Friday, September 20, 2024
Homeರಾಷ್ಟ್ರೀಯ | Nationalಭುವನೇಶ್ವರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಭುವನೇಶ್ವರದಲ್ಲಿ ಹಳಿತಪ್ಪಿದ ಗೂಡ್ಸ್ ರೈಲು

ಭುವನೇಶ್ವರ, ಜು.29: ಓಡಿಸಾದ ಭುವನೇಶ್ವರದಲ್ಲಿ ಇಂದು ಮುಂಜಾನೆ ಗೂಡ್‌್ಸ ರೈಲು ಹಳಿತಪ್ಪಿದೆ ಎಂದು ಪೂರ್ವ ಕರಾವಳಿ ರೈಲ್ವೆ ತಿಳಿಸಿದೆ.ಮಂಚೇಶ್ವರ ನಿಲ್ದಾಣದ ರೈಲ್ವೇ ಯಾರ್ಡ್‌ನಲ್ಲಿ ಬೆಳಗಿನ ಜಾವ 1.35ಕ್ಕೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ರೈಲು ಹಳಿತಪ್ಪಿದ್ದರಿಂದ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗಳಿಗೆ ಹಾನಿಯಾಗಿಲ್ಲ

ಈ ಘಟನೆಯಿಂದಾಗಿ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಆರು ರೈಲುಗಳ ವೇಳಾಪಟ್ಟಿಯನ್ನು ಬದಲಿಸಲಾಗಿದೆ, ಇದೇ ವೆಳೆ ಪುರಿ-ರೂರ್ಕೆಲಾ ಎಕ್ಸ್ ಪ್ರೆಸ್‌‍ ರೈಲನ್ನುಎರಡೂ ದಿಕ್ಕುಗಳಲ್ಲಿ ಅಲ್ಪಾವಧಿಗೆ ನಿಲ್ಲಿಸಲಾಗಿತ್ತು.

ಪರಿಹಾರ ಕಾರ್ಯಾಚರಣೆ ನಡೆದು ಬೆಳಗ್ಗೆ 5.05ಕ್ಕೆ ರೈಲುಗಳ ಸಂಚಾರಕ್ಕೆ ಮಾರ್ಗವನ್ನು ಅವಕಾಶ ನೀಡಿಲಾಗಿದೆ ಎಂದು ತಿಳಿಸಲಾಗಿದೆ.

RELATED ARTICLES

Latest News