ನವದೆಹಲಿ, ಜೂ. 8- ದೇಶದಲ್ಲಿ ಕೋವಿಡ್ ಸೋಂಕಿನ ಪ್ರಕರಣ ದಿನೇ ದಿನೇ ಏರಿಕೆಯಾಗುತ್ತಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 5,750ಕ್ಕೆ ಹೆಚ್ಚಾಗಿದ್ದು, 24 ಗಂಟೆಗಳಲ್ಲಿ ನಾಲ್ಕು ಸಾವುಗಳ ಮೂಲಕ ಆತಂಕ ಸೃಷ್ಟಿಯಾಗಿದೆ.
ದೈನಂದಿನ ಸೋಂಕಿನಲ್ಲಿ 391 ಮಂದಿ ಉಪತಳಿಯಿಂದ ಬಾಧಿತರಾಗಿದ್ದಾರೆ. ಆರೋಗ್ಯ ಇಲಾಖೆ ಇಂದು ಬೆಳಗ್ಗೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ ಕಳೆದ ಜನವರಿಯಿಂದ ಈವರೆಗೂ ಕೋವಿಡ್ನಿಂದಾಗಿ ಒಟ್ಟು 59 ಜೀವಹಾನಿಯಾಗಿದೆ. ದಿನದ 24 ಗಂಟೆಯಲ್ಲಿ ನಾಲ್ಕು ಮಂದಿಯ ಸಾವು ಎಚ್ಚರಿಕೆಯ ಘಂಟೆಯಾಗಿದೆ.
ಕೇರಳವು ಅತಿ ಹೆಚ್ಚು ಸೋಂಕಿತ ರಾಜ್ಯವಾಗಿದ್ದು, 127 ಹೊಸ ಪ್ರಕರಣಗಳೊಂದಿಗೆ ಅಗ್ರಸ್ಥಾನದಲ್ಲಿದೆ, ಗುಜರಾತ್ 102, ದೆಹಲಿ 73 ಮತ್ತು ಪಶ್ಚಿಮ ಬಂಗಾಳ 26 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿವೆ. ಈ ಹೆಚ್ಚಳವು ದೇಶಾದ್ಯಂತ ಆಸ್ಪತ್ರೆಗಳ ಸನ್ನದ್ಧತೆಯನ್ನು ನಿರ್ಣಯಿಸಲು ಕೇಂದ್ರ ಸರ್ಕಾರವು ಅಣಕು ಪ್ರದರ್ಶನಗಳನ್ನು ಪ್ರಾರಂಭಿಸಿವೆ.
ಕಳೆದ 24 ಗಂಟೆಗಳಲ್ಲಿ ಅರುಣಾಚಲ ಪ್ರದೇಶ, ಚಂಡೀಗಢ, ಮಿಜೋರಾಂ ಮತ್ತು ತ್ರಿಪುರ ಎಂಬ ನಾಲ್ಕು ರಾಜ್ಯಗಳಲ್ಲಿ ಮಾತ್ರ ಹೊಸ ಸೋಂಕು ಪತ್ತೆಯಾಗಿಲ್ಲ. ಮಧ್ಯಪ್ರದೇಶದಲ್ಲಿ, ಒಂಬತ್ತು ತಿಂಗಳ ಗರ್ಭಿಣಿಯಾಗಿದ್ದ 45 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ನಂತರ ಅವರಿಗೆ ಕೋವಿಡ್ -19 ಸೋಂಕು ತಗುಲಿರುವುದು ದೃಢಪಟ್ಟಿತು.
ಮಹಾರಾಷ್ಟ್ರದಲ್ಲಿ, ಹೈಪರ್ ಥೈರಾಯ್ಡಿಸಮ್ ಹೊಂದಿದ್ದ 63 ವರ್ಷದ ವ್ಯಕ್ತಿಯೊಬ್ಬರು ಈ ವೈರಸ್ಗೆ ಬಲಿಯಾಗಿದ್ದಾರೆ.ಕೇರಳದಲ್ಲಿ, 4 ನೇ ಹಂತದ ಶ್ವಾಸಕೋಶದ ಕ್ಯಾನ್ಸರ್ನಿಂದ ಬಳಲುತ್ತಿದ್ದ 59 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ -19 ಸೋಕಿನಿಂದ ಸಾವನ್ನಪ್ಪಿದರು.
ತಮಿಳುನಾಡಿನಲ್ಲಿ, ಒಂದು ತಿಂಗಳ ಕಾಲ ಹಾಸಿಗೆ ಹಿಡಿದಿದ್ದ 79 ವರ್ಷದ ಮಧುಮೇಹ ವ್ಯಕ್ತಿಯೊಬ್ಬರು ಕೋವಿಡ್-ಪ್ರೇರಿತ ನ್ಯುಮೋನಿಯಾ ಮತ್ತು ತೀವ್ರ ಉಸಿರಾಟದ ತೊಂದರೆ ಸಿಂಡ್ರೋಮ್ನಿಂದ ಸಾವನ್ನಪ್ಪಿದ್ದಾರೆ.ಈ ವರ್ಷದ ಜನವರಿಯಿಂದ ಮಹಾರಾಷ್ಟ್ರವು ಅತಿ ಹೆಚ್ಚು ಕೋವಿಡ್ ಸಂಬಂಧಿತ ಸಾವುಗಳನ್ನು (18) ವರದಿ ಮಾಡಿದೆ, ನಂತರ ಕೇರಳ (12), ದೆಹಲಿ ಮತ್ತು ಕರ್ನಾಟಕ (ತಲಾ 7), ತಮಿಳುನಾಡು (5), ಮತ್ತು ಉತ್ತರ ಪ್ರದೇಶ, ಪಂಜಾಬ್, ಮಧ್ಯಪ್ರದೇಶ ಮತ್ತು ಗುಜರಾತ್ (ತಲಾ 2) ಸಾವಾಗಿವೆ. ಈ ಅವಧಿಯಲ್ಲಿ ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲೂ ತಲಾ ಒಂದು ಸಾವು ಸಂಭವಿಸಿದೆ.