ಬೆಂಗಳೂರು,ಜೂ.24- ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಘನತೆ-ಗೌರವ, ಮಾನ-ಮರ್ಯಾದೆ ಇದ್ದರೆ ತಕ್ಷಣವೇ ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದುಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದ ಮೇಲೆ ಹಿಡಿತ ಸಾಧಿಸುವಲ್ಲಿ ವಿಫಲರಾಗುತ್ತಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶ ಮಾಡಲಿ ಎಂದು ಆಗ್ರಹಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಎಲ್ಲಾ ಕ್ಷೇತ್ರಗಳಲ್ಲೂ ಸಂಪೂರ್ಣವಾಗಿ ವಿಫಲವಾಗಿದೆ. ಕಮಿಷನ್ ಪಡೆಯದೇ ಯಾವ ಕೆಲಸವೂ ಆಗುತ್ತಿಲ್ಲ. ಜನತೆಗೆ ಈ ಸರ್ಕಾರ ಶಾಪಗ್ರಸ್ಥ ಸರ್ಕಾರ. ಕಾಂಗ್ರೆಸ್ ನಲ್ಲಿ ಶಾಸಕರೇ ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಸಿಎಂ ಆಪ್ತ ಬಿ.ಆರ್.ಪಾಟೀಲರೇ ವಸತಿ ಇಲಾಖೆ ಹಣದ ಬಗ್ಗೆ, ಲಂಚದ ಬಗ್ಗೆ ಮಾತಾಡಿದ್ದು, ತಮ ಹೇಳಿಕೆ ವಿಚಾರದಲ್ಲಿ ಹಿಂದೆ ಸರಿಯಲ್ಲ ಅಂದಿದ್ದಾರೆ ಮತ್ತಷ್ಟು ಶಾಸಕರೂ ಮಾನಾಡುವವರಿದ್ದಾರೆ ಎಂದಿದ್ದಾರೆ. ಮತ್ತೊಂದು ಕಡೆ ಮತ್ತೊಬ್ಬ ಹಿರಿಯ ಶಾಸಕ ರಾಜು ಕಾಗೆ ಕೂಡಾ ಅಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ದೂರಿದರು.
ರಾಜು ಕಾಗೆ ವರ್ಕ್ ಆರ್ಡರ್ ಸಿಗುತ್ತಿಲ್ಲ. ಬಿ.ಆರ್.ಪಾಟೀಲ್ ಅವರ ಆರೋಪವನ್ನು ಸಮರ್ಥಿಸಿಕೊಳ್ಳುತ್ತೇನೆ ಅಂದಿದ್ದಾರೆ.ಇನ್ನೊಂದು ಕಡೆ ಎನ್.ವೈ.ಗೋಪಾಲಕೃಷ್ಣ ಅವರು ಒಂದು ಚರಂಡಿ ಕೂಡ ಕ್ಷೇತ್ರದಲ್ಲಿ ಮಾಡೋಕಾಗುತ್ತಿಲ್ಲ. ಅಂದಿದ್ದಾರೆ. ಈ ಸರ್ಕಾರ ಇದೆಯೋ? ಸತ್ತು ಹೋಗಿದೆಯೋ? ಲೂಟಿ ಹೊಡೀತಿದ್ದಾರೆ, ಲಂಚ ಇಲ್ಲದೇ ಸರ್ಕಾರದಲ್ಲಿ ಯಾವುದೇ ಕೆಲಸ ಮಾಡಿಕೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಾದಾಮಿಯಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರು ಸಿದ್ದರಾಮಣ್ಣನವರ ಬಳಿ ಹಣ ಇಲ್ಲ, ಹಣ ಕೇಳಲು ಬರಬೇಡಿ ಅಂದಿದ್ದಾರೆ. ಗೃಹ ಸಚಿವರ ಮೂಲಕ ಸಿದ್ದರಾಮಯ್ಯ ಸಂದೇಶ ಕೊಟ್ಟಿದ್ದಾರೆ, ಬೊಕ್ಕಸದಲ್ಲಿ ಹಣ ಇಲ್ಲವೆಂದು ಹೇಳಿಸಿದ್ದಾರೆ. ಸಚಿವ ಕೃಷ್ಣಬೈರೇಗೌಡ ಕೂಡ ಮೊನ್ನೆ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ರೇಟ್ಕಾರ್ಡ್ ಹಾಕಿಕೊಳ್ಳಿ, ಯಾಕೆ ಜನತೆಗೆ ಸತಾಯಿಸುತ್ತಿದ್ದೀರಾ ಎಂದಿರುವುದನ್ನು ಇದೇ ವೇಳೆ ಪ್ರಶ್ನೆ ಮಾಡಿದರು.
ಹಿಂದೆಯೂ ವಾಲೀಕಿ ನಿಗಮದಲ್ಲಿ ಹಗರಣವಾಯಿತು. ನಾಗೇಂದ್ರ ರಾಜೀನಾಮೆ ಕೊಟ್ಟರು. ಪ್ರಾಮಾಣಿಕ ಅಧಿಕಾರಿಗಳಿಗೂ ಈ ಸರ್ಕಾರದಲ್ಲಿ ಉಳಿಗಾಲ ಇಲ್ಲ. ಬಿ ಆರ್ ಪಾಟೀಲ್, ರಾಜು ಕಾಗೆ, ಗೋಪಾಲಕೃಷ್ಣ ಎತ್ತಿರುವ ಪ್ರಶ್ನೆಗಳಿಗೆ ಸಿಎಂ ಉತ್ತರ ಏನು? ಸಿದ್ದರಾಮಯ್ಯ ಜನತೆಗೆ ಉತ್ತರ ಕೊಡ್ತಾರಾ? ಎಂದು ಮತ್ತೊಂದು ಪ್ರಶ್ನೆ ಹಾಕಿದರು.
ಕಮಿಷನ್ ಮಾಫಿಯಾ ಮೂಲಕ ಆಡಳಿತ ನಡೆಯುತ್ತಿದೆ. ಎಲ್ಲ ನೋಡಿಕೊಂಡೂ ಮುಖ್ಯಮಂತ್ರಿ ಸಿದ್ದರಾಮಯ್ಯ ಕಣುಚ್ಚಿ ಕೂತಿದ್ದಾರೆ. ದೇವರಾಜ ಅರಸ್ ದಾಖಲೆ ಮುರೀಬೇಕು ಎಂದು ಸಿಎಂ ಕುರ್ಚಿಗೆ ಅಂಟಿಕೊಂಡಿದ್ದಾರೆ. ಸರ್ಕಾರವನ್ನು ಸಿದ್ದರಾಮಯ್ಯ ನಡೆಸುತ್ತಿಲ್ಲ, ಅವರು ಹಿಡಿತ ಕಳೆದುಕೊಂಡಿದ್ದಾರೆ ಎಂದು ದೂರಿದರು. ಸರ್ಕಾರವನ್ನು ಕಮೀಷನ್ ಏಜೆಂಟರ್ ನಡೆಸುತ್ತಿದ್ದಾರೆ. ಸ್ವತಃ ಈ ಕಮಿಷನ್ ಏಜೆಂಟರನ್ನು ಸಿದ್ದರಾಮಯ್ಯ ಅವರೇ ನೇಮಿಸಿದ್ದಾರೆ. ಎಲ್ಲ ಇಲಾಖೆ ಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಬೆಂಗಳೂರಿನಲ್ಲಿ ಮನೆಗಳು ಪೂರ್ಣವಾಗಿದ್ದರೂ ಎನ್ಒಸಿ ಸಿಗುತ್ತಿಲ್ಲ. ಪೀಣ್ಯದಲ್ಲಿ ಮೂಲಸೌಕರ್ಯ ಇಲ್ಲ ಎಂದು ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ಹೋಗುತ್ತಿವೆ. ಮುಖ್ಯಮಂತ್ರಿಗಳು ವಸೂಲಿಗಾಗಿ ಸಚಿವರಿಗೆ ಟಾಸ್ಕ್ ಕೊಟ್ಟಿದ್ದಾರೆ. ನಾಗೇಂದ್ರ ಸಹ ಹಾಗೆಯೇ ಟ್ರ್ಯಾಪ್ ಆಗಿದ್ದು, ಮುಂದಿನ ಟಾರ್ಗೆಟ್ ಜಮೀರ್ ಅಹಮದ್ ಎಂದು ಹೇಳಿದರು.
ಅಬಕಾರಿ ಇಲಾಖೆಯಲ್ಲಿ ವರ್ಗಾವಣೆಗೆ ನೂರಾರು ಕೋಟಿ ವಸೂಲಿಯಾಗಿದೆ, ಆದರೆ ಅದಕ್ಕಿನ್ನೂ ಅನುಮತಿ ಸಿಕ್ಕಿಲ್ಲ. ಯಾರು ಈ ವರ್ಗಾವಣೆಗೆ ಅನುಮತಿ ಕೊಡುತ್ತಿಲ್ಲ ಎಂದು ಅಬಕಾರಿ ಸಚಿವರಿಗೆ ಗೊತ್ತಿದೆ, ಅವರೇ ಹೇಳಲಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಬಿದ್ದಿದೆ. ರಾಜ್ಯ ಸರ್ಕಾರದ ಪರಿಸ್ಥಿತಿ ನೋಡಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹತಾಶರಾಗಿದ್ದಾರೆ. ಎಲ್ಲಇಲಾಖೆಗಳಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರಕ್ಕಾಗಿ ಸಚಿವರು ಕೌಂಟರ್ಗಳನ್ನು ತೆರೆದು ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.
- ಮರಕ್ಕೆ ಅಪ್ಪಳಿಸಿ ರಸ್ತೆ ವಿಭಜಕ ಹತ್ತಿ ನಿಂತ ಲಾರಿ, ತಪ್ಪಿದ ಅನಾಹುತ
- ಕಾಲ್ನಡಿಗೆಯಲ್ಲಿ ಗಸ್ತು ಕರ್ತವ್ಯ ನಿರ್ವಸುವಂತೆ ಪೊಲೀಸರಿಗೆ ಸೀಮಂತ್ಕುಮಾರ್ಸಿಂಗ್ ಸೂಚನೆ
- ಬೆಂಗಳೂರಲ್ಲಿ ಪುಂಡರ ಹಾವಳಿ ಹೆಚ್ಚಳ : ದೌರ್ಜನ್ಯ ಸಹಿಸುವುದಿಲ್ಲ ಎಂದ ಗೃಹ ಸಚಿವ ಪರಮೇಶ್ವರ್
- ಜು.7ರಂದು ಸಾಮೂಹಿಕ ಪ್ರತಿಭಟನೆಗೆ ಮಹಾನಗರ ಪಾಲಿಕೆಗಳ ನೌಕರರ ನಿರ್ಧಾರ
- ಸಿದ್ದರಾಮಯ್ಯನವರಿಗೆ ಕಿಂಚಿತ್ತಾದರೂ ಮಾನ-ಮರ್ಯಾದೆ ಇದ್ರೆ ತಕ್ಷಣವೇ ರಾಜೀನಾಮೆ ನೀಡಲಿ : ವಿಜಯೇಂದ್ರ ಸವಾಲು