ಬೆಂಗಳೂರು,ಜೂ.10- ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ಎಂಜಿನಿಯರೊಬ್ಬರಿಗೆ ಕರೆ ಮಾಡಿದ ಸೈಬರ್ ವಂಚಕರು ನಿಮ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ನಿಮನ್ನು ಬಂಧಿಸುವುದಾಗಿ ಬೆದರಿಸಿ 4.79 ಕೋಟಿ ರೂ. ಹಣ ಸುಲಿಗೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್ನಲ್ಲಿ ಇಬ್ಬರು ವಂಚಕರನ್ನು ಆಗ್ನೇಯ ವಿಭಾಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.ನಾರಾಯಣ್ ಸಿಂಗ್ ಚೌಧರಿ ಮತ್ತು ಈಶ್ವರ್ಸಿಂಗ್ ಬಂಧಿತ ವಂಚಕರು.ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿ ವಿಶಾಖಪಟ್ಟಣ, ಚೆನೈ ಹಾಗೂ ಇನ್ನಿತರ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ.
ಎಂಜಿನಿಯರ್ ಮಂಜುನಾಥ್ ಎಂಬುವವರು ಆಫ್ರಿಕಾದ ನೈಜೀರಿಯಾದಲ್ಲಿ ಸತತ 31 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಬಳಿಕ ವಾಪಸ್ ಬೆಂಗಳೂರಿಗೆ ಬಂದು ಪತ್ನಿ ಜೊತೆ ಬಿಟಿಎಂ ಲೇಔಟ್ನಲ್ಲಿ ನೆಲೆಸಿದ್ದಾರೆ. ಇವರಿಗೆ ಕಳೆದ ಮಾರ್ಚ್ನಲ್ಲಿ ಬ್ಯಾಂಕ್ ಪ್ರತಿನಿಧಿ ಸೋಗಿನಲ್ಲಿ ಕರೆ ಮಾಡಿದ ವಂಚಕರು ನಿಮ ಕ್ರೇಡಿಟ್ ಕಾರ್ಡ್ ಲಿಮಿಟ್್ಸ ಓವರ್ ಡ್ಯೂ ಆಗಿದೆ ಎಂದು ನಂಬಿಸಿ ಅವರ ಬ್ಯಾಂಕ್ನ ವಿವರಗಳನ್ನು ಪಡೆದುಕೊಂಡಿದ್ದಾರೆ.
ತದ ನಂತರ ನಿಮ ಖಾತೆಯ ಮೂಲಕ ಅಕ್ರಮವಾಗಿ ಹಣ ವರ್ಗಾವಣೆಯಾಗಿದೆ, ನಿಮ ವಿರುದ್ಧ ಇಡಿ ಮತ್ತು ಸಿಬಿಐನಲ್ಲಿ ಪ್ರಕರಣ ದಾಖಲಾಗಿದೆ ಎಂದು ಹೇಳಿ ನಕಲಿ ವಾರೆಂಟ್ನ ಫೋಟೋ ಕಳುಹಿಸಿ ನಿಮನ್ನು ಬಂಧಿಸಿ ತಿಹಾರ್ ಜೈಲಿನಲ್ಲಿರಿಸುತ್ತೇವೆಂದು ಹೆದರಿಸಿ ಹಂತ ಹಂತವಾಗಿ ಬರೋಬ್ಬರಿ 4.79 ಕೋಟಿ ರೂ. ಹಣವನ್ನು ಸುಲಿಗೆ ಮಾಡಿದ್ದಾರೆ.
ನಂತರ ಹಣ ಇಲ್ಲ ಎಂದಾಗ ಆಸ್ತಿ ಪತ್ರಗಳ ಕಾಪಿಗಳನ್ನು ಪಡೆದುಕೊಂಡಿದ್ದಾರೆ. ಇಷ್ಟಕ್ಕೆ ಸುಮನಾಗದ ವಂಚಕರು ಮತ್ತೆ ಮತ್ತೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದಾಗ,ನೊಂದ ಎಂಜಿನಿಯರ್ ಮಂಜುನಾಥ್ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಂಚಕರ ಬಗ್ಗೆ ಹಲವು ಮಾಹಿತಿಗಳನ್ನು ಕಲೆ ಹಾಕಿ ಇಬ್ಬರನ್ನು ಹೈದರಾಬಾದ್ನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದಾಗ, ಎಂಜಿನಿಯರ್ನಿಂದ ಪಡೆದುಕೊಂಡಿದ್ದ ಹಣವನ್ನು ಶ್ರೀಲಂಕಾದಲ್ಲಿ ಕ್ಯಾಸಿನೋ ಆಡಲು ಬಳಸಿರುವುದು ಗೊತ್ತಾಗಿದೆ.
ಆರೋಪಿ ಈಶ್ವರ್ ಸಿಂಗ್ ಅಕೌಂಟ್ನಲ್ಲಿದ್ದ ಹಣವನ್ನು ಪೊಲೀಸರು ಫ್ರೀಜ್ ಮಾಡಿದ್ದಾರೆ.ಮತ್ತೊಬ್ಬ ಆರೋಪಿ ನಾರಾಯಣ್ ಸಿಂಗ್ ಚೌಧರಿ ಖಾತೆಯಲ್ಲಿ 1.60 ಕೋಟಿ ರೂ. ಹಣ ಇರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದು, ಆ ಹಣವನ್ನೂ ಸಹ ಫ್ರೀಜ್ ಮಾಡುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.