Friday, January 2, 2026
Homeರಾಜ್ಯರಾಮುಲು ಮತ್ತು ರೆಡ್ಡಿಗೆ ರಕ್ಷಣೆ ಕೋರಿ ಡಿಜಿಪಿಗೆ ಬಿಜೆಪಿ ಮನವಿ

ರಾಮುಲು ಮತ್ತು ರೆಡ್ಡಿಗೆ ರಕ್ಷಣೆ ಕೋರಿ ಡಿಜಿಪಿಗೆ ಬಿಜೆಪಿ ಮನವಿ

BJP appeals to DGP seeking protection for Ramulu and Reddy

ಬೆಂಗಳೂರು,ಜ.2- ಬಳ್ಳಾರಿಯಲ್ಲಿ ನಡೆದಿರುವ ಗಲಭೆಗೆ ಸಂಬಂಧಿಸಿದಂತೆ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ.ಶ್ರೀರಾಮುಲುಗೆ ಸೂಕ್ತ ರಕ್ಷಣೆ ನೀಡಬೇಕೆಂದು ಕೋರಿ ಬಿಜೆಪಿ, ರಾಜ್ಯ ಪೊಲೀಸ್‌‍ ಮಹಾನಿರ್ದೇಶಕರಿಗೆ ಮನವಿ ಮಾಡಿದೆ.

ರಾಜ್ಯ ಪೊಲೀಸ್‌‍ ಮಹಾನಿರ್ದೇಶಕ ಡಾ.ಎ.ಸಲೀಂ ಅವರನ್ನು ಭೇಟಿ ಮಾಡಲಿರುವ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ಹಾಗೂ ವಿಧಾನಪರಿಷತ್‌ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಸಿ.ಸಿ.ಪಾಟೀಲ್‌, ಶಾಸಕ ಮಹೇಶ್‌ ತೆಂಗಿನಕಾಯಿ ಸೇರಿದಂತೆ ಮತ್ತಿತರರ ನಿಯೋಗವು ಸೂಕ್ತ ಭದ್ರತೆ ಒದಗಿಸುವಂತೆ ಮನವಿಪತ್ರ ಸಲ್ಲಿಸಿತು.

ಬಳ್ಳಾರಿಯಲ್ಲಿ ಬ್ಯಾನರ್‌ ಕಟ್ಟುವ ಸಂಬಂಧ ನಾರಾ ಭರತ್‌ ರೆಡ್ಡಿ ಬೆಂಬಲಿಗರ ನಡುವೆ
ಗಲಾಟೆ ನಡೆದು ಆಕಸಿಕವಾಗಿ ಹಾರಿದ ಗುಂಡು ರಾಜಶೇಖರ್‌ ಎಂಬುವರಿಗೆ ತಗುಲಿ ಸಾವನ್ನಪ್ಪಿದ್ದಾರೆ.

ಈ ಘಟನೆಯ ನಂತರ ಬಳ್ಳಾರಿ ಪ್ರಕ್ಷುಬ್ದಗೊಂಡಿದೆ. ಬಿಜೆಪಿ ನಾಯಕರು ಆರೋಪಿಸಿರುವಂತೆ, ಜನಾರ್ದನ ರೆಡ್ಡಿ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ ನಡೆಸಲು ಸಂಚು ರೂಪಿಸಲಾಗಿತ್ತು ಎಂದು ದೂರಿದ್ದಾರೆ. ಹೀಗಾಗಿ ಇಬ್ಬರಿಗೂ ರಕ್ಷಣೆ ನೀಡಬೇಕೆಂದು ಡಿಜಿ ಅವರಿಗೆ ಬಿಜೆಪಿ ಮನವಿ ಮಾಡಿದೆ.

RELATED ARTICLES

Latest News