Sunday, April 28, 2024
Homeಬೆಂಗಳೂರುಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿ, ಪ್ರಿಯಕರ ಖಾಕಿ ಬಲೆಗೆ

ಪತಿಯನ್ನು ಕೊಂದು ನಾಟಕವಾಡಿದ್ದ ಪತ್ನಿ, ಪ್ರಿಯಕರ ಖಾಕಿ ಬಲೆಗೆ

ಬೆಂಗಳೂರು, ಜ.13- ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಲೆಮಾಡಿ ಹೃದಯಘಾತವೆಂದು ಬಿಂಬಿಸಲು ಯತ್ನಿಸಿದ್ದ ಖತರ್ನಾಕ್ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಎಚ್‍ಎಸ್‍ಆರ್ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಆಂಧ್ರಪ್ರದೇಶದ ಸತ್ಯಸಾಯಿ ತಾಲ್ಲೂಕಿನ ನಂದಿನಿ ಬಾಯಿ ಹಾಗೂ ತನ್ನ ಊರಿನವನೇ ಆದ ಪ್ರಿಯಕರ ಬಂಧಿತರು.

ಎಚ್‍ಎಸ್‍ಆರ್ ಲೇಔಟ್‍ನ ಮನೆಯಲ್ಲಿ ನಂದಿನಿ ಬಾಯಿ ಪತಿ ವೆಂಕಟ್‍ನಾಯಕ್ (30) ಜೊತೆ ವಾಸವಾಗಿದ್ದಳು. ವೆಂಕಟ್‍ನಾಯಕ್ ಅವರು ಸೇಲ್ಸ್ ಎಕ್ಸಿಕ್ಯೊಟಿವ್ ಕೆಲಸ ಮಾಡುತ್ತಿದ್ದರು. ಮದುವೆಯಾಗಿದ್ದರೂ ಸಹ ನಂದಿನಿ ಬಾಯಿ ತನ್ನ ಪ್ರಿಯಕರನನ್ನು ಮರೆತಿರಲಿಲ್ಲ, ಆತನೂ ಸಹ ಈಕೆಯನ್ನಿ ಭೇಟಿಯಾಗಲು ಆಗಾಗ್ಗೆ ಆಂದ್ರದಿಂದ ನಗರಕ್ಕೆ ಬರುತ್ತಿದ್ದನು. ಈ ನಡುವೆ ಜ.9ರಂದು ಪತಿ ವೆಂಕಟ್‍ನಾಯಕ್ ಕೆಲಸಕ್ಕೆ ಹೋಗಿದ್ದಾಗ ಪ್ರಿಯಕರನನ್ನು ನಂದಿನಿ ಮನೆಗೆ ಕರೆಸಿಕೊಂಡಿದ್ದಾಳೆ. ಆ ಸಂದರ್ಭದಲ್ಲಿ ದಿಡೀರ್ ಪತಿ ಮನೆಗೆ ಬಂದಿದ್ದಾರೆ.

ಪತ್ನಿ ಬೇರೆ ವ್ಯಕ್ತಿ ಜೊತೆ ಸಲುಗೆಯಿಂದ ಇರುವುದನ್ನು ನೋಡಿ ಕೋಪಗೊಂಡು ನಂದಿನಿ ಜೊತೆ ಜಗಳವಾಡಿದಾಗ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿದೆ. ಆ ವೇಳೆ ನಂದಿನಿ ಪ್ರಿಯಕರನೊಂದಿಗೆ ಸೇರಿಕೊಂಡು ವೆಂಕಟ್‍ನಾಯಕ್ ಅವರ ತಲೆ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಮೃತದೇಹವನ್ನು ಮನೆ ಹೊರಗಿನ ಶೌಚಾಲಯದ ಬಳಿಯಿಟ್ಟು ಹೃದಯಘಾತವೆಂದು ಬಿಂಬಿಸಲು ಯತ್ನಿಸಿ ನಂತರ ಕಲ್ಲಿನ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆಂದು ಪೊಲೀಸರಿಗೆ ನಂದಿನಿ ತಿಳಿಸಿದ್ದಾಳೆ.

ದೆಹಲಿ ವಿವಿಯ ಮಹಿಳಾ ಶೌಚಾಲಯಗಳ ಮುಂದೆ ಸಿಸಿ ಕ್ಯಾಮರಾ ಅಳವಡಿಕೆ

ಅಂದು ಪೊಲೀಸರು ಅಸಹಜ ಸಾವೆಂದು ದಾಖಲಿಸಿಕೊಂಡು, ನಂತರ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದಾಗ, ದೂರು ಕೊಟ್ಟ ನಂದಿನಿ ಮೇಲೆಯೇ ಅನುಮಾನ ಬಂದು ಆಕೆಯ ಚಲನವಲನ ಗಮನಿಸುತ್ತಿದ್ದರು. ಈ ನಡುವೆ ಮರಣೋತ್ತರ ವರದಿ ಬಂದಾಗ ವೆಂಕಟನಾಯಕ್ ಕೊಲೆಯಾಗಿರುವುದು ಗೊತ್ತಾಗಿದೆ. ಬಳಿಕ ನಂದಿನಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕಣ್ಣೀರಿಡುತ್ತಾ ಮತ್ತೆ ನಾಟಕವಾಡಿದ್ದಾಳೆ. ಪೊಲೀಸರು ತಮ್ಮ ಶೈಲಿಯಲ್ಲಿ ವಿಚಾರಿಸಿದಾಗ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದಾಗಿ ಬಾಯಿಬಿಟ್ಟಿದ್ದಾಳೆ. ಸದ್ಯ ಇಬ್ಬರನ್ನೂ ಬಂಧಿಸಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

RELATED ARTICLES

Latest News