Thursday, May 2, 2024
Homeರಾಜಕೀಯಜೆಡಿಎಸ್ ಪಕ್ಷದ ಕುರಿತು 'ಭವಿಷ್ಯ' ನುಡಿದ ಡಿಕೆಶಿ

ಜೆಡಿಎಸ್ ಪಕ್ಷದ ಕುರಿತು ‘ಭವಿಷ್ಯ’ ನುಡಿದ ಡಿಕೆಶಿ

ಕಲಬುರಗಿ,ಏ.12- ಲೋಕಸಭಾ ಚುನಾವಣೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳುತ್ತದೆ ಅಥವಾ ಬಿಜೆಪಿಯೇ ಜೆಡಿಎಸ್ ಅನ್ನು ಎನ್‍ಡಿಎ ಕೂಟದಿಂದ ಹೊರಹಾಕುತ್ತದೆ, ಈ ಎರಡರಲ್ಲೂ ಪ್ರಮುಖ ವಿದ್ಯಮಾನಗಳು ಘಟಿಸುತ್ತವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಕಲಬುರಗಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಮೋದಿ ಅಲೆ ಇಲ್ಲ. ಕಾಂಗ್ರೆಸ್ ಅಲೆ ಮತ್ತು ಪಂಚಖಾತ್ರಿಗಳ ಅಲೆ ಜೋರಾಗಿದೆ. ಜನ ಅದಕ್ಕೆ ತೀವ್ರವಾದ ಬೆಂಬಲ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಲಿದೆ. ರಾಜಕೀಯವಾಗಿ ಮಹತ್ವದ ಬದಲಾವಣೆಯಾಗುತ್ತವೆ. ಜನ ಬಿಜೆಪಿಯವರ ಸುಳ್ಳುಗಳನ್ನು ನಂಬುತ್ತಿಲ್ಲ ಎಂದು ಹೇಳಿದರು.

RELATED ARTICLES

Latest News