Friday, June 6, 2025
Homeರಾಜ್ಯಸರ್ಕಾರ ಪೊಲೀಸರ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿದ್ದೆ ವಿಜಯೋತ್ಸವ ದುರಂತಕ್ಕೆ ಕಾರಣ

ಸರ್ಕಾರ ಪೊಲೀಸರ ಮುನ್ನೆಚ್ಚರಿಕೆಯನ್ನು ನಿರ್ಲಕ್ಷಿಸಿದ್ದೆ ವಿಜಯೋತ್ಸವ ದುರಂತಕ್ಕೆ ಕಾರಣ

Government ignored police precautions, cause of victory tragedy

ಬೆಂಗಳೂರು, ಜೂ. 5 (ಪಿಟಿಐ) ಐಪಿಎಲ್‌ ಗೆದ್ದ ವಿಜಯೋತ್ಸವದ ಮೆರವಣಿಗೆ, ಉಚಿತ ಪಾಸ್‌‍ಗಳು, ಸೀಮಿತ ಆಸನಗಳಿಗಿಂತ ಮೂರು ಪಟ್ಟು ಹೆಚ್ಚು ಜನರ ಸಮಾಗಮ, ಪೊಲೀಸರ ಮಾತನ್ನು ಕಿವಿಗೆ ಹಾಕಿಕೊಳ್ಳದ ಸರ್ಕಾರದ ನಿರ್ಧಾರಗಳೇ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾಲ್ತುಳಿತಕ್ಕೆ ಕಾರಣ ಎನ್ನಲಾಗಿದೆ.

ನಮ ಮಾತನ್ನು ಕೆಲವರು ಕಿವಿ ಮೇಲೆ ಹಾಕಿಕೊಳ್ಳಲಿಲ್ಲ ಇದರ ಜೊತೆಗೆ ಇನ್ನಿತರ ಕೆಲವು ಪ್ರಮುಖ ಕಾರಣಗಳಿಂದ 11 ಮಂದಿ ಅಮಾಯಕರ ಸಾವಿಗೆ ಕಾರಣವಾಯಿತು ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ವಿಧಾನಸೌಧದ ಎದುರಿನ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಮೂಲೆಗಳಿಂದ ಲಕ್ಷಾಂತರ ಮಂದಿ ಆಗಮಿಸಿದ್ದರು. ನಂತರ ಸ್ಟೇಡಿಯಂನಲ್ಲಿ ಕಾರ್ಯಕ್ರಮ ಆರಂಭಿಕ ಅವ್ಯವಸ್ಥೆಯೇ ಕಾಲ್ತುಳಿತಕ್ಕೆ ಕಾರಣವಾಯಿತು, ಕ್ರೀಡಾಂಗಣಕ್ಕೆ ಪ್ರವೇಶ ಟಿಕೆಟ್‌ ಹೊಂದಿರದ ಸಾವಿರಾರು ಕ್ರಿಕೆಟ್‌ ಉತ್ಸಾಹಿಗಳು ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ನುಗ್ಗಲು ಯತ್ನಿಸಿದಾಗ ಕಾಲ್ತುಳಿತ ಸಂಭವಿಸಿತು ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಅವ್ಯವಸ್ಥೆಯ ಸಮಯದಲ್ಲಿ, ಕೆಲವರು ನೆಲಕ್ಕೆ ಬಿದ್ದರು, ಕೆಲವರು ಕ್ರೀಡಾಂಗಣಕ್ಕೆ ಪ್ರವೇಶಿಸಲು ಬೃಹತ್‌ ಗೇಟ್‌ಗಳನ್ನು ಹತ್ತಲು ಪ್ರಯತ್ನಿಸುವಾಗ ಗಾಯಗೊಂಡರು. ಕ್ರೀಡಾಂಗಣವು 35,000 ಜನರಿಗೆ ಸ್ಥಳಾವಕಾಶ ಕಲ್ಪಿಸುತ್ತದೆ, ಆದರೆ ರಾಜ್ಯದ ವಿವಿಧ ಮೂಲೆಗಳಿಂದ ಎರಡರಿಂದ ಮೂರು ಲಕ್ಷ ಮಂದಿ ಜಮಾಯಿಸಿದ್ದು ಘಟನೆಗೆ ಮೂಲ ಕಾರಣ ಎಂದು ತಿಳಿದುಬಂದಿದೆ.

ಐಪಿಎಲ್‌ ಪಂದ್ಯ ಮುಗಿದ ಮರುದಿನವೇ ಅಭಿನಂದನಾ ಕಾರ್ಯಕ್ರಮವನ್ನು ಕ್ರಿಕೆಟ್‌ ಅಸೋಸಿಯೇಷನ್‌ ಆಯೋಜಿಸಿತ್ತು, ಆದ್ದರಿಂದ ಇಷ್ಟೊಂದು ಜನರು ಬರುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಕ್ರೀಡಾಂಗಣದ ಸಾಮರ್ಥ್ಯಕ್ಕೆ ಸಮಾನ ಸಂಖ್ಯೆಯ ಜನರು ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಜನರು ಸೇರುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.

ಆದರೆ ದಿಢೀರ್‌ ನಗರಕ್ಕೆ ಆಗಮಿಸಿದ ಲಕ್ಷಾಂತರ ಕ್ರಿಕೆಟ್‌ ಅಭಿಮಾನಿಗಳು ತಮ ನೆಚ್ಚಿನ ಆಟಗಾರರರನ್ನು ಕಣ್ತುಂಬಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದ ಸಣ್ಣ ದ್ವಾರಗಳ ಮೂಲಕ ಪ್ರವೇಶಿಸಲು ಯತ್ನಿಸಿದರು ಸಾಧ್ಯವಾಗದೆ ಇದ್ದಾಗ ಗೇಟ್‌ಗಳನ್ನು ಸಹ ಮುರಿದಿದ್ದಾರೆ, ಆದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇಷ್ಟೊಂದು ಜನಸಂದಣಿ ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಮೂಲಗಳು ಉಲ್ಲೇಖಿಸಿವೆ.

ನಿನ್ನೆ ಬೆಳಿಗ್ಗೆ 11:56 ಕ್ಕೆ ಬೆಂಗಳೂರು ಸಂಚಾರ ಪೊಲೀಸರು ಕ್ರೀಡಾಂಗಣದಲ್ಲಿ ವಿಜಯೋತ್ಸವ ಮೆರವಣಿಗೆ ಇರುವುದಿಲ್ಲ ಆದರೆ ಅಭಿನಂದನಾ ಕಾರ್ಯಕ್ರಮ ಮಾತ್ರ ನಡೆಯಲಿದೆ ಎಂದು ಘೋಷಿಸಿದರು.ಆದರೆ, ಮಧ್ಯಾಹ್ನ 3.14 ಕ್ಕೆ ಆರ್‌ಸಿಬಿ ತಂಡದ ಆಡಳಿತ ಮಂಡಳಿಯು ಸಂಜೆ 5 ಗಂಟೆಗೆ ವಿಜಯೋತ್ಸವ ಮೆರವಣಿಗೆ ನಡೆಸುವುದಾಗಿ ಘೋಷಿಸಿತು. ವಿಕ್ಟರಿ ಪೆರೇಡ್‌ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಚರಣೆಗಳು ನಡೆಯಲಿವೆ.

ಎಲ್ಲರೂ ರೋಡ್‌ ಶೋ ಅನ್ನು ಶಾಂತಿಯುತವಾಗಿ ಆನಂದಿಸಲು ಪೊಲೀಸರು ಮತ್ತು ಇತರ ಅಧಿಕಾರಿಗಳು ನಿಗದಿಪಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಲು ನಾವು ಎಲ್ಲಾ ಅಭಿಮಾನಿಗಳನ್ನು ವಿನಂತಿಸುತ್ತೇವೆ ಆನ್‌ಲೈನ್‌ನಲ್ಲಿ ಉಚಿತ ಪಾಸ್‌‍ಗಳು (ಸೀಮಿತ ಪ್ರವೇಶ) ಲಭ್ಯವಿದೆ ಎಂದು ಅದು ಎಕ್‌್ಸ ಮಾಡಲಾಗಿತ್ತು.

ಇದು ಅಭಿಮಾನಿಗಳನ್ನು ಮೆರವಣಿಗೆ ನಡೆಯುವುದೋ ಅಥವಾ ಇಲ್ಲವೆ ಎಂಬ ಗೊಂದಲಕ್ಕೀಡು ಮಾಡಿತು.ವಿಕ್ಟರಿ ಪೆರೇಡ್‌ ನಡೆಸಲಾಗುವುದಿಲ್ಲ ಮತ್ತು ಟಿಕೆಟ್‌ ಹೊಂದಿರುವವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು ಎಂದು ಘೋಷಿಸಿದ್ದರಿಂದ ಏಕಾಏಕಿ ಕ್ರಿಕೆಟ್‌ ಅಭಿಮಾನಿಗಳು ಕ್ರೀಡಾಂಗಣದ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು ಮತ್ತು ಅವರಲ್ಲಿ ಹಲವರು ಪ್ರವೇಶ ಪಡೆಯಲು ಗೇಟ್‌ಗಳನ್ನು ಹಾರಿದರು ಎಂದು ಪೊಲೀಸ್‌‍ ಮೂಲಗಳು ತಿಳಿಸಿವೆ.

ಮಾನ್ಯ ಟಿಕೆಟ್‌ಗಳನ್ನು ಹೊಂದಿರುವವರಿಗೆ ಮಾತ್ರ ಕ್ರೀಡಾಂಗಣಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗಿದ್ದರೂ, ಅನೇಕರು ಉಚಿತ ಪಾಸ್‌‍ಗಳು ಮತ್ತು ಟಿಕೆಟ್‌ಗಳನ್ನು ಹೊಂದಿರುವವರೊಂದಿಗೆ ಒಳನುಗ್ಗಲು ಪ್ರಯತ್ನಿಸಿದರು. ಪ್ರವೇಶ ಪಡೆಯುವ ಪ್ರಯತ್ನದಲ್ಲಿ, ಅವರಲ್ಲಿ ಕೆಲವರು ಪರಸ್ಪರ ತಳ್ಳಲು ಪ್ರಾರಂಭಿಸಿದರು ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪೊಲೀಸರ ಪ್ರಕಾರ, ಸುಮಾರು 50,000 ಜನರು 1 ಕಿಲೋಮೀಟರ್‌ ವ್ಯಾಪ್ತಿಯಲ್ಲಿದ್ದರು ಮತ್ತು ಸಂಖ್ಯೆ ಹೆಚ್ಚುತ್ತಲೇ ಇತ್ತು.ಜನರು ಮತ್ತು ಅಭಿಮಾನಿಗಳು ತಮ್ಮ ನಿರೀಕ್ಷೆಗಳನ್ನು ಮೀರಿ ಜಮಾಯಿಸಿದ್ದರು. ವಿಧಾನಸೌಧದ ಮುಂದೆ 2 ಲಕ್ಷಕ್ಕೂ ಹೆಚ್ಚು ಜನರು ಜಮಾಯಿಸಿದ್ದರು ಮತ್ತು ಅಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ, ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ದುರಂತ ಸಂಭವಿಸಿದೆ.ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ, ಇದಕ್ಕೆ ಕ್ರಿಕೆಟ್‌ ಸಂಘವಾಗಲಿ ಅಥವಾ ಸರ್ಕಾರವಾಗಲಿ ಎಂದು ಹೊಣೆ ಮಾಡುವುದು ಸರಿಯಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೊಡ್ಡ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಸೌಮ್ಯ ಬಲಪ್ರಯೋಗ ಮಾಡಿದರು ಮತ್ತು ಕೆಲವು ದೃಶ್ಯಗಳಲ್ಲಿ, ಅಭಿಮಾನಿಗಳನ್ನು ಚದುರಿಸಲು ಪೊಲೀಸ್‌‍ ಸಿಬ್ಬಂದಿ ಲಾಠಿ ಪ್ರಹಾರ ನಡೆಸುತ್ತಿರುವುದು ಕಂಡುಬಂದಿದೆ.ಇದಾದ ಸ್ವಲ್ಪ ಸಮಯದ ನಂತರ, ಬೆಂಗಳೂರು ಮೆಟ್ರೋ ಕೂಡ ಕಬ್ಬನ್‌ ಪಾರ್ಕ್‌ ಮತ್ತು ಡಾ. ಬಿ. ಆರ್‌. ಅಂಬೇಡ್ಕರ್‌ ನಿಲ್ದಾಣಗಳಲ್ಲಿ ಭಾರೀ ಜನಸಂದಣಿ ಇದ್ದ ಕಾರಣ ರೈಲುಗಳು ನಿಲ್ಲುವುದಿಲ್ಲ ಎಂದು ಘೋಷಿಲಾಯಿತು.

RELATED ARTICLES

Latest News