ಫರಿದಾಬಾದ್ (ಹರಿಯಾಣ), ಜೂ.22- ಫರಿದಾಬಾದ್ ಜಿಲ್ಲೆಯ ರೋಶನ್ ನಗರದಲ್ಲಿ ಮಾವನೇ ಸೊಸೆ ಜೀವ ತೆಗೆದು, ಮನೆಯ ಮುಂದೆ 10 ಅಡಿ ಅಳದ ಗುಂಡಿ ತೋಡಿ ಹೂತು ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ತನು ಸಿಂಗ್ (24) ಕೊಲೆಯಾದ ಸೊಸೆ. ಮಾವ ಭೂಪಸಿಂಗ್ ಕೊಲಗೈದ ಆರೋಪಿ. ಕೊಲೆದು ಎರಡು ತಿಂಗಳ ಬಳಿಕ ಫರಿದಾಬಾದ್ ಪೊಲೀಸರು ಈ ನಿಗೂಢ ಕೊಲೆ ಕೇಸ್ ಅನ್ನು ಭೇದಿಸಿದ್ದಾರೆ.
ಘಟನೆ ವಿವರ:
ಎರಡು ವರ್ಷದ ಹಿಂದೆ ತನುಸಿಂಗ್ ಎಂಬ ಯುವತಿಯನ್ನು ರೋಶನ್ ನಗರದ ಅರುಣ್ ಸಿಂಗ್ಗೆ ನೀಡಿ ಮದುವೆ ಮಾಡಲಾಗಿತ್ತು. ಆದರೆ ತನು ಸಿಂಗ್ಗೆ ಪತಿ ಅರುಣ್ ಸಿಂಗ್ ಹಾಗೂ ಆತನ ತಂದೆ ಭೂಪಸಿಂಗ್ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು.ವರದಕ್ಷಿಣೆ ತರಲಾಗದೇ, ತನುಸಿಂಗ್ ತವರು ಮನೆ ಸೇರಿದ್ದಳು. ಬಳಿಕ ಮತ್ತೆ ಗಂಡನ ಮನೆಗೆ ಬಂದಿದ್ದಳು.
ಕಳೆದ ಏಪ್ರಿಲ್ 23ರಂದು ಮನೆ ಮುಂದೆ ಭೂಪಸಿಂಗ್ 10 ಅಡಿ ಆಳದ ಗುಂಡಿ ತೆಗೆದಿದ್ದ. ಒಳಚರಂಡಿ ಕೆಲಸಕ್ಕಾಗಿ ಗುಂಡಿ ತೆಗೆದಿರುವುದಾಗಿ ಅಕ್ಕಪಕ್ಕದವರಿಗೆ ಹೇಳಿಕೊಂಡಿದ್ದ. ಆದರೆ ರಾತ್ರೋರಾತ್ರಿ ಸೊಸೆ ತನು ಸಿಂಗ್ಳನ್ನು ಕೊಲೆಗೈದು ಶವವನ್ನು ಹಾಕಿ ಮುಚ್ಚಿ ಹಾಕಿದ್ದ.ಏಪ್ರಿಲ್ 25ರಂದು ಸೊಸೆ ತನು ಸಿಂಗ್ ನಾಪತ್ತೆಯಾಗಿದ್ದಾಳೆ ತನ್ನ ಸೊಸೆಗೆ ಮಾನಸಿಕ ಸ್ಥಿಮಿತ ಸರಿ ಇರಲಿಲ್ಲ. ಮಾರ್ಕೆಟ್ ಗೆ ಹೋದವಳು ವಾಪಸ್ ಬಂದಿಲ್ಲ ಎಂದು ಕಥೆ ಕಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದ.
ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಪೊಲೀಸರಿಗೆ ಭೂಪಸಿಂಗ್ ಹಾಗೂ ಮಗ ಅರುಣ್ ಸಿಂಗ್ ಮೇಲೆಯೇ ಅನುಮಾನ ಇತ್ತು.ಇಬ್ಬರನ್ನು ವಿಚಾರಣೆ ನಡೆಸಿದಾಗ ಇಬ್ಬರಿಂದ ವಿಭಿನ್ನ ಹೇಳಿಕೆಗಳು ಬಂದಿವೆ. ಅನುಮಾನಗೊಂಡ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದಾಗ ಕೊನೆಗೆ ಮಾವ ಭೂಪ್ ಸಿಂಗ್ನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
ಏಪ್ರಿಲ್ 21ರ ರಾತ್ರಿಯೇ ತನ್ನ ಸೊಸೆಯನ್ನು ತಾನೇ ಹತ್ಯೆ ಮಾಡಿದ್ದಾಗಿ ಶವವನ್ನು ಮನೆಯ ಮುಂದೆಯೇ ಗುಂಡಿ ತೋಡಿ ಹೂತು ಹಾಕಿದ್ದಾಗಿ ಹೇಳಿದ್ದಾನೆ.ಮಾವ ಭೂಪಸಿಂಗ್, ಅತ್ತೆ ಸೋನಿಯಾ, ಪತಿ ಅರುಣ್, ನಾದಿನಿ ಕಾಜಲ್ ವಿರುದ್ಧ ಹತ್ಯೆ, ವರದಕ್ಷಿಣೆ ತಡೆ ಕಾಯಿದೆಯಡಿ ಕೇಸ್ ದಾಖಲಾಗಿದೆ. ಭೂಪಸಿಂಗ್, ಅರುಣ್ ಸಿಂಗ್ ಸದ್ಯ ಪೊಲೀಸರ ವಶದಲ್ಲಿದ್ದಾರೆ.
ಈಗ ಪೊಲೀಸರು ಮೃತದೇಹವನ್ನು ಗುಂಡಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಈ ಹತ್ಯೆ ಕೇಸ್ನಲ್ಲಿ ಕುಟುಂಬದ ಇತರೆ ಸದಸ್ಯರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ವರದಕ್ಷಿಣೆ ಕಾರಣಕ್ಕಾಗಿ ಹತ್ಯೆ ಮಾಡಿದ್ದಾರೆ ಎಂದು ಎಸಿಪಿ ರಾಜೇಶ್ ಕುಮಾರ್ ಲೋಚನ್ ಹೇಳಿದ್ದಾರೆ. ಇನ್ನು ಪೊಲೀಸರು ಸೋನಿಯಾ, ಕಾಜಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.
- ಮಾಜಿ ಪ್ರಧಾನಿ ದೇವೇಗೌಡರಿಗೆ ಶ್ರೀಗಂಗ ಸಾಮ್ರಾಟ ಶ್ರೀಪುರುಷ ಪ್ರಶಸ್ತಿ ಪ್ರದಾನ
- ಡಿ.ಕೆ.ಶಿವಕುಮಾರ್ ಸಿಎಂ ಕನಸು ಕಾಣಬೇಕಷ್ಟೇ..! : ಹೆಚ್ಡಿಕೆ ವ್ಯಂಗ್ಯ
- ಭ್ರಷ್ಟಾಚಾರ ಬಯಲಿಗೆಳೆದ ಶಾಸಕರಿಗೆ ಬೆದರಿಕೆ : ವಿಜಯೇಂದ್ರ ಗಂಭೀರ ಆರೋಪ
- ಸಂಚಲನ ಮೂಡಿಸಿದೆ ಕಾಂಗ್ರೆಸ್ ಶಾಸಕರ ಆಪ್ತ ಸಹಾಯಕನ ಮತ್ತೊಂದು ಆಡಿಯೋ
- ಅಕ್ರಮ ಗಣಿ ಪ್ರಕರಣಗಳ ಕುರಿತು ಎಚ್.ಕೆ. ಪಾಟೀಲರ ಪತ್ರಕ್ಕೆ ಸಿಎಂ ಸ್ಪಂದನೆ ಏನು.. ?