Friday, June 6, 2025
Homeರಾಜ್ಯRCB ವಿಜಯೋತ್ಸವ ದುರಂತದಲ್ಲಿ ಮೃತಪಟ್ಟವರ ವಿವರ

RCB ವಿಜಯೋತ್ಸವ ದುರಂತದಲ್ಲಿ ಮೃತಪಟ್ಟವರ ವಿವರ

Details of those who died in the Vijayatsava tragedy

ಬೆಂಗಳೂರು,ಜೂ.5- ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ ಮೃತಪಟ್ಟವರ ಮಾಹಿತಿಯನ್ನು ರಾಜ್ಯಸರ್ಕಾರ ಅಧಿಕೃತವಾಗಿ ಪ್ರಕಟಿಸಿದೆ.ಕಬ್ಬನ್‌ಪಾರ್ಕ್‌ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದು, ಅವರಲ್ಲಿ ವೈದ್ಯರು, ಚಾರ್ಟೆಡ್‌ ಅಕೌಂಟೆಂಟ್‌ಗಳು, ಎಂಜಿನಿಯರ್‌ಗಳು, ಎಂಜಿನಿಯರ್‌ ವಿದ್ಯಾರ್ಥಿಗಳು ಸೇರಿದಂತೆ ಅನೇಕರಿದ್ದು ದುರಂದ ಜನಮಾನಸದ ಮನಕಲಕುವಂತಿದೆ.

ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯ ದಿವ್ಯಾಂಶಿ(14), ಉತ್ತರ ಕನ್ನಡ ಜಿಲ್ಲೆಯ ರವೀಂದ್ರ ನಗರ ನಿವಾಸಿ ಅಕ್ಷತಾ ಪೈ(26), ಬೆಂಗಳೂರಿನ ಎಂ.ಎಸ್‌‍.ರಾಮಯ್ಯ ಬಡಾವಣೆಯ ಭೂಮಿಕ್‌(19), ಕೋಲಾರದ ಎಸ್‌‍.ವಿ.ಲೇಔಟ್‌ನ ಸಹನಾ(23), ಬೆಂಗಳೂರಿನ ದೊಡ್ಡಕಲ್ಲಸಂದ್ರದ ನಾರಾಯಣನಗರ ನಿವಾಸಿ ಚಿನಯಶೆಟ್ಟಿ(19), ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನ ಯಡಿಯೂರು ಸಮೀಪದ ನಾಗಸಂದ್ರದ ಮನೋಜ್‌ಕುಮಾರ್‌(20),

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನ ಕುಡಟಹಳ್ಳಿಯ ಕೆ.ಟಿ.ಶ್ರವಣ (20), ಯಾದಗಿರಿ ಜಿಲ್ಲೆ ಹೂನಿಗೇರಿ ಗ್ರಾಮದ ಶಿವಲಿಂಗ(17), ಮಂಡ್ಯ ಜಿಲ್ಲೆ ಕೆ.ಆರ್‌.ಪೇಟೆ ತಾಲ್ಲೂಕು ರಾಯಸಮುದ್ರ ಗ್ರಾಮದ ಪೂರ್ಣಚಂದ್ರ(20), ತಮಿಳುನಾಡು ಕೊಯಮೊತ್ತೂರಿನ ಉರುಮಲಪೇಟ್‌ನ ಕಾಮಾಕ್ಷಿದೇವಿ(19), ಬೆಂಗಳೂರಿನ ಯಲಹಂಕದ ನ್ಯೂಟೌನ್‌ನ ಚಿಕ್ಕಬೊಮಸಂದ್ರ ಕ್ರಾಸ್‌‍ ಬಳಿಯ ನಿವಾಸಿ ಪ್ರಜ್ವಲ್‌(22) ಮೃತಪಟ್ಟಿದ್ದಾರೆ. ದಿವ್ಯಾಂಶಿ, ಅಕ್ಷತಾ ಪೈ, ಮನೋಜ್‌ಕುಮಾರ್‌, ಶ್ರವಣ, ಶಿವಲಿಂಗ, ಕಾಮಾಕ್ಷಿದೇವಿ ಬೌರಿಂಗ್‌ ಆಸ್ಪತ್ರೆಯಲ್ಲಿ ಮೃತಪಟ್ಟರೆ ಭೂಮಿಕ್‌, ಸಹನಾ, ಪೂರ್ಣಚಂದ್ರ, ಪ್ರಜ್ವಲ್‌ ವೈದೇಹಿ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಚಿನಯಶೆಟ್ಟಿ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

RELATED ARTICLES

Latest News