ಬೆಂಗಳೂರು,ಸೆ.2- ಚಲನಚಿತ್ರ ನಿರ್ದೇಶಕರೊಬ್ಬರಿಗೆ ನೀಡಿದ್ದ ಸಾಲವನ್ನು ಹಿಂದಿರುಗಿಸುವುದಾಗಿ ಹೇಳಿ ಉದ್ಯಮಿಯನ್ನು ಕರೆಸಿ ಅಪಹರಿಸಿಕೊಂಡು ಹೋಗಿ ಬೆದರಿಸಿ 3 ಲಕ್ಷ ಹಣವನ್ನು ಮೊಬೈಲ್ಗೆ ವರ್ಗಾಹಿಸಿಕೊಂಡಿದ್ದ ನಾಲ್ವರು ರೌಡಿಗಳು ಸೇರಿದಂತೆ 6 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಚಲನಚಿತ್ರ ನಿರ್ದೇಶಕ ರೊಬ್ಬರಿಗೆ ರೌಡಿ ರಾಜೇಶ್ ಎಂಬಾತ ರಿಯಲ್ ಎಸ್ಟೇಟ್ ಉದ್ಯಮಿ ಮನೋಜ್ ಅವರಿಂದ ಸಾಲ ಕೊಡಿಸಿದ್ದ.ಆದರೆ ಹಣ ಪಡೆದ ನಿರ್ದೇಶಕರು ಅಸಲು ಹಾಗೂ ಬಡ್ಡಿ ಹಣ ಹಿಂದಿರುಗಿಸಿರಲಿಲ್ಲ .ಹಾಗಾಗಿ ಮನೋಜ್ ಅವರು ಹಣ ಕೊಡಿಸುವಂತೆ ರಾಜೇಶ್ಗೆ ಒತ್ತಾಯಿಸುತ್ತಿದ್ದರು.
ಈ ನಡುವೆ ಬಸವೇಶ್ವರ ನಗರದ ನಿರ್ದೇಶಕರ ಮನೆ ಬಳಿ ಬಂದರೆ ನಿಮ ಹಣ ವಾಪಸ್ ಕೊಡಿಸುವುದಾಗಿ ಹೇಳಿ ಮನೋಜ್ಅವರನ್ನು ಕರೆಸಿಕೊಂಡಿದ್ದಾರೆ. ಮನೋಜ್ ಅವರು ಸ್ಥಳಕ್ಕೆ ಬರುತ್ತಿದ್ದಂತೆ ನಾಲ್ವರು ರೌಡಿಗಳು ಸೇರಿ 6 ಮಂದಿ ದರೋಡೆಕೋರರು ಅವರನ್ನು ಕಾರಿನಲ್ಲಿ ಅಪಹರಿಸಿಕೊಂಡು ಹಲವು ಸ್ಥಳಗಳಲ್ಲಿ ಸುತ್ತಾಡಿಸಿ ಅವರ ಮೊಬೈಲ್ನಿಂದಲೇ 3 ಲಕ್ಷ ರೂ. ಹಣವನ್ನು ತಮ ಮೊಬೈಲ್ಗಳಿಗೆ ವರ್ಗಾಹಿಸಿಕೊಂಡಿದ್ದಾರೆ.
ಇಷ್ಪಕ್ಕೆ ಸುಮನಾಗದ ಅಪಹರಣಕಾರರು ಇನ್ನೂ 10 ಲಕ್ಷ ರೂ. ಕೊಡಬೇಕೆಂದು ಬೆದರಿಕೆ ಹಾಕಿದ್ದಾರೆ.ದರೋಡೆಕೋರರ ವರ್ತನೆಯಿಂದ ಹೆದರಿದ ಮನೋಜ್ ಅವರು 10 ಲಕ್ಷ ರೂ. ಹಣ ಹೊಂದಿಸಿ ಕೊಡುವುದಾಗಿ ಹೇಳಿ ಉಪಾಯದಿಂದ ತಪ್ಪಿಸಿಕೊಂಡು ಬಂದು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು ತನಿಖೆಯನ್ನು ಚುರುಕು ಗೊಳಿಸಿ ನಾಲ್ವರು ರೌಡಿಗಳು ಸೇರಿದಂತೆ ಆರು ಮಂದಿ ದರೋಡೆ ಕೋರರನ್ನು ಬಂಧಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
- ನ.23ರಂದು ಬೆಂಗಳೂರಿನಲ್ಲಿ ಕೆನರಾ ಬ್ಯಾಂಕ್ ವತಿಯಿಂದ ‘ಒಗ್ಗಟ್ಟಿನ ಓಟ’ ಮ್ಯಾರಥಾನ್
- ಅಭಿನವ ಬೀಚಿ ಗಂಗಾವತಿ ಪ್ರಾಣೇಶ್ ಅವರ ತಾಯಿ ಸತ್ಯವತಿ ಬಾಯಿ ವಿಧಿವಶ
- ಸಾಲು ಸಾಲು ರಜೆ ಹಿನ್ನೆಲೆಯಲ್ಲಿ ಬೆಂಗಳೂರಿಂದ ಊರುಗಳತ್ತ ತೆರಳುತ್ತಿರುವ ಜನ, ಭಾರಿ ಟ್ರಾಫಿಕ್ ಜಾಮ್
- ಆಫ್ಘನ್ ಮೇಲೆ ಪಾಕ್ ವೈಮಾನಿಕ ದಾಳಿಗೆ ಮೂವರು ಕ್ರಿಕೆಟಿಗರು ಬಲಿ
- ಬೆಂಗಳೂರು : ಲಾಡ್ಜ್ ನಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದ ಸಾವು