Monday, May 5, 2025
Homeಅಂತಾರಾಷ್ಟ್ರೀಯ | Internationalವಿಶ್ವಸಂಸ್ಥೆಯಲ್ಲಿ ಭಾರತ-ಪಾಕ್ ಉದ್ವಿಗ್ನತೆ ಕುರಿತು ಚರ್ಚೆ

ವಿಶ್ವಸಂಸ್ಥೆಯಲ್ಲಿ ಭಾರತ-ಪಾಕ್ ಉದ್ವಿಗ್ನತೆ ಕುರಿತು ಚರ್ಚೆ

India-Pakistan tensions to be discussed at UN

ನವದೆಹಲಿ,ಮೇ 5- ಪಹಲ್ಲಾಮ್ ಭಯೋತ್ಪಾದಕ ದಾಳಿಯ ನಂತರ ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಮಧ್ಯೆ ಇಸ್ಲಾಮಾಬಾದ್ ತುರ್ತು ಸಭೆಯನ್ನು ಕೋರಿದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು ಮುಚ್ಚಿದ ಸಮಾಲೋಚನೆ ನಡೆಸಲಿದೆ.

ಪಾಕಿಸ್ತಾನವು ಪ್ರಸ್ತುತ 15 ರಾಷ್ಟ್ರಗಳ ಪ್ರಬಲ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿದೆ. ಇದು ಮೇ ತಿಂಗಳಲ್ಲಿ ಗ್ರೀಸ್ ಅಧ್ಯಕ್ಷತೆ ವಹಿಸುತ್ತಿದೆ.ಉಭಯ ದೇಶಗಳ ನಡುವಿನ ಉದ್ವಿಗ್ನತೆಯ ಬಗ್ಗೆ ಇಸ್ಲಾಮಾಬಾದ್ ಮುಚ್ಚಿದ ಸಮಾಲೋಚನೆಗಳನ್ನು ಕೋರಿದೆ ಮತ್ತು ಗ್ರೀಕ್ ಪ್ರೆಸಿಡೆನ್ಸಿ ಸಭೆಯನ್ನು ಇಂದು ಮಧ್ಯಾಹ್ನ ನಿಗದಿಪಡಿಸಿದೆ.

ಚೀನಾ, ಫ್ರಾನ್ಸ್, ರಷ್ಯಾ, ಯುಕೆ ಮತ್ತು ಯುಎಸ್ ಹೊರತುಪಡಿಸಿ ಅಲ್ಲೀರಿಯಾ. ಡೆನ್ಮಾರ್ಕ್, ಗ್ರೀಸ್, ಗಯಾನಾ. ಪಾಕಿಸ್ತಾನ, ಪನಾಮ, ದಕ್ಷಿಣ ಕೊರಿಯಾ, ಸಿಯೆರಾ ಲಿಯೋನ್, ಫ್ಲೋವೇನಿಯಾ ಮತ್ತು ಸೊಮಾಲಿಯಾ ಈ ಮಂಡಳಿಯ 10 ಖಾಯಂ ಸದಸ್ಯ ರಾಷ್ಟ್ರಗಳಾಗಿವೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಸಭೆಗೆ ವಿನಂತಿ ಬಂದರೆ ಆದ್ಯತೆ ನೀಡಲಾಗುವುದು ಎಂದು ಮೇ ತಿಂಗಳ ಭದ್ರತಾ ಮಂಡಳಿಯ ಅಧ್ಯಕ್ಷ ರಾಯಭಾರಿ ಇವಾಂಜಿಲೊಸ್ ಸೆಕೆರಿಸ್‌ ಹೇಳಿದ್ದರು.

ನಾನು ಮೊದಲೇ ಹೇಳಿದಂತೆ, ತತ್ವದ ಸ್ಥಾನವಾಗಿ, ಯಾವುದೇ ಭಯೋತ್ಪಾದಕ ಕೃತ್ಯವನ್ನು ನಾವು ಬಲವಾಗಿ ಖಂಡಿಸುತ್ತೇವೆ ಮತ್ತು ಪಹಲ್ಲಾಮ್‌ನಲ್ಲಿ ನಡೆದ ಘೋರ ಭಯೋತ್ಪಾದಕ ದಾಳಿ ಬಗ್ಗೆ ನಾವು ಮಾಡಿದ್ದು ಇದನ್ನೇ ಎಂದು ಸೆಕೆರಿಸ್ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಲಾಮ್ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ನಂತರದ ವಾರಗಳಲ್ಲಿ, ವಿದೇಶಾಂಗ ಸಚಿವ ಎಸ್ ಜೈಶಂಕರ್ ಚೀನಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಎಲ್ಲಾ ಕೌನ್ಸಿ ಲ್ ಸದಸ್ಯರೊಂದಿಗೆ ಮಾತನಾಡಿದರು. ಜೈಶಂಕರ್ ತಮ್ಮ ಕರೆಗಳಲ್ಲಿ, ಅದರ ದುಷ್ಕರ್ಮಿಗಳು, ಬೆಂಬಲಿಗರು ಮತ್ತು ಯೋಜಕರನ್ನು ನ್ಯಾಯದ ಮುಂದೆ ತರಬೇಕು ಎಂದು ಒತ್ತಿಹೇಳಿದರು.

RELATED ARTICLES

Latest News