್‌ ವಿರುದ್ಧ ಎಸ್‌‍ಪಿ ಕಚೇರಿಗೆ ದೂರು ನೀಡಲು ಆಗಮಿಸಿದಾಗ ಪತಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಈ ಸಂಬಂಧ ನ್ಯಾಯಕ್ಕಾಗಿ ಪೋಷಕರು ಲೋಕನಾಥ್‌ ನಿವಾಸದೆದುರು ಶವವನ್ನಿಟ್ಟು ಪ್ರತಿಭಟನೆ ನಡೆಸಿ ಆರೋಪಿ ತಂದೆ-ತಾಯಿಯನ್ನೂ ಕೂಡ ಬಂಧಿಸುವಂತೆ ಆಗ್ರಹಿಸಿದ್ದಾರೆ.ಸಾವಿಗೆ ಕಾರಣರಾದವರನ್ನು ಬಂಧಿಸುವಂತೆ ಮಮತಾ ಪೋಷಕರು ಆಗ್ರಹಿಸಿದ್ದಾರೆ. ತಾಯಿಯ ಮೃತದೇಹದ ಮುಂದೆ ಮಕ್ಕಳು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಸ್ಥಳದಲ್ಲೇ ಬಿಗಿ ಪೊಲೀಸ್‌‍ ಬಂದೋಬಸ್ತ್‌ ಕಲ್ಪಿಸಲಾಗಿದೆ. ಲೋಕನಾಥ್‌ಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿರುವ ಮಮತಾ ಪೋಷಕರು ಆಕೆಯ ವಿರುದ್ಧವೂ ಸಹ ಪ್ರಕರಣ ದಾಖಲಿಸುವಂತೆ ಆಗ್ರಹಿಸಿದ್ದಾರೆ.

RELATED ARTICLES

Latest News