Tuesday, July 2, 2024
Homeರಾಜ್ಯಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್‌ : 'ಅಂತ' ಸಿನಿಮಾ ಸ್ಟೈಲಲ್ಲೇ ರೇಣುಕಾಸ್ವಾಮಿಗೆ 'ಡಿ'ಗ್ಯಾಂಗ್ ಟಾರ್ಚರ್.?

ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್‌ : ‘ಅಂತ’ ಸಿನಿಮಾ ಸ್ಟೈಲಲ್ಲೇ ರೇಣುಕಾಸ್ವಾಮಿಗೆ ‘ಡಿ’ಗ್ಯಾಂಗ್ ಟಾರ್ಚರ್.?

ಬೆಂಗಳೂರು,ಜೂ.17- ರೇಬಲ್‌ ಸ್ಟಾರ್‌ ಅಂಬರೀಷ್‌ ಅಭಿನಯದ ಅತ್ಯಮೋಘ ಚಿತ್ರ ಅಂತ ಚಿತ್ರದಲ್ಲಿ ಹೀರೋ ಸುಶೀಲ್‌ಕುಮಾರ್‌ ಅವರನ್ನು ಚೇರ್‌ಗೆ ಕಟ್ಟಿ ಹಾಕಿ ನೀಡುವ ಚಿತ್ರಹಿಂಸೆ ನೀಡಿದ ಮಾದರಿಯಲ್ಲೇ ದರ್ಶನ್‌ ಅಂಡ್‌ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ ಎನ್ನಲಾದ ರೇಣುಕಾಸ್ವಾಮಿಗೂ ಚಿತ್ರಹಿಂಸೆ ನೀಡಲಾಗಿತ್ತೇ ಎಂಬ ಅನುಮಾನ ಇದೀಗ ಪೊಲೀಸರನ್ನು ಕಾಡತೊಡಗಿದೆ.

ಕಾರಣ ಇಷ್ಟೇ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆದ ಪಟ್ಟಣಗೆರೆಯಲ್ಲಿರುವ ಶೆಡ್‌ ಹಿಂದಿನಿಂದಲೂ ಚಿತ್ರಹಿಂಸೆ ನೀಡುವುದಕ್ಕೆ ಕುಖ್ಯಾತಿ ಹೊಂದಿದೆ. ಇಲ್ಲಿ ಪೈನಾನ್ಷಿಯರ್‌ಗಳಿಂದ ಹಣ ಪಡೆದು ಸಾಲ ಮರು ಪಾವತಿಸದೆ ತಲೆಮರೆಸಿಕೊಳ್ಳುವವರನ್ನು ಕರೆತಂದು ಅಂತ ಚಿತ್ರದ ಮಾದರಿಯಲ್ಲೇ ಚಿತ್ರಹಿಂಸೆ ನೀಡಿದ ಉದಾಹರಣೆಗಳಿವೆ ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಅಂತ ಚಿತ್ರದಲ್ಲಿ ಹೀರೋ ಸುಶೀಲ್‌ ಕುಮಾರ್‌ ಅವರನ್ನು ಚೇರ್‌ಗೆ ಕಟ್ಟಿ ಹಾಕಿ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್‌ ನೀಡಿ ಬೆರಳುಗಳಿಂದ ಉಗುರುಗಳನ್ನು ಕಿತ್ತು ಚಿತ್ರಹಿಂಸೆ ನೀಡಲಾಗುತ್ತದೆ. ಈ ಚಿತ್ರಹಿಂಸೆಯ ನಂತರ ಹೀರೋ ಸುಶೀಲ್‌ಕುಮಾರ್‌ ಪುರುಷತ್ವ ಕಳೆದುಕೊಳ್ಳಬೇಕಾಗುತ್ತದೆ.

ಅಂತ ಚಿತ್ರದ ಮಾದರಿಯಲ್ಲೇ ಸಾಲ ಕಟ್ಟಲು ಸತಾಯಿಸುವವರನ್ನು ಪಟ್ಟಣಗೆರೆ ಶೆಡ್‌ಗೆ ಕರೆತಂದು ಚಿತ್ರಹಿಂಸೆ ನೀಡಿರುವ ಕುರುಹುಗಳು ಅಲ್ಲಿ ಪತ್ತೆಯಾಗಿದೆ ಎನ್ನುತ್ತಿವೆ ಪೊಲೀಸ್‌‍ ಮೂಲಗಳು.

ಪವಿತ್ರಾಗೌಡ ಅವರಿಗೆ ಆಶ್ಲೀಲ ಫೋಟೋ ಕಳುಹಿಸಿದ್ದ ರೇಣುಕಾಸ್ವಾಮಿಯನ್ನು ಅಂತ ಚಿತ್ರದ ರೀತಿಯಲ್ಲಿ ಚಿತ್ರಹಿಂಸೆ ನೀಡುವ ಉದ್ದೇಶದಿಂದಲೇ ಆತನನ್ನು ಇಲ್ಲಿಗೆ ಕರೆತಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪೊಲೀಸರ ಈ ಅನುಮಾನಕ್ಕೆ ಇಂಬು ನೀಡುವಂತೆ ಮನುಷ್ಯರಿಗೆ ಶಾಕ್‌ ನೀಡಲು ಬಳಸುವ ಮೆಗ್ನರ್‌ ಯಂತ್ರ ಪೊಲೀಸರಿಗೆ ಸಿಕ್ಕಿದೆ.

ಹೀಗಾಗಿ ರೇಣುಕಾಸ್ವಾಮಿಗೆ ಅಂತ ಚಿತ್ರದ ಮಾದರಿಯಲ್ಲೇ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಯಿತೇ ಎಂಬ ದಿಕ್ಕಿನಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ವಿವರಿಸಿವೆ. ರೇಣುಕಾಸ್ವಾಮಿಯನ್ನು ಕೊಲೆ ಮಾಡದೆ ಕೇವಲ ಶಾಕ್‌ ನೀಡುವ ಮೂಲಕ ಮತ್ತೆ ಯಾವುದೇ ಹೆಣ್ಣು ಮಕ್ಕಳ ತಂಟೆಗೆ ಹೋಗದಂತೆ ಮಾಡಬೇಕು ಎಂಬ ಉದ್ದೇಶ ಡಿ ಗ್ಯಾಂಗ್‌ ಗೆ ಇತ್ತು ಎನ್ನಲಾಗಿದೆ. ಆದರೆ, ಬಿದ್ದ ಏಟಿನಿಂದ ರೇಣುಕಾಸ್ವಾಮಿ ಇಹಲೋಕ ತ್ಯಜಸಿದ್ದರಿಂದ ಇದೀಗ ಪಟ್ಟಣಗೆರೆ ಶೆಡ್‌ನಲ್ಲಿ ನಡೆದಿರಬಹುದು ಎನ್ನಲಾದ ಚಿತ್ರಹಿಂಸೆ ಪ್ರಕರಣಗಳು ಒಂದೊಂದಾಗಿ ಹೊರ ಬರುವ ಸಾಧ್ಯತೆಗಳಿವೆ ಎನ್ನಲಾಗಿದೆ.

RELATED ARTICLES

Latest News