Sunday, October 6, 2024
Homeರಾಜ್ಯನನಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ, ಐದು ವರ್ಷ ನಾನೇ ಸಿಎಂ : ಸಿದ್ದರಾಮಯ್ಯ

ನನಗೆ ಚಾಮುಂಡೇಶ್ವರಿಯ ಆಶೀರ್ವಾದ ಇದೆ, ಐದು ವರ್ಷ ನಾನೇ ಸಿಎಂ : ಸಿದ್ದರಾಮಯ್ಯ

I have Chamundeshwari's blessings, I am CM for five years: Siddaramaiah

ಮೈಸೂರು,ಅ.3– ರಾಜ್ಯದಲ್ಲಿ ದೇವರಾಜ ಅರಸು ಬಿಟ್ಟರೆ 5 ವರ್ಷ ಸಿಎಂ ಆಗಿದ್ದು ನಾನೇ, ಮುಂದಿನ 5 ವರ್ಷಗಳಲ್ಲೂ ಕೂಡ ನಾನೇ ಸಿಎಂ, ಈಗಲೂ ಎಷ್ಟೇ ತೊಡಕು ಬಂದರೂ ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನನಗೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.

ಜಿ.ಟಿ.ದೇವೇಗೌಡ, ನೀನೇ ಒಂದು ಸಲ ಸೋಲಿಸಿಬಿಟ್ಟೇ. ನಾನು ಮಂತ್ರಿಯಾಗಿ 40 ವರ್ಷಗ ಳಾಯಿತು. ನಾನು ಯಾವ ತಪ್ಪೂ ಮಾಡಿಲ್ಲ. ಮಾಡಿದ್ದರೆ ಸುದೀರ್ಘ ರಾಜಕೀಯದಲ್ಲಿ ಇರುತ್ತಿರಲಿಲ್ಲ. ನಾವು ಜಿ.ಟಿ.ದೇವೇಗೌಡರು ಒಂದೇ ತಾಲ್ಲೂಕಿನವರು. ಜಿ.ಟಿ .ದೇವೇಗೌಡ ಸತ್ಯಕ್ಕೆ ಜಯ ಸಿಗಬೇಕು ಎಂದಿರುವುದು ನನಗೆ ಮತ್ತಷ್ಟು ಬಲ ತಂದಿದೆ ಎಂದರು. ನಾನು ಡಿಕೆ ಇಬ್ಬರೂ ಒಟ್ಟಿಗೆ ಬೆಟ್ಟಕ್ಕೆ ಬಂದು ಚಾಮುಂಡಿ ತಾಯಿಯ ಪೂಜೆ ಮಾಡಿ 5 ಗ್ಯಾರಂಟಿಗೆ ಶಕ್ತಿ ಕೊಡಮ ಎಂದು ಕೇಳಿಕೊಂಡಿದ್ದೆವು.

ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಎಲ್ಲಾ ಗ್ಯಾರಂಟಿ ಜಾರಿ ಮಾಡಿದ್ದೇವೆ. ಇದು ಚಾಮುಂಡಿಯ ಆಶೀರ್ವಾದ ಎಂದು ಹೇಳಿದರು.ದೇವರ ಹಾಗೂ ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಏನಪ್ಪಾ ಜಿಟಿ, ನೀನೇ ನನ್ನ ಒಂದು ಬಾರಿ ಸೋಲಿಸಿದ್ದೆ ಎಂದು ನಗೆ ಚಾಟಿಕೆ ಹಾರಿಸಿದರು.

ಒಟ್ಟು 9 ಚುನಾವಣೆ ಗೆದ್ದಿದ್ದೇನೆ. 40 ವರ್ಷ ಮಂತ್ರಿಯೇ ಆಗಿದ್ದೇನೆ. ಚಾಮುಂಡಿ ಕೃಪೆಯಿಂದ ಇಲ್ಲಿವರೆಗೂ ತಪ್ಪು ಮಾಡಿಲ್ಲ. ತಪ್ಪು ಮಾಡಿದರೆ ಇಷ್ಟು ವರ್ಷ ದೀರ್ಘ ರಾಜಕಾರಣ ಮಾಡಲು ಆಗುತ್ತಿರಲಿಲ್ಲ. ನಾನು ಜಿ.ಟಿ.ದೇವೇಗೌಡರು ಒಂದೇ ತಾಲ್ಲೂಕಿನವರು, ಒಟ್ಟಿಗೆ ರಾಜಕಾರಣ ಮಾಡಿದ್ದೇವೆೆ, ಸತ್ಯಕ್ಕೆ ಜಯ ಸಿಕ್ಕೇ ಸಿಗುತ್ತದೆ. ಹಾಗಾಗಿ ಜಿ.ಟಿ.ದೇವೇಗೌಡರಿಗೆ ಧನ್ಯವಾದ ಹೇಳುತ್ತೇನೆ ಎಂದು ತಿಳಿಸಿದರು.

RELATED ARTICLES

Latest News