Friday, May 16, 2025
Homeರಾಷ್ಟ್ರೀಯ | Nationalಜಾರ್ಖಂಡ್‌ನಲ್ಲಿ ಸಿಡಿಲು ಬಡಿದು ಸಿಆರ್‌ಪಿಎಫ್‌ ಅಧಿಕಾರಿ ಸಾವು

ಜಾರ್ಖಂಡ್‌ನಲ್ಲಿ ಸಿಡಿಲು ಬಡಿದು ಸಿಆರ್‌ಪಿಎಫ್‌ ಅಧಿಕಾರಿ ಸಾವು

CRPF officer dies after being struck by lightning in Jharkhand

ರಾಂಚಿ, ಮೇ 16- ಜಾರ್ಖಂಡ್‌ನಲ್ಲಿ ನಕ್ಸಲ್‌ ವಿರೋಧಿ ಕಾರ್ಯಾಚರಣೆಯ ವೇಳೆ ಸಿಡಿಲು ಬಡಿದು ಸಿಆರ್‌ಪಿಎಫ್‌‍ ಅಧಿಕಾರಿ ಯೊಬ್ಬರು ಸಾವನ್ನಪ್ಪಿದ್ದಾರೆ.ಪಶ್ಚಿಮ ಸಿಂಗ್‌ಭೂಮ್‌‍ ಜಿಲ್ಲೆಯ ಕೆರಿಬುರು ಗ್ರಾಮದಲ್ಲಿ ರಾತ್ರಿ 10.30 ರ ಸುಮಾರಿಗೆ ಈ ಘಟನೆ ನಡೆದಿದೆ.

ಸಿಆರ್‌ಪಿಎಫ್‌ 6 ನೇ ಬೆಟಾಲಿಯನ್‌ಗೆ ಸೇರಿದ ಕಮಾಂಡೆಂಟ್‌ಎಂ. ಪ್ರಬೋಸಿಂಗ್‌(46) ಮೃತ ಅಧಿಕಾರಿ.ಸಹಾಯಕ ಕಮಾಂಡೆಂಟ್‌ ಎಸ್‌‍. ಕೆ. ಮಂಡಲ್‌ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯ ನಡುವೆ ಕೇಂದ್ರ ಮೀಸಲು ಪೊಲೀಸ್‌‍ ಪಡೆ ಸಿಬ್ಬಂದಿ ,ಅಧಿಕಾರಿಗಳು ್ಲ ಕಾರ್ಯಾಚರಣೆಯಲ್ಲಿದ್ದಾಗ ಈ ದುರಂತ ನಡೆದಿದೆ.ಎಂ. ಪ್ರಬೋಸಿಂಗ್‌ ಅವರು ಮಣಿಪುರದ ಪಶ್ಚಿಮ ಇಂಫಾಲ್‌ ಜಿಲ್ಲೆಯವರಾಗಿದ್ದು,ನಕ್ಸಲ್‌ ವಿರೋಧಿ ಕಾರ್ಯಾಚರಣೆಗಾಗಿ ಅರಣ್ಯ ಪ್ರದೇಶದಲ್ಲಿ ಕೇಂದ್ರ ಮೀಸಲು ಪೊಲೀಸ್‌‍ ಪಡೆಗಳನ್ನು ಇವರು ಮುನ್ನಡೆಸುತ್ತಿದ್ದರು.

RELATED ARTICLES

Latest News