ಮೈಸೂರು,ಸೆ.1– ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಮೈಸೂರು ಭೇಟಿ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಇಂದು ನೈಮಿಷಂ ಕ್ಯಾಂಪಸ್ನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ವಜ್ರಮಹೋತ್ಸವದಲ್ಲಿ ಭಾಗವಹಿಸಿ ರಾತ್ರಿ 8 ಗಂಟೆಗೆ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ನಾಳೆ ಬೆಳಗ್ಗೆ ಅರಮನೆಗೆ ಭೇಟಿ ನೀಡಿ ರಾಜವಂಶಸ್ಥೆ ಪ್ರಮೋದದೇವಿ ಒಡೆಯರ್ ಕುಟುಂಬದವರೊಂದಿಗೆ ಉಪಹಾರ ಕೂಟದಲ್ಲಿ ಭಾಗವಹಿಸಿ ದೆಹಲಿಗೆ ತೆರಳಲಿದ್ದಾರೆ.ಈ ಹಿನ್ನೆಲೆಯಲ್ಲಿ ನಾಳೆ ಮಧ್ಯಾಹ್ನದವರೆಗೂ ಅರಮನೆ ಹಾಗೂ ರಾತ್ರಿವರೆಗೂ ಚಾಮುಂಡಿ ಬೆಟ್ಟಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
ಮೈಸೂರು ಪೊಲೀಸ್ ಆಯುಕ್ತರಾದ ಸೀಮಾ ಲಟ್ಕರ್, ಡಿಸಿಪಿಗಳಾದ ಬಿಂದುಮಣಿ, ಸುಂದರ್ರಾಜ್ ಹಾಗೂ ಸಿಬ್ಬಂದಿಗಳು, ರಾಷ್ಟ್ರಪತಿಗಳು ಭೇಟಿ ನೀಡುವ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ, ರಾಡಿಸನ್ ಬ್ಲೂ ಹೋಟೆಲ್, ಮೈಸೂರು ಅರಮನೆ ಹಾಗೂ ಚಾಮುಂಡಿ ಬೆಟ್ಟದಲ್ಲಿ ಭದ್ರತೆಯನ್ನು ಪರಿಶೀಲಿಸಿದರು.
- ಅಂಗನವಾಡಿಗಳಿಗೆ ಜನತಾ ಬಜಾರ್ ಆಹಾರ ಪದಾರ್ಥ ಪೂರೈಸಿ ; ಆರ್.ಅಶೋಕ್
- ಪತಿಯಿಂದಲೇ ಕೊಲೆಯಾದ ವೈದ್ಯೆ ಡಾ.ಕೃತಿಕಾ ರೆಡ್ಡಿ ಭವ್ಯ ಬಂಗಲೆಯನ್ನು ಇಸ್ಕಾನ್ಗೆ ದಾನ ಮಾಡಲು ಮುಂದಾದ ತಂದೆ
- ಸರ್ಕಾರಿ ಜಾಗಗಳಲ್ಲಿ ಖಾಸಗಿ ಸಂಘಸಂಸ್ಥೆಗಳ ಚಟುವಟಿಕೆ ನಿರ್ಬಂಧಿಸಿದರೆ ಬಿಜೆಪಿಗೆ ಭಯವೇಕೆ..? : ಪ್ರಿಯಾಂಕ್ ಪ್ರಶ್ನೆ
- ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ : ಸಹಾಯವಾಣಿ ಮೂಲಕ ನೋಂದಣಿಗೆ ಅವಕಾಶ
- ನ್ಯಾಯಾಲಯ ತಲುಪಿದ ಟ್ರಂಪ್ ವಿಧಿಸಿದ ಹೆಚ್-1ಬಿ ಶುಲ್ಕದ ವಿಚಾರ