Friday, June 6, 2025
Homeರಾಜ್ಯಕಾಲ್ತುಳಿತ ದುರಂತಕ್ಕೆ ಡಿಕೆಶಿ ಹೊಣೆ : ಹೆಚ್‌.ಡಿ.ಕುಮಾರಸ್ವಾಮಿ ನೇರ ಆರೋಪ

ಕಾಲ್ತುಳಿತ ದುರಂತಕ್ಕೆ ಡಿಕೆಶಿ ಹೊಣೆ : ಹೆಚ್‌.ಡಿ.ಕುಮಾರಸ್ವಾಮಿ ನೇರ ಆರೋಪ

DK Shivakumar is responsible for the stampede tragedy: HD Kumaraswamy

ನವದೆಹಲಿ, ಜೂ. 5- ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಅಚಾತುರ್ಯ, ಆತುರ, ಅಪರಿಪಕ್ವ ವರ್ತನೆ ಹಾಗೂ ಅವಿವೇಕಿತನದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಹನ್ನೊಂದು ಜನ ಕ್ರಿಕೆಟ್‌ ಪ್ರೇಮಿಗಳು ಧಾರುಣವಾಗಿ ಸಾವನ್ನಪ್ಪಿದ ಘಟನೆ ನಡೆಯಿತು ಎಂದು ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ನೇರ ಆರೋಪ ಮಾಡಿದ್ದಾರೆ.

ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ದುರಂತಕ್ಕೆ ಕಾರಣರಾದ ಅವಿವೇಕಿಯನ್ನು ಸಂಪುಟದಿಂದ ಹೊರ ಹಾಕಬೇಕು ಎಂದು ಒತ್ತಾಯ ಮಾಡಿದರು. ಕರ್ನಾಟಕದಲ್ಲಿ ಇರುವುದು ಕಟುಕರ ಸರಕಾರ. ಈ ಸರಕಾರದ ಮುಖ್ಯಮಂತ್ರಿಯ ಬಗ್ಗೆ ಈ ಪದ ಹೇಳಲು ನನಗೆ ಬೇಸರವಾಗುತ್ತದೆ.

ಅವರೊಬ್ಬ ನಿಷ್ಕ್ರಿಯ ಮುಖ್ಯಮಂತ್ರಿ. ಡಿಸಿಎಂ ಮುಂದೆ ಅವರ ಆಟವೇನೂ ನಡೆಯುತ್ತಿಲ್ಲ. ಇನ್ನು ಗೃಹ ಸಚಿವರ ಬಗ್ಗೆ ಹೇಳುವುದೇ ಬೇಡ. ಈ ವ್ಯಕ್ತಿ ಕೂರು ಎಂದರೆ ಅವರು ಕೂರುತ್ತಾರೆ, ನಿಲ್ಲು ಎಂದರೆ ನಿಲ್ಲುತ್ತಾರೆ ಎಂದು ಕೇಂದ್ರ ಸಚಿವರು ಆಕೋಶ ವ್ಯಕ್ತಪಡಿಸಿದರು.

ವಿಧಾನಸೌಧದ ಮುಂಭಾಗದಲ್ಲಿ ಸನಾನ ನಡೆಯುತ್ತಿರಬೇಕಾದರೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಾಲ್ವರು ಕಾಲ್ತುಳಿತಕ್ಕೆ ಬಲಿಯಾಗಿದ್ದರು. ಅದು ಗೊತ್ತಾದ ಮೇಲೆಯೂ ಇವರು ಸನಾನ ಕಾರ್ಯಕ್ರಮ ಮುಂದುವರಿಸಿದ್ದಾರೆ. ಇನ್ನು ಇವರನ್ನು ಕಟುಕರು ಎಂದು ಕರೆಯದೇ ಇನ್ನೇನೆಂದು ಕರೆಯಬೇಕು ಎಂದು ಅವರು ಕಿಡಿಕಾರಿದರು.

ವಿರಾಟ್‌ ಕೊಹ್ಲಿ ಹದಿನೆಂಟು ವರ್ಷಗಳ ಕಾಲ ತಂಡವನ್ನು ಗೆಲ್ಲಿಸಲು ಅವಿರತವಾಗಿ ಶ್ರಮಿಸಿದರು. ಆರ್‌ಸಿಬಿ ಅದೊಂದು ಪ್ರಾಂಚೈಸಿ ಅಲ್ಲ, ಅದೊಂದು ಕರ್ನಾಟಕದ ಕ್ರಿಕೆಟ್‌ ತಂಡ ಎನ್ನುವ ನಂಬಿಕೆ ಕನ್ನಡಿಗರಲ್ಲಿದೆ. ಈ ಸಲ ಕಪ್‌ ನಮ್ದು ಎಂದು ಎಲ್ಲರೂ ಹೇಳುತ್ತಿದ್ದರು. ಆರ್‌ಸಿಬಿ ಗೆಲ್ಲಲಿ ಎಂದು ಜನರು ದೇವರಿಗೆ ಪೂಜೆ, ಪ್ರಾರ್ಥನೆ ಸಲ್ಲಿಸಿದ್ದರು. ಜನರ ನಂಬಿಕೆಗೆ ಈ ಸರಕಾರ ಘಾಸಿ ಉಂಟು ಮಾಡಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಮಂಗಳವಾರ ರಾತ್ರಿ ಕುತೂಹಲ ಘಟ್ಟಕ್ಕೆ ತಲುಪಿ ಅಂತಿಮವಾಗಿ ಆರ್‌ಸಿಬಿ ತಂಡ ಕಪ್‌ ಗೆದ್ದಿತು. ತರಾತುರಿಯಾಗಿ ಇಷ್ಟು ಬೇಗ ಅವರಿಗೆ ಅಭಿನಂದನೆ, ಸನಾನ ಹಮಿಕೊಂಡಿದ್ದು ಯಾಕೆ? ಆ ತಂಡಕ್ಕೆ ಆಹ್ವಾನ ಕೊಟ್ಟವರು ಯಾರು? ಇಷ್ಟು ಆತುರ ಯಾಕೆ? ಇಲ್ಲಿ ಡಿಸಿಎಂ ಅವರು ನಿರ್ವಹಿಸಿದ ಪಾತ್ರ ಏನು ಎಂಬುದು ಎಲ್ಲರೂ ಬಲ್ಲರು ಎಂದು ಅವರು ಕಟುವಾಗಿ ಟೀಕಿಸಿದರು.

ನಿನ್ನೆ ಬೆಳಗ್ಗೆ ತಂಡವನ್ನು ಸ್ವಾಗತ ಕೋರಲು ವಿಮಾನ ನಿಲ್ದಾಣಕ್ಕೆ ಹೋದವರು ಯಾರು? ಅದನ್ನು ಇವೆಂಟ್‌ ರೀತಿಯಲ್ಲಿ ವೈಭವೀಕರಿಸಿದ್ದು ಯಾರು? ಡಿಸಿಎಂ ಅವರು ತಮನ್ನು ತಾವು ವೈಭವೀಕರಿಸಿಕೊಳ್ಳಲು ಇಷ್ಟೆಲ್ಲಾ ಮಾಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಯಾರಿದ್ದರು? ಡಿಸಿಎಂ ಮತ್ತವರ ಪಟಾಲಂ ಮಾತ್ರ ಇತ್ತು. ಇದೇನು ಡಿಕೆಶಿ ಆರ್‌ಸಿಬಿ ತಂಡವೇ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಎರಡು ಕಡೆ ಕಾರ್ಯಕ್ರಮ ಮಾಡುವ ಅಗತ್ಯ ಏನಿತ್ತು? ಒಂದು ಕಡೆ ಮಾಡಿದ್ದರೆ ಸಾಕಿತ್ತು. ಅದಕ್ಕೆ ಸೂಕ್ತ ಕಾಲಾವಕಾಶ ತೆಗೆದುಕೊಂಡು ಎಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು. ಅಗತ್ಯ ಭದ್ರತೆ, ಮುನ್ನೆಚ್ಚರಿಕೆ ವಹಿಸಬೇಕಿತ್ತು. ಅದು ಯಾವುದನ್ನು ಮಾಡದೆ ಕೇವಲ ತಮ ವೈಭವೀಕರಣಕ್ಕೆ ಡಿಸಿಎಂ ಇಷ್ಟೆಲ್ಲಾ ಮಾಡಿದರು. ಅವರ ಅವಿವೇಕಿತನದಿಂದ ಕ್ರೀಡಾಭಿಮಾನಿಗಳು ಜೀವ ಕಳೆದುಕೊಂಡರು ಎಂದು ಅವರು ಆರೋಪಿಸಿದರು.

ವಿಧಾನಸೌಧದ ಮುಂದೆ ಡಿಸಿಎಂ ಶೋ ಮುಗಿದ ಮೇಲೆ ಅವರು ಕ್ರೀಡಾಂಗಣಕ್ಕೆ ಬರುತ್ತಾರೆ. ಅಲ್ಲಿ ಕ್ರೀಡಾಂಗಣದ ಮುಂದೆ ಮೃತದೇಹಗಳು ಬಿದ್ದಿವೆ. ಈ ಡಿಸಿಎಂ ಎನ್ನುವ ವ್ಯಕ್ತಿ ಮೈದಾನಕ್ಕೆ ಬಂದು ಸನಾನ ಕಾರ್ಯಕ್ರಮ ನಿಲ್ಲಿಸುವ ಬದಲು ಅಲ್ಲಿಯು ಟೋಫಿ ಹಿಡಿದು ಮೇಲಕ್ಕೆ ಎತ್ತಿ ಮುತ್ತು ಕೊಡುತ್ತಾರೆ. ಇವರು ಏನು ಮೈದಾನದಲ್ಲಿ ಆಟವಾಡಿ ಕಪ್‌ ಗೆದ್ದಿದ್ದಾರೆಯೇ? ಬಹುಶಃ ಆಟಗಾರರಿಗೂ ಕಪ್‌ಗೆ ಮುತ್ತಿಕ್ಕಲು ಸಾಧ್ಯವಾಗಲಿಲ್ಲವೇನೋ? ಅಂತಹದ್ದರಲ್ಲಿ ಈ ವ್ಯಕ್ತಿ ಸಾವುಗಳ ನಡುವೆಯೂ ಪ್ರಚಾರ ಗಿಟ್ಟಿಸಲು, ಸ್ವಯಂ ವೈಭವೀಕರಿಸಿಕೊಳ್ಳಲು ಆರ್‌ಸಿಬಿ ಗೆಲುವನ್ನು ಬಳಸಿಕೊಂಡರು ಎಂದು ಕುಮಾರಸ್ವಾಮಿ ಕೆಂಡ ಕಾರಿದರು.

ಇಂಥ ಅವಿವೇಕಿಯನ್ನು ಕೂಡಲೇ ಸಂಪುಟದಿಂದ ಹೊರಕ್ಕೆ ಹಾಕಬೇಕು. ಈ ಮುಖ್ಯಮಂತ್ರಿಗೆ ನಿಜಕ್ಕೂ ಶಕ್ತಿ, ದಮು ತಾಕತ್ತು ಎನ್ನುವುದು ಇದ್ದರೆ ಮೊದಲು ಇಂಥಹ ವ್ಯಕ್ತಿಯನ್ನು ಮಂತ್ರಿ ಮಂಡಲದಿಂದ ಹೊರ ಹಾಕಲಿ ಎಂದು ಕೇಂದ್ರ ಸಚಿವರು ಒತ್ತಾಯ ಮಾಡಿದರು.

RELATED ARTICLES

Latest News