Sunday, September 8, 2024
Homeರಾಷ್ಟ್ರೀಯ | Nationalವೃದ್ದ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪ್ರಾಪ್ತ ಬಾಲಕ

ವೃದ್ದ ದಂಪತಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪ್ರಾಪ್ತ ಬಾಲಕ

ಲಕ್ನೋ, ಜು.17 (ಪಿಟಿಐ) ಜಗಳದ ಹಿನ್ನೆಲೆಯಲ್ಲಿ ವದ್ಧ ಮತ್ತು ಆತನ ಪತ್ನಿಯನ್ನು ಅವರ ಅಪ್ರಾಪ್ತ ಸೋದರಳಿಯ ಗುಂಡಿಕ್ಕಿ ಕೊಂದಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ತಡರಾತ್ರಿ ಇಂದಿರಾ ನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯ ಟಕ್ರೋಖಿ ಪ್ರದೇಶದಲ್ಲಿ ನಡೆದ ಘಟನೆಯಲ್ಲಿ ದಂಪತಿಯ ಮಗನೂ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜೇಂದ್ರ ಸಿಂಗ್‌ (62) ಮತ್ತು ಅವರ ಪತ್ನಿ ಸರೋಜ್‌ (56) ಅಪ್ರಾಪ್ತ ಸೋದರಳಿಯ ಗುಂಡೇಟಿಗೆ ಬಲಿಯಾದ ವೃದ್ಧ ದಂಪತಿ ಎಂದು ಗುರುತಿಸಲಾಗಿದೆ.ಘಟನೆಯಲ್ಲಿ ದಂಪತಿಯ ಪುತ್ರ ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್‌‍ ಆಯುಕ್ತ (ಉತ್ತರ) ಅಭಿಜತ್‌ ಆರ್‌ ಶಂಕರ್‌ ಸುದ್ದಿಗಾರರಿಗೆ ತಿಳಿಸಿದರು.

ತಡರಾತ್ರಿ 10 ಗಂಟೆ ಸುಮಾರಿಗೆ ರಾಜೇಂದ್ರ ಸಿಂಗ್‌ ತನ್ನ ಸಹೋದರಿ, ಆರೋಪಿಯ ತಾಯಿಯೊಂದಿಗೆ ಜಗಳವಾಡಿದ್ದಾನೆ. ಇದರಿಂದ ಕೋಪಗೊಂಡ ಅಪ್ರಾಪ್ತ ವಯಸ್ಕ ಸಿಂಗ್‌ ಮತ್ತು ಅವನ ಹೆಂಡತಿ ಮತ್ತು ಮಗನಿಗೆ ಗುಂಡು ಹಾರಿಸಿದ್ದಾನೆ ಎಂದು ಡಿಸಿಪಿ ಹೇಳಿದರು.
ಮೂವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಸಿಂಗ್‌ ಮತ್ತು ಅವರ ಪತ್ನಿ ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.

ಅವರ ಮಗನಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆತನ ಸ್ಥಿತಿ ಸ್ಥಿರವಾಗಿದೆ ಎಂದು ಶಂಕರ್‌ ತಿಳಿಸಿದ್ದಾರೆ. ಪರಾರಿಯಾಗಿರುವ ಅಪ್ರಾಪ್ತನ ಪತ್ತೆಗೆ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು. ಸ್ಥಳೀಯರ ಪ್ರಕಾರ ಸಿಂಗ್‌ ನಿವತ್ತ ಸರ್ಕಾರಿ ನೌಕರ. ಅವನು ಮತ್ತು ಅವನ ಕುಟುಂಬವು ತನ್ನ ಸಹೋದರಿ ಮತ್ತು ಅವಳ ಮಗನೊಂದಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು.

RELATED ARTICLES

Latest News