ಅಹಮದಾಬಾದ್, ಜೂ.3- ಟಾಟಾ ಐಪಿಎಲ್ 2025 ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಆರಂಭಗೊಂಡಿದ್ದು, ಎಲ್ಲರ ಚಿತ್ತ ಈಗ ಚೇಸ್ ಮಾಸ್ಟರ್ ಕೊಹ್ಲಿಯತ್ತ ನೆಟ್ಟಿದೆ. ಸತತ 18 ವರ್ಷಗಳ ಕಾಲ ಒಂದೇ ತಂಡದ ಪರವಾಗಿ ಆಡಿ ಅತೀ ಹೆಚ್ಚು ರನ್ ಗಳಿಕೆಯಲ್ಲಿ ನಂ.1 ಸ್ಥಾನದಲ್ಲಿರುವ ಕಿಂಗ್ ಕೊಹ್ಲಿಗೆ ಇದು ಅದೃಷ್ಟದ ವರ್ಷ. ಸಾಧನೆಗಳ ಶಿಖರವೇರಿ ಈಗ ಕ್ರಿಕೆಟ್ ಜಗತ್ತಿನ ಹಾಟ್ ಫೇವರೆಟ್ ಎಂಬಂತಿರುವ ಕೊಹ್ಲಿ ಫೈನಲ್ ಪಂದ್ಯದಲ್ಲಿ ಮಿಂಚುವುದು ಶತಸಿದ್ಧ ಎಂದು ಕ್ರಿಕೆಟ್ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.
ಫೈನಲ್ ಪಂದ್ಯವಾದರೂ ಇದರಲ್ಲಿ ಮುಖ್ಯವಾಗಿ ಎಲ್ಲರೂ ಇಷ್ಟಪಡುವುದು ಕೋಹ್ಲಿಯನ್ನು ಮಾತ್ರ. ಕೇವಲ 19 ವರ್ಷದ ಸಾಮಾನ್ಯ ಹುಡುಗನಾಗಿದ್ದ ಕೊಹ್ಲಿ ಆರ್ಸಿಬಿ ಜೆರ್ಸಿಯಲ್ಲಿ ಆಕಸಿಕವಾಗಿ ಎಂಟ್ರಿ ಕೊಟ್ಟು ಈಗ ಯಾರೂ ಮಾಡದ ಸಾಧನೆ ಮಾಡಿ ಚರಿತ್ರೆ ಸೃಷ್ಟಿಸಿದ್ದಾರೆ.9 ಅದೃಷ್ಟದ ಸಂಖ್ಯೆ ಎಂಬಂತೆ ಅವರ ಜೆರ್ಸಿ ಕೂಡ 18 ಇದ್ದು, ಐಪಿಎಲ್ ಆವೃತ್ತಿ ಕೂಡ 18 ಇದೇ ಆರ್ಸಿಬಿ ಗೆಲ್ಲುವ ನಂಟು.
ಮದಗಜಗಡ ಹೋರಾಟ ನಿಶ್ಚಿತ ಎಂದು ಹೇಳುತ್ತಿದ್ದರೂ ಕ್ರಿಕೆಟ್ನಲ್ಲಿ ಆಗಾಗ ನಡೆಯುವ ಅಚ್ಚರಿಯ ಬೆಳವಣಿಗೆಗಳು ಯಾರು ಗೆಲ್ಲುತ್ತಾರೆ ಎಂಬುವುದನ್ನು ಕೊನೆಯ ಚೆಂಡಿನವರೆಗೂ ಕುತೂಹಲವಿರುತ್ತದೆ.ಹಾಗೆಯೇ ಪಂಜಾಬ್ ತಂಡ ಕೂಡ ಆರ್ಸಿಬಿ ವಿರುದ್ಧ 2 ಬಾರಿ ಸೋತಿದೆ. ಆದರೆ ಫೈನಲ್ನಲ್ಲಿ ಮುಟ್ಟಿದ್ದೆಲ್ಲಾ ಚಿನ್ನ ಎಂಬ ಹಣೆ ಪಟ್ಟಿ ಪಡೆದಿರುವ ಶ್ರೆಯಸ್ ಅಯ್ಯರ್ ಕೂಡ ತಮ ಲಯ ಕಂಡುಕೊಂಡಿದ್ದು, ತಂಡ ಬಲಿಷ್ಠವಾಗಿದೆ.
ಎರಡೂ ತಂಡಗಳಲ್ಲಿ 11 ಆಟಗಾರರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲಾಗಿದೆ. ಆರ್ಸಿಬಿ ತಂಡಕ್ಕೆ ಸ್ಫೋಟಕ ಆಟಗಾರ ಟೀಮ್ ಡೇವಿಡ್ ವಾಪಾಸ್ಸಾಗುತ್ತಿದ್ದು, ಲೀವಿಂಗ್ ಸ್ಟೋನ್ ಸ್ಥಾನ ಪಡೆಯುತ್ತಾರಾ ಇಲ್ಲವಾ ಎಂಬುವುದು ಟಾಸ್ವರೆಗೂ ಕಾಯಬೇಕಾಗಿದೆ.ಇದರ ನಡುವೆ ಆರಂಭಿಕ ಆಟಗಾರ ಸಾಲ್್ಟ ಕೂಡ ಆರ್ಸಿಬಿಗೆ ಸ್ಫೋಟಕ ಬ್ಯಾಟಿಂಗ್ ಮೂಲಕ ಶಕ್ತಿ ತುಂಬುತ್ತಿದ್ದು, ಇದಕ್ಕೆ ಮಧ್ಯಮ ಕ್ರಮಾಂಕದಲ್ಲಿ ನಾಯಕ ರಜತ್ ಫತ್ತೇದಾರ್ ಮತ್ತು ಜಿತೇಶ್ ಶರ್ಮಾ ಮತ್ತು ಶಫರ್ಡ್ ಬಲ ನೀಡಲಿದೆ.
ಮುಂದಿನ ಕ್ರಿಕೆಟ್ ಜೀವನದ ಬಗ್ಗೆ ಕೋಹ್ಲಿ ತನ್ನದೇ ಆದ ಲೆಕ್ಕಾಚಾರ ಹಾಕಿಕೊಂಡಿದ್ದು, ಇಂದು ನಡೆಯುವ ಫೈನಲ್ ಪಂದ್ಯ ಹಲವು ನಿರ್ಧಾರಗಳಿಗೆ ಸಾಕ್ಷಿ ಆಗಲಿದೆ. ಬೆಟ್ಟಿಂಗ್ ಜೋರು- ಈ ನಡುವೆ ಇಂದೆಂದೂ ಕಾಣದಂತಹ ಉತ್ಸಾಹ ಮತ್ತು ಲೆಕ್ಕಾಚಾರಗಳು ನಡೆಯುತ್ತಿದೆ. ಇದಕ್ಕಾಗಿ ಜಗತ್ತಿನಾದ್ಯಂತ ಜೋರಾದ ಬೆಟ್ಟಿಂಗ್ ಕೂಡ ನಡೆಯುತ್ತಿದೆ. ಪ್ರಾಂಚೈಸಿಗಳಿಗೆ ಇದು ಪ್ರತಿಷ್ಠೆಯ ಪಂದ್ಯವಾಗಿದ್ದು, ಕ್ರಿಕೆಟ್ ಪ್ರಿಯರನ್ನು ತನ್ನತ್ತ ಸೆಳೆಯಲು ಹಲವಾರು ಈವೆಂಟ್ಗಳನ್ನು ಸೃಷ್ಟಿಸಿದ್ದಾರೆ.
ಬೆಂಗಳೂರು ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ದಾಖಲೆ ಎಂಬಂತೆ ಮೈದಾನಗಳಲ್ಲಿ ಹೋಟೆಲ್ಗಳಲ್ಲಿ ಸೇರಿದಂತೆ ಹಲವು ಜನನಿಬಿಡ ಪ್ರದೇಶಗಳಲ್ಲಿ ದೊಡ್ಡ ಪರದೆಗಳನ್ನು ಹಾಕಿ ಇಡೀ ಪಂದ್ಯದ ಕ್ಷಣ ಕ್ಷಣದ ಘಟನೆಗಳನ್ನು ಸವಿಯುವ ಅವಕಾಶ ಮಾಡಿಕೊಡಲಾಗಿದೆ.ವಿಶ್ವದ ಅತ್ಯಂತ ಶ್ರೀಮಂತ ಮನರಂಜನಾ ಕ್ರಿಕೆಟ್ ಪಂದ್ಯಾವಳಿ ಐಪಿಎಲ್ಗೆ ಜಾಗತಿಕ ಬುಕ್ಕಿಗಳು ಈಗ ಹಲವು ವಿಧಾನಗಳಲ್ಲಿ ಬೆಟ್ಟಿಂಗ್ ನಡೆಸುತ್ತಿದ್ದು ಇದು ಜಾಗತಿಕ ಮಟ್ಟಕ್ಕೆ ಸರಿಸಾಟಿಯಾಗುತ್ತಿದೆ.
ವಿಶೇಷ ಪೂಜೆ- ರಾಜ್ಯಾದ್ಯಂತ ಜನರ ಜೊತೆಗೆ ಜನಪ್ರತಿನಿಧಿಗಳು ಹಾಗೂ ಸಂಘಸಂಸ್ಥೆಗಳು ಆರ್ಸಿಬಿ ಗೆಲ್ಲಲ್ಲಿ ಎಂದು ವಿವಿಧ ದೇವಾಲಯಗಳಲ್ಲಿ ಪೂಜೆ ಕೈಗೊಂಡಿದ್ದಾರೆ. ಇನ್ನು ಕೆಲವು ಗಲ್ಲಿಗಲ್ಲಿಗಳಲ್ಲೂ ಸಿಹಿತಿಂಡಿಗಳು ಈಗಾಗಲೇ ತಯಾರಾಗಿದೆ. ಪಂದ್ಯ ಮುಗಿದ ನಂತರ ಇಡೀ ರಾಜ್ಯ ಸಂಭ್ರಮದಿಂದ ಕುಣಿದು ಕುಪ್ಪಳಿಸಲಿದೆ. ಇದಕ್ಕಾಗಿ ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ, ಮೈಸೂರು, ಸೇರಿ ಹಲವೆಡೆ ಬೈಕ್ ರ್ಯಾಲಿ ಆಯೋಜಿಸಲಾಗಿದೆ. ಆರ್ಸಿಬಿ ಜೆರ್ಸಿ ಕೂಡ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಆರ್ಸಿಬಿ ಗೆಲುವು ಸಾಧಿಸಿದರೆ ರಾಜ್ಯದಲ್ಲಿ ಬೆಳಕಿನ ಹಬ್ಬ ದೀಪಾವಳಿ ಆಚರಣೆಯಾಗುತ್ತದೆ.
ಆರ್ಸಿಬಿ ಕಪ್ ಗೆಲ್ಲಲು ದೇಗುಲಗಳಲ್ಲಿ ಪೂಜೆ
ಕೆ.ಆರ್. ಪುರ, ಜೂ.3- ಹದಿನೆಂಟು ವರ್ಷಗಳ ವನವಾಸ ಇಂದು ಅಂತ್ಯವಾಗಲಿದ್ದು ಈ ಸಲ ಕಪ್ ನಮದೇ ಆಗಲಿದೆ ಎಂದು ಕೆಆರ್ ಪುರ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶ್ರೀರಾಮುಲು ತಿಳಿಸಿದರು.
ಆರ್ ಸಿಬಿ ಇಂದಿನ ಐಪಿಎಲ್ ಪಂದ್ಯ ಗೆದ್ದು ಕಪ್ ಪಡೆಯಲಿ ಎಂದು ಹಾರೈಸಿ ಬಸವನಪುರ ಹಾಗೂ ಸ್ವಾತಂತ್ರ್ಯ ನಗರ ಗ್ರಾಮಸ್ಥರು ಆಂಜನೇಯ ದೇವಾಲಯದಲ್ಲಿ ಹಮಿಕೊಂಡಿದ್ದ ವಿಶೇಷ ಪೂಜೆಯಲ್ಲಿ ಅವರು ಮಾತನಾಡಿದರು.
ಯಾವುದೇ ಅಡ್ಡಿ ಆತಂಕ ಇಲ್ಲದೆ ಐಪಿಎಲ್ ಕಪ್ ಪಡೆದು ಇತಿಹಾಸ ಸೃಷ್ಟಿಸಲಿ ಎಂದು ಹಾರೈಸಿದರು. ನಟ ಓಂ ಮಹೇಶ್ ಮಾತನಾಡಿ, ಆರ್ಸಿಬಿ ಬೆಂಗಳೂರು ಕ್ರೀಡಾಪಟುಗಳು ಎಲ್ಲರೂ ಉತ್ತಮವಾಗಿ ಆಡಿ ಕಪ್ ಗೆದ್ದು ಬರಲಿ ಎಂದು ಹನುಮನ ಮೊರೆ ಹೋಗಿದ್ದು ಕಪ್ ಗೆದ್ದ ಬಳಿಕ್ ನಾಳೆಯೂ ಸಿಹಿ ಹಂಚಿ ಸಂಭ್ರಮಿಸುತ್ತೇವೆ ಎಂದು ಹೇಳಿದರು. ಆರೂವರೆ ಕೋಟಿ ಜನರ ಕನಸು ನನಸಾಗೋದಿನದ ಪ್ರತೀ ಕ್ಷಣವೂ ಕಾತುರದಿಂದ ನೋಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಬಸವನಪುರ ಮುನಿರಾಜು, ಗೋವಿಂದು, ಲಕ್ಷೀ, ಕೃಷ್ಣಮೂರ್ತಿ, ಕನ್ನಡ ಚಂದ್ರು, ಸೋಮು, ಯಲ್ಲಪ್ಪ, ಸುರೇಶ್, ಉಷಾ, ಬಸವನಪುರ ಹಾಗೂ ಸ್ವಾತಂತ್ರ್ಯನಗರ ಗ್ರಾಮಸ್ಥರು ಉಪಸ್ಥಿತರಿದ್ದರು.
ಐಪಿಎಲ್ ತಂಡಕ್ಕೆ ಗಣ್ಯರ ಶುಭಾಶಯ
ಐಪಿಎಲ್ ಜ್ವರದ ಕಾವು ತೀವ್ರಗೊಂಡಿದ್ದು, 18 ವರ್ಷದ ಬಳಿಕ ಆರ್ಸಿಬಿ ತಂಡ ಕಪ್ ಗೆಲ್ಲುವ ನಿರೀಕ್ಷೆಯಲ್ಲಿ ಗಣ್ಯಾತಿಗಣ್ಯರು ಶುಭ ಹಾರೈಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿ ನಲ್ಲಿ ಐಪಿಎಲ್ ಪಂದ್ಯಾವಳಿ ನಡೆದಾಗಲೆಲ್ಲಾ ಖುದ್ದು ಕ್ರೀಡಾಂಗಣಕ್ಕೆ ಭೇಟಿ ನೀಡಿ ಪಂದ್ಯ ವೀಕ್ಷಿಸುತ್ತಾರೆ. ಸಂಜೆ ಅಹಮದಾಬಾದ್ನ ನರೇಂದ್ರಮೋದಿ ಕ್ರೀಡಾಂಗಣದಲ್ಲಿ ಆರ್ಸಿಬಿ ಮತ್ತು ಪಂಜಾಬ್ ನಡುವೆ ಫೈನಲ್ ಪಂದ್ಯಾವಳಿ ನಡೆಯುತ್ತಿದ್ದು, ಆರ್ಸಿಬಿ ತಂಡಕ್ಕೆ ತಾಳೆಯ ಫಲ ಸಿಹಿಯಾಗಿರುವಂತೆ ಫಲಿತಾಂಶ ದೊರೆಯಲಿದೆ ಎಂದು ಹೇಳಿದ್ದಾರೆ.
ಪಂಜಾಬ್ ವಿರುದ್ಧ ಅಂತಿಮ ಪಂದ್ಯವಾಡುತ್ತಿರುವ ಆರ್ಸಿಬಿ ತಂಡಕ್ಕೆ ಶುಭ ಹಾರೈಸುವುದಾಗಿ ತಿಳಿಸಿರುವ ಮುಖ್ಯಮಂತ್ರಿಗಳು, ಸೋಲು-ಗೆಲುವು, ಏಳು-ಬೀಳುಗಳ ಜೊತೆ ಆರ್ಸಿಬಿ ತಂಡದ ಜೊತೆ ಸದಾ ನಿಂತಿರುವ ಕನ್ನಡಿಗರು ಮೊದಲ ಆವೃತ್ತಿಯಿಂದ ಇಂದಿನವರೆಗೂ ಅದೇ ರೀತಿಯ ಪ್ರೀತಿ, ಸ್ಫೂರ್ತಿ ನೀಡುತ್ತಿದ್ದಾರೆ. ಈ ಬಾರಿ ಕಪ್ ಗೆಲ್ಲಲಿ ಎಂಬುದು ನನ್ನ ಅಂತರಾಳದ ಬಯಕೆ. ತಾಳೆಯ ಫಲ ಸಿಹಿಯಾಗಿರುತ್ತದಂತೆ. ಆ ಸಿಹಿ ಇಂದು ಕನ್ನಡಿಗರ ಮತ್ತು ಜಗತ್ತಿನಾದ್ಯಂತ ಇರುವ ಆರ್ಸಿಬಿ ಅಭಿಮಾನಿಗಳ ಪಾಲಿಗಿರಲಿ ಎಂದು ಹಾರೈಸುವುದಾಗಿ ತಿಳಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಆರ್ಸಿಬಿಯ ಜೆರ್ಸಿ ಧರಿಸಿ ಶುಭ ಹಾರೈಸಿದ್ದಾರೆ.ಆರ್ಸಿಬಿಯ ಆಟಗಾರರು ಅಂತಿಮ ಪಂದ್ಯ ಗೆಲ್ಲಬೇಕೆಂದು 18 ವರ್ಷದಿಂದ ಕಾಯುತ್ತಿದ್ದೇವೆ. ಕರ್ನಾಟಕವಷ್ಟೇ ಅಲ್ಲ, ಇಡೀ ದೇಶದ ಅಭಿಮಾನ ನಿಮ ಬೆನ್ನಿಗಿದೆ. ಈ ಬಾರಿ ಟ್ರೋಫಿ ಗೆದ್ದು ಬನ್ನಿ ಎಂದು ಹಾರೈಸಿದ್ದಾರೆ.ಬೆಂಗಳೂರಿನಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ, ತಾವು ಆರ್ಸಿಬಿ ಮತ್ತು ಪಂಜಾಬ್ ಎರಡೂ ತಂಡಗಳಲ್ಲೂ ಇದ್ದಿದ್ದಾಗಿ ತಿಳಿಸಿದ್ದಾರೆ.ಆರ್ಸಿಬಿ ಗೆಲ್ಲಬೇಕು ಎಂಬುದು ನನ್ನ ಒಲವು. ಹಿಂದೆ ನಾನು ಆರ್ಸಿಬಿಗೆ ನಾಯಕನಾಗಿದ್ದೆ. ಈ ಬಾರಿ ಯಾರೇ ಗೆದ್ದರೂ ಹೊಸಬರು ಗೆಲುವು ಸಾಧಿಸುತ್ತಾರೆ. ವಿರಾಟ್ ಕೊಹ್ಲಿ ಚೆನ್ನಾಗಿ ಆಡುತ್ತಿದ್ದಾರೆ. ಆರ್ಸಿಬಿ ಗೆಲ್ಲುವ ಸಾಧ್ಯತೆ ಇದೆ ಎಂದಿದ್ದಾರೆ.