Sunday, September 8, 2024
Homeರಾಷ್ಟ್ರೀಯ | Nationalಕೊತಕೊತ ಕುದಿಯುತ್ತಿದ್ದ ದೆಹಲಿಗೆ ತಂಪೆರೆದ ಮಳೆರಾಯ

ಕೊತಕೊತ ಕುದಿಯುತ್ತಿದ್ದ ದೆಹಲಿಗೆ ತಂಪೆರೆದ ಮಳೆರಾಯ

ನವದೆಹಲಿ, ಜೂ.27-ಅಧಿಕ ತಾಪಮಾನ ಹಾಗೂ ಬಿಸಿಗಾಳಿಯಿಂದ ತತ್ತರಿಸಿದ್ದ ರಾಷ್ಟ್ರ ರಾಜಧಾನಿ ದೆಹಲಿಯ ಹಲವೆಡೆ ಇಂದು ಬೆಳಿಗ್ಗೆ ವ್ಯಾಪಕ ಮಳೆಯಾಗುವ ಮೂಲಕ ವರುಣ ತಂಪನ್ನೆರೆದಿದ್ದಾನೆ.

ಸರಿತಾ ವಿಹಾರ್‌ ಆರ್‌.ಕೆ.ಪುರಂ ಮುನಿಕಿರ ಹಾಗೂ ರಾವ್‌ ತುಲಾರಾಂ ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆಯಾಗಿದ್ದು, ಇನ್ನೂ ಹಲವೆಡೆ ಮಳೆಯಾಗುವ ಸಂಭವವಿದೆ. ಅಧಿಕ ತಾಪಮಾನದ ಪರಿಣಾಮ ಈ ಮಳೆಯಾಗಿದೆ ಎಂದು ಹವಾಮಾನ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯ ಹಲವೆಡೆ ಇಂದು ಮೋಡ ಕವಿದ ವಾತಾವರಣವಿದ್ದು, ಮಳೆಯಾಗುವ ಸಂಭವವಿದೆ. ಹಲವು ಸ್ಥಳಗಳಲ್ಲಿ ಆಲಿಕಲ್ಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ನಗರವಾಸಿಗಳು ಅನಗತ್ಯ ಪ್ರಯಾಣವನ್ನು ತಪ್ಪಿಸಿ ಮನೆಯೊಳಗೇ ಇರಬೇಕು ಹಾಗೂ ಮಳೆ ಬೀಳುವ ಸಂದರ್ಭದಲ್ಲಿ ಮರಗಳ ಕೆಳಗೆ ನಿಲ್ಲದಿರುವಂತೆ ಸೂಚಿಸಿದೆ.

RELATED ARTICLES

Latest News